ನ್ಯಾಯಬೆಲೆ ಅಂಗಡಿಯ ಪಡಿತರ ಗೋಧಿಯಲ್ಲಿ “ಗುಗ್ಗುರು’…!
Team Udayavani, Feb 24, 2017, 1:54 PM IST
ಪುತ್ತೂರು: ಸರಕಾರಿ ನ್ಯಾಯ ಬೆಲೆ ಅಂಗಡಿಯೊಂದರಲ್ಲಿ ಪಡಿತರ ಚೀಟಿದಾರ ಗ್ರಾಹಕರೊಬ್ಬರಿಗೆ ಶುಕ್ರವಾರ ಗುಗ್ಗುರು ತುಂಬಿಕೊಂಡಿರುವ ಕಳಪೆ ಮಟ್ಟದ ಗೋಧಿಯನ್ನು ವಿತರಿಸಲಾಗಿದ್ದು, ಗ್ರಾಹಕ ಕಂದಾಯ ಇಲಾಖೆಯ ಆಹಾರ ಸರಬರಾಜು ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ನಗರದ ಹೊರವಲಯದ ಕೆಮ್ಮಿಂಜೆ ಟಿಎಪಿಸಿಎಂಎಸ್ ಬಳಿ ಇರುವ ಸರಕಾರಿ ನ್ಯಾಯ ಬೆಲೆ ಅಂಗಡಿಯಿಂದ ಗುರುವಾರ ಪಡಿತರ ಚೀಟಿದಾರ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ನಿವಾಸಿ ಗಣೇಶ್ ಹೆಗ್ಡೆ ಅವರು 5 ಕೆಜಿ ಗೋಧಿಯನ್ನು ಖರೀದಿಸಿದ್ದರು.ಮನೆಗೆ ಬಂದು ಗೋಧಿಯನ್ನು ಪರಿಶೀಲಿಸಿದಾಗ ಗುಗ್ಗುರು ತುಂಬಿಕೊಂಡಿತ್ತು. ಗೋಧಿ ತೀರಾ ಕಳಪೆ ಮಟ್ಟದ್ದಾಗಿದ್ದ ಹಿನ್ನೆಲೆಯಲ್ಲಿ ಗಣೇಶ್ ಹೆಗ್ಡೆ ಅವರು ಗೋಧಿ ಸಹಿತವಾಗಿ ನಗರದ ಮಿನಿ ವಿಧಾನಸೌಧದಲ್ಲಿನ ಆಹಾರ ಸರಬರಾಜು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ನ್ಯಾಯ ಬೆಲೆ ಅಂಗಡಿಯಲ್ಲಿ ವಿತರಿಸ ಲಾಗಿದ್ದ ಗೋಧಿಯನ್ನು ಪರಿಶೀಲಿಸಿ ಕಳಪೆ ಮಟ್ಟದ್ದಾಗಿದೆ ಎಂದು ಖಚಿತಪಡಿಸಿಕೊಂಡ ಆಹಾರ ವಿಭಾಗದ ಅಧಿಕಾರಿಗಳು ಆ ಗೋಧಿಯನ್ನು ನ್ಯಾಯಬೆಲೆ ಅಂಗಡಿಗೆ ಹಿಂದಿರುಗಿಸುವಂತೆ ಗಣೇಶ್ ಹೆಗ್ಡೆ ಅವರಿಗೆ ಸೂಚಿಸಿದ್ದಾರೆ. ನ್ಯಾಯ ಬೆಲೆ ಅಂಗಡಿಗಳಲ್ಲಿ ಉಳಿಕೆಯಾಗಿಕೊಂಡು ಬರುವ ಆಹಾರ ಸಾಮಗ್ರಿಗಳನ್ನು ಹಾಗೆಯೇ ದಾಸ್ತಾನು ಇರಿಸಲಾಗುತ್ತಿದ್ದು, ಇದರ ಪರಿಣಾಮ ಆಹಾರ ಸಾಮಾಗ್ರಿಗಳು ಹಾಳಾಗುತ್ತಿವೆ ಎಂದು ಕೆಲ ಗ್ರಾಹಕರು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್