50 ಮಿಲಿಗ್ರಾಂ ಚಿನ್ನದಲ್ಲಿ ವಿಶ್ವಕಪ್ ಪ್ರತಿಕೃತಿ! ಮೂಡುಬಿದಿರೆಯ ಸ್ವರ್ಣಶಿಲ್ಪಿಯ ಕೌಶಲ


Team Udayavani, Nov 18, 2023, 3:34 PM IST

50 ಮಿಲಿಗ್ರಾಂ ಚಿನ್ನದಲ್ಲಿ ವಿಶ್ವಕಪ್ ಪ್ರತಿಕೃತಿ! ಮೂಡುಬಿದಿರೆಯ ಸ್ವರ್ಣಶಿಲ್ಪಿಯ ಕೌಶಲ

ಮೂಡುಬಿದಿರೆ: ಈಗ ಎಲ್ಲೆಡೆ ವಿಶ್ವ ಕಪ್ 13ರದೇ ಹವಾ. ಮೂಡುಬಿದಿರೆ ದೊಡ್ಮನೆ ರಸ್ತೆ ವಠಾರದಲ್ಲಿ ಸ್ವರ್ಣ ಶಿಲ್ಪಿಯಾಗಿರುವ ವೇಣೂರು ಕುಂಡದಬೆಟ್ಟು ಸತೀಶ ಆಚಾರ್ಯರ ಕ್ರಿಕೆಟ್ ಪ್ರೇಮದಿಂದಾಗಿ ಬರೇ 50 ಮಿಲಿಗ್ರಾಂ ಚಿನ್ನದಲ್ಲಿ ವಿಶ್ವಕಪ್ ಮೂಡಿಬಂದಿದೆ.

ಕೇವಲ 50 ಮಿಲಿಗ್ರಾಂ, 24 ಕ್ಯಾರೆಟ್, 916 ಹಾಲ್ಲೋ ಮಾರ್ಕ್ ನ 1.1ಇಂಚು ಎತ್ತರದ ಈ ವಿಶ್ವಕಪ್ ಪ್ರತಿಕೃತಿ ಸತೀಶ ಆಚಾರ್ಯರ ಲೇಟೆಸ್ಟ್ ಸ್ವರ್ಣ ಶಿಲ್ಪ.

ಕಳೆದ 24 ವರ್ಷಗಳಿಂದ ಚಿನ್ನದ ಕೆಲಸ ಮಾಡುತ್ತಿರುವ ಈಗ 34ರ ಹರೆಯದ ಸತೀಶ ಆಚಾರ್ಯರು ಇದುವರೆಗೆ ನಾಲ್ಕು ವಿಶ್ವಕಪ್ ಗಳ ಮಿನಿ ಪ್ರತಿಕೃತಿ ತಯಾರಿಸಿದ್ದಾರೆ.

2007ರಲ್ಲಿ ಟಿ-20 ವಿಶ್ವಕಪ್ ಸಂದರ್ಭ 1 ಗ್ರಾಂ 200 ಮಿಲಿಗ್ರಾಂ ಚಿನ್ನ ಬಳಸಿ ವಿಶ್ವಕಪ್ ನಿರ್ಮಿಸಿ ಸುದ್ದಿಯಾಗಿದ್ದ ಅವರು 2011ರಲ್ಲಿ 3 ಗ್ರಾಂ ಬೆಳ್ಳಿಯಲ್ಲಿ 2 ಇಂಚು ಎತ್ತರದ ವಿಶ್ವಕಪ್ ತಯಾರಿಸಿ ಮತ್ತೆ ಅಸಕ್ತರ ಗಮನ ಸೆಳೆದಿದ್ದರು.

2013ರಲ್ಲಿ ಚಾಂಪಿಯನ್ ಶಿಪ್ ಟ್ರೋಫಿಯನ್ನು 500 ಮಿಲಿಗ್ರಾಂ ಚಿನ್ನದಲ್ಲಿ 1 ಇಂಚು ಎತ್ತರದ ಟ್ರೋಫಿ ತಯಾರಿಸಿ ತನ್ನ ಕೌಶಲ ಮೆರೆದಿದ್ದ ಸತೀಶ್ ಆಚಾರ್ಯರು ಇದೀಗ ಹತ್ತು ವರ್ಷಗಳ ಬಳಿಕ ಮಗದೊಮ್ಮೆ ತನ್ನ ಕ್ರಿಕೆಟ್ ಪ್ರೇಮವನ್ನು ಸುವರ್ಣ ಮಾಧ್ಯಮದಲ್ಲಿ ಅಭಿವ್ಯಕ್ತಿಸಿದ್ದಾರೆ.

ತಾನು ಈ ಹಿಂದೆ ಮೂರು ಮಿನಿ ಕಪ್ ಗಳನ್ನು ರಚಿಸಿದ್ದಾಗಲೆಲ್ಲ ಭಾರತ ಪದಕ ಗೆದ್ದಿದೆ. ಈ ಬಾರಿ ತನ್ನ ತಾಯಿ ರತ್ನ ಅವರ ಸ್ಮರಣೆಯೊಂದಿಗೆ ಬಂಗಾರದ ಮಿನಿ ವಿಶ್ವಕಪ್ ನಿರ್ಮಿದ್ದೇನೆ ಎಂದು ಗದ್ಗದಿತರಾಗಿ ನುಡಿದ ಸತೀಶ್ ಈ ಹಿಂದಿನ ಮೂರು ಸಂದರ್ಭಗಳಲ್ಲಿ ತಾನು ಕೂಟ ನಡೆಯುವ ಮುನ್ನವೇ ಮಿನಿ ಕಪ್ ತಯಾರಿಸಿ ಕಪ್ ಗೆಲ್ಲಲು ಮುನ್ನುಡಿ ಬರೆದಿದ್ದೆ. ಈ ಬಾರಿಯೂ ಭಾರತ್ ವಿಶ್ವಕಪ್ ಗೆಲ್ಲುವ ನಿರೀಕ್ಷೆ ತನ್ನದು ಎಂದರು.

ಶಿವಮೊಗ್ಗದವರೊಬ್ಬರು 70 ಮಿಲಿಗ್ರಾಂ ನಲ್ಲಿ ಕಪ್ ಮಾಡಿದ ಸುದ್ದಿ ಗೊತ್ತು. ನಾನು 60 ಮಿಲಿಗ್ರಾಂ ನಲ್ಲಿ ಮಾಡಿದರೆ ಹೇಗೆ ಅಂತ ಆರಂಭಿಸಿದೆ. ಕೊನೆಗೆ 50 ಮಿಲಿಗ್ರಾಂ ಚಿನ್ನದಲ್ಲಿಯೇ ಮಾಡಿ ಮುಗಿಸಿದೆ. ಇನ್ನು 20 ಮಿಲಿಗ್ರಾಂ ನಲ್ಲಿ ವಿಶ್ವಕಪ್ ಮಾಡಬೇಕೆಂದಿದ್ದೇನೆ ಎನ್ನುತ್ತಾರೆ ಸತೀಶ್ ಆಚಾರ್ಯ.

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.