ನೌಕರರಿಗೆ ಸಾಮಾಜಿಕ ಬಾಧ್ಯತೆ-ಬದ್ಧತೆ ಅಗತ್ಯ
ಎನ್.ಟಿ. ಎರ್ರಿಸ್ವಾಮಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿ ಇನ್ನೂ ಹೆಚ್ಚಿನ ಸಮಾಜಮುಖೀ ಕೆಲಸಗಳನ್ನು ಮಾಡಲಿ
Team Udayavani, Jul 1, 2019, 3:47 PM IST
ದಾವಣಗೆರೆ: ಎನ್.ಟಿ. ಎರ್ರಿಸ್ವಾಮಿ ಅಭಿನಂದನಾ ಗ್ರಂಥ ತೊರೆಸಾಲ-ನೊರೆಹಾಲು ಬಿಡುಗಡೆ ಸಂದರ್ಭ.
ದಾವಣಗೆರೆ: ಸರ್ಕಾರಿ, ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವರು ಸದಾ ಸಮಾಜಮುಖೀಗಳಾಗಿ ಒಳ್ಳೆಯ ಕೆಲಸ ಮಾಡಬೇಕು ಎಂದು ಜಾನಪದ ತಜ್ಞ ಡಾ| ಎಂ.ಜಿ. ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ಸೇವಾ ನಿವೃತ್ತಿ ಹೊಂದಿದ ಲೀಡ್ ಬ್ಯಾಂಕ್ ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕ ಎನ್.ಟಿ. ಎರ್ರಿಸ್ವಾಮಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಮತ್ತು ತೊರೆಸಾಲ-ನೊರೆಹಾಲು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಇಲ್ಲವೇ ಖಾಸಗಿ ಸಂಸ್ಥೆಗಳ ಮೂಲಕ ವೇತನ ಪಡೆಯುವಂತಹವರು ಸಾಮಾಜಿಕ ಬಾಧ್ಯತೆ ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು ಎಂದರು.
ಸರ್ಕಾರಿ ಸೇವೆಯಲ್ಲಿ ಇದ್ದಾಗ ಬರುವಂತಹ ಸಾರ್ವಜನಿಕರೊಂದಿಗೆ ಚೆನ್ನಾಗಿ ಮಾತನಾಡಿ ಅವರ ಕೆಲಸ ಮಾಡಿಕೊಡುವಂತಹ ಬದ್ಧತೆ ತೋರಬೇಕು. ಅಧಿಕಾರಿ, ಸಿಬ್ಬಂದಿ ಸಮಾಜಮುಖೀ ಚಿಂತನೆಯೊಂದಿಗೆ ಕೆಲಸ ಮಾಡಿದಲ್ಲಿ ನಿವೃತ್ತಿ ನಂತರವೂ ಸಮಾಜದಲ್ಲಿ ಒಳ್ಳೆಯ ಮನ್ನಣೆ, ಗೌರವ ದೊರೆಯುತ್ತದೆ ಎಂಬುದಕ್ಕೆ ಎನ್.ಟಿ. ಎರ್ರಿಸ್ವಾಮಿಯವರೇ ಸಾಕ್ಷಿ ಎಂದು ತಿಳಿಸಿದರು.
ಯಾವುದೇ ಕೆಲಸದಲ್ಲಿ ಇದ್ದಾಗ ಸಾರ್ವಜನಿಕರೊಟ್ಟಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕೆಲಸ ಮಾಡಿಕೊಡದೇ ಹೋದಲ್ಲಿ ನಿವೃತ್ತಿ ನಂತರ ಎದುರಿಗೆ ಬಂದರೂ ಯಾರೂ ಗೌರವ ನೀಡುವುದಿಲ್ಲ. ಆಗ ಬಳಸುವಂತಹ ಭಾಷೆ, ಪದಗಳೇ ಬೇರೆ ರೀತಿಯದ್ದಾಗಿರುತ್ತವೆ ಎಂದು ಸೂಚ್ಯವಾಗಿ ಹೇಳಿದರು.
ಜಗಳೂರು ತಾಲೂಕಿನ ಸಣ್ಣ ಗ್ರಾಮದಲ್ಲಿ ಜನಿಸಿರುವ ಎನ್.ಟಿ. ಎರ್ರಿಸ್ವಾಮಿ ಬ್ಯಾಂಕ್ ಅಧಿಕಾರಿಯಾಗಿ ಹಲವಾರು ರೈತರು, ಮಹಿಳೆಯರಿಗೆ ಒಂದಲ್ಲ ಒಂದು ರೀತಿಯ ಸಹಾಯ ಮಾಡಿದ್ದಾರೆ. ಎಲ್ಲಿ ಕಷ್ಟ ಇರುತ್ತೆಯೋ ಅಲ್ಲಿ ಒಳ್ಳೆಯ ಸಾಹಿತ್ಯ, ಸಂಸ್ಕೃತಿ ಹೊರ ಹೊಮ್ಮುತ್ತದೆ ಎನ್ನುವುದಕ್ಕೆ ನಿದರ್ಶನದಂತೆ ಎರ್ರಿಸ್ವಾಮಿ ಕೆಲಸ ಮಾಡಿದ್ದಾರೆ. ನಿವೃತ್ತ ಜೀವನದಲ್ಲಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಇನ್ನೂ ಹೆಚ್ಚಿನ ಸಮಾಜಮುಖೀಯಾಗಿ ಕೆಲಸ ಮಾಡಲಿ ಎಂದು ಆಶಿಸಿದರು.
ಖ್ಯಾತ ಹಾಸ್ಯ ವಾಗ್ಮಿ ವೈ.ವಿ. ಗುಂಡುರಾವ್ ಮಾತನಾಡಿ, ಎನ್.ಟಿ. ಎರ್ರಿಸ್ವಾಮಿ ಸಂಸ್ಕಾರ, ಸಂಸ್ಥೆ ಮತ್ತು ಸಮಾಜದ ಕಾರ್ಯ ಸಾಕಾರಗೊಳಿಸಿದ್ದಾರೆ. ಕೆನರಾ ಬ್ಯಾಂಕ್ನ ವಿಭಾಗೀಯ ಪ್ರಬಂಧಕರಾಗಿದ್ದರೂ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ. ಗ್ರಾಮೀಣಾಭಿವೃದ್ಧಿ, ಸ್ವಯಂ ಉದ್ಯೋಗ ತರಬೇತಿ ಕೇಂದ್ರಗಳ ಮೂಲಕ ಗ್ರಾಮೀಣ ಭಾಗದ ಜನರು, ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸ್ವಾವಲಂಬನೆಗೆ ಕಾರಣಕರ್ತರಾಗಿದ್ದಾರೆ. ಇಂದಿಗೂ ಅನೇಕರ ಮನೆಯಲ್ಲಿ ಅವರ ಫೋಟೋ ಇರುವುದು ಅವರ ಮಾಡಿರುವ ಒಳ್ಳೆಯ ಕೆಲಸದ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದ ಖ್ಯಾತ ಸಾಹಿತಿ ಬಿ.ಎಲ್. ವೇಣು ಮಾತನಾಡಿ, ಹಿಂದೆ ಬ್ಯಾಂಕ್ ಅಧಿಕಾರಿಗಳು ಎಂದರೆ ಸಾಕಷ್ಟು ಗೌರವ ಇತ್ತು. ಈಗ ಕೆಲವಾರು ಬ್ಯಾಂಕ್ ಅಧಿಕಾರಿಗಳು ಜನರೊಂದಿಗೆ ಸರಿಯಾಗಿ ಸ್ಪಂದಿಸುವುದೇ ಇಲ್ಲ. ಮುಖ ಕೊಟ್ಟು ಮಾತನಾಡುವುದೂ ಇಲ್ಲ. ಬರೀ ಕಂಪ್ಯೂಟರ್ನಲ್ಲೇ ಮುಳುಗಿ ಹೋಗಿರುತ್ತಾರೆ. ನಮ್ಮ ಹಣವನ್ನು ನಮಗೆ ಕೊಡಲಿಕ್ಕೆ ಇಲ್ಲ ಸಲ್ಲದ ಕಾನೂನು, ಸಬೂಬು ಹೇಳುತ್ತಾರೆ. ಮುಂದೆ ನಾವು ಬ್ಯಾಂಕ್ನಲ್ಲಿಡುವ ಹಣಕ್ಕೆ ನಾವೇ ಬಡ್ಡಿ ಕಟ್ಟುವ ಕಾಲ ಬರಬಹುದು. ಅಂತಹವರ ನಡುವೆಯೂ ಎನ್.ಟಿ. ಎರ್ರಿಸ್ವಾಮಿಯವರಂತಹ ಅಪರೂಪದ ವ್ಯಕ್ತಿಗಳು ಇದ್ದಾರೆ ಎಂಬುದು ಸಂತೋಷದ ವಿಷಯ ಎಂದರು.
ಎನ್.ಟಿ. ಎರ್ರಿಸ್ವಾಮಿ ಅಭಿನಂದನಾ ಬಳಗದ ಜಿ.ಎಸ್. ಸುಭಾಶ್ಚಂದ್ರಬೋಸ್ ಪ್ರಾಸ್ತಾವಿಕ ಮಾತುಗಳಾಡಿದರು. ಜಗಳೂರು ಶಾಸಕ ಎಸ್. ವಿ. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಎಚ್.ಎಸ್. ಮಂಜುನಾಥ್ ಕುರ್ಕಿ, ಎಂ. ಬಸವಪ್ಪ, ಎಸ್.ಆರ್. ಶ್ರೀನಿವಾಸಮೂರ್ತಿ, ಜಿ.ಬಿ.ಟಿ. ಮೋಹನ್ಕುಮಾರ್, ಎಚ್. ರಘುರಾಜ್, ಹುಸೇನ್ಮಿಯಾ ಸಾಬ್, ಬಿ. ದೇವೇಂದ್ರಪ್ಪ, ಓ.ಬಿ. ಕಲ್ಲೇಶಪ್ಪ ಹಾಗೂ ಎನ್.ಟಿ. ಎರ್ರಿಸ್ವಾಮಿ, ಸಾವಿತ್ರಿ ಎರ್ರಿಸ್ವಾಮಿ ಇದ್ದರು.
ಎಂ.ಡಿ. ಆಂಜನೇಯ ಸಂಗಡಿಗರು ಪ್ರಾರ್ಥಿಸಿದರು. ಡಿ.ಸಿ. ಮಲ್ಲಿಕಾರ್ಜುನ್ ಸ್ವಾಗತಿಸಿದರು. ಸಂಧ್ಯಾ ಸುರೇಶ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್