“ಅಷ್ಟಮಂಗಲ’ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ: ಗಿರಿಸಿದ್ದೇಶ್ವರ ಶ್ರೀ
ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ 64 ವೀರಶೈವ ಮಠಗಳಿದ್ದವು.; ಮಳಲಿ ವಿವಾದದಲ್ಲಿ ಸರಕಾರ ಮಧ್ಯ ಪ್ರವೇಶ ಮಾಡಲಿ
Team Udayavani, May 30, 2022, 12:45 AM IST
ಹೊನ್ನಾಳಿ: ಅಷ್ಟಮಂಗಲ ಪ್ರಶ್ನೆಯನ್ನು ಟೀಕಿಸುವ ಹಾಗೂ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಅಷ್ಟಮಂಗಲ ಪ್ರಶ್ನೆ ಕೇಳುವುದು ಹಿಂದೂಗಳಾದ ನಮ್ಮ ಧಾರ್ಮಿಕ ಹಕ್ಕಿನ ಬಗ್ಗೆ ಮಂಗಳೂರು ಹಾಗೂ ಉಡುಪಿಯ ಜನರಿಗೆ ಬಹಳ ಭಕ್ತಿ ಹಾಗೂ ಗೌರವವಿದೆ ಎಂದು ತಾಲೂಕಿನ ಹೊಟ್ಯಾಪುರ ಮಠ ಹಾಗೂ ಮಂಗಳೂರಿನ ಬಸವನಗುಡಿ ಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವಿಚಾರವನ್ನು ತಮ್ಮ ಅಧಿಕಾರಕ್ಕಾಗಿ ಟೀಕಿಸುವುದು, ಹಿಂದೂ ಧರ್ಮವನ್ನು ಒಡೆಯುವ ಕೆಲಸವನ್ನು ಯಾವ ರಾಜಕಾರಣಿಯೂ ಮಾಡಬಾರದು. ಬೇರೆಯವರು ಬಂದು ನಮ್ಮ ಮನೆಗೆ ಬೀಗ ಹಾಕಿದರೆ ಸುಮ್ಮನಿರಬೇಕೆ? ದೇಶದ ವಿವಿಧ ಕಡೆಗಳಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿ ಕಟ್ಟಿದ್ದಾರೆ. ಇದನ್ನು ನೋಡಿಕೊಂಡು ಸುಮ್ಮನೆ ಕೂರಬೇಕೇ, ಬೇರೆಯವರು ನಮ್ಮ ಮನೆಗೆ ಬಂದು ನಮ್ಮನ್ನು ಹೊರಗೆ ಕಳುಹಿಸಿ ಬೀಗ ಹಾಕಿದರೆ ನಾವು ಸುಮ್ಮನಿರಬೇಕಾ ಎಂದು ಪ್ರಶ್ನಿಸಿದರು.
ಪುರಾತತ್ವ ಇಲಾಖೆಯಿಂದ ಉತ್ಖನನ ಮಾಡಿಸಿ
ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ 64 ವೀರಶೈವ ಮಠಗಳಿದ್ದವು. ಈಗ ಬೆರಳಣಿಕೆಯಷ್ಟು ಮಾತ್ರ ಮಠಗಳಿದ್ದು ಉಳಿದೆಲ್ಲವೂ ಬೇರೆಯವರ ಪಾಲಾಗಿವೆ. ಮಂಗಳೂರಿನ ಮಳಲಿ ಮಸೀದಿ, ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದ ಕುರಿತು ಮಾತನಾಡಿದ ಶ್ರೀಗಳು, ವಿವಾದಿತ ಮಳಲಿ ಮಸೀದಿ ಜಾಗದಲ್ಲಿ 1,500 ವರ್ಷಗಳ ಹಿಂದೆ ಶಿವ ಸಾನ್ನಿಧ್ಯ ಹಾಗೂ ಗುರುಮಠವಿತ್ತು ಎನ್ನುವ ಮಾಹಿತಿ ಇದೆ. ಸರಕಾರ ಮಧ್ಯಪ್ರವೇಶ ಮಾಡಿ ಪುರಾತತ್ವ ಇಲಾಖೆಯಿಂದ ಉತ್ಖನನ ಮಾಡಿಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದರು.
ಮಂಗಳೂರಿನ ಚಿತ್ರ ಟಾಕೀಸ್ ಬಳಿ ಮಸೀದಿ ಇದೆ. ಅದರ ಎದುರು ಮುರ್ಗಿಮಠ ಕಾಂಪೌಂಡ್ ಇದೆ. ಇಲ್ಲಿಯೂ ಸಹ ಜಂಗಮ ಮಠ ಇತ್ತು ಎಂದು ಹೇಳಲಾಗುತ್ತಿದೆ. ಆದರೆ ದಾಖಲೆಗಳನ್ನು ತೆಗೆಯಬೇಕಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು