ಸೈದ್ಧಾಂತಿಕ ಭಿನ್ನಾಭಿಪ್ರಾಯದ ಚರ್ಚೆ ನಡೆಯಲಿ: ಶಾಸಕ ಯು.ಟಿ. ಖಾದರ್
Team Udayavani, Aug 21, 2022, 11:45 PM IST
ದಾವಣಗೆರೆ: ಸಾವರ್ಕರ್ ಬಗ್ಗೆ ಇರುವಂತಹ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ 14 ವರ್ಷ ಅಂಡಮಾನ್ ಜೈಲಿನಲ್ಲಿದ್ದರು ಎಂಬುದು ಗೊತ್ತಿರುವ ವಿಚಾರ. ಆದರೆ ಅವರೊಟ್ಟಿಗೆ 500-600 ಜನರಿದ್ದರು. ಅವರಲ್ಲಿ ಕೆಲವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಕೆಲವರು ಲಾಠಿ ಏಠಿಗೆ ಬಲಿಯಾದರು. ಸಾವರ್ಕರ್ ಅವರು ನನ್ನನ್ನು ಬಿಟ್ಟು ಬಿಡಿ ಎಂದು 10 ಬಾರಿ ಕ್ಷಮಾಪಣೆ ಪತ್ರ ಬರೆದ ದಾಖಲೆಗಳಿವೆ.
ನೇಣು, ಲಾಠಿ, ಗುಂಡಿಗೆ ಬಲಿಯಾದವರನ್ನು ಹುತಾತ್ಮರೆಂದು ಹೇಳಬೇಕಾ ಅಥವಾ ಕ್ಷಮಾಪಣೆ ಕೇಳಿ ಹೊರಬಂದವರನ್ನು ಹುತಾತ್ಮರು ಎನ್ನಬೇಕಾ ಎಂಬ ಪ್ರಶ್ನೆ ಇದೆ.
ಹಾಗಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚೆ ನಡೆಯಬೇಕು ಎಂದರು. ಸಾವರ್ಕರ್ ಅವರದ್ದು ಮಾತ್ರವಲ್ಲ, ಯಾವುದೇ ಫ್ಲೆಕ್ಸ್ ಅನ್ನು ಯಾರು ಹರಿದರೂ ತಪ್ಪೇ. ಧಾರ್ಮಿಕ ವಿಚಾರಗಳನ್ನು ಧಾರ್ಮಿಕ ಮುಖಂಡರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು