ಕಿಮ್ಸ್ ಶವಾಗಾರದಿಂದ ಚಂದ್ರಶೇಖರ ಗುರೂಜಿ ಮೃತದೇಹ ರವಾನೆ : ಮುಗಿಲು ಮುಟ್ಟಿದ ಆಕ್ರಂದನ
ಕೆಲವೇ ಕ್ಷಣಗಳಲ್ಲಿ ನೆರವೇರಲಿದೆ ಅಂತ್ಯಕ್ರಿಯೆ
Team Udayavani, Jul 6, 2022, 2:45 PM IST
ಹುಬ್ಬಳ್ಳಿ: ಗುರೂಜಿ ಶವ ಪರೀಕ್ಷೆ ಮುಕ್ತಾಯಗೊಂಡಿದ್ದು, ಮೃತದೇಹವನ್ನು ಕಿಮ್ಸ್ ಶವಾಗಾರದಿಂದ ಗುರೂಜಿ ಜಮೀನಿಗೆ ತರಲಾಗುತ್ತಿದೆ.
ಗುರೂಜಿ ಮೃತದೇಹ ನೋಡುತ್ತಿದ್ದಂತೆ ಕುಟುಂಬದವರು ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ವೇಳೆ ವೈದಿಕರು ಪೂಜೆ ನೆರವೇರಿಸಿದರು. ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಂತಿಮ ದರ್ಶನ ಪಡೆದರು.
ಗುರೂಜಿ ಪಾರ್ಥೀವ ಶರೀರವನ್ನು ವೈಕುಂಠ ರಥ ವಾಹನದ ಮೂಲಕ ಮೆರವಣಿಗೆ ಮೂಲಕ ಕೇಶ್ವಾಪುರ ಸುಳ್ಳ ರಸ್ತೆಯ ಗುರೂಜಿ ಜಮೀನಿಗೆ ರವಾನಿಸಲಾಯಿತು. ಕೆಲವೇ ಕ್ಷಣಗಳಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.