ಕೈ-ಕಮಲ ತೆರೆಮರೆ ರಾಜಕೀಯ

ಅನುಕೂಲಕ್ಕೆ ಕ್ಷೇತ್ರ ರಚನೆ, ಕಮಲದ ಮೇಲೆ ಕೈ-ದಳ ಆರೋಪ

Team Udayavani, Apr 6, 2021, 3:57 PM IST

ಕೈ-ಕಮಲ ತೆರೆ ಮರೆ ರಾಜಕೀಯ

ಧಾರವಾಡ: ಒಂದು ಗ್ರಾಮ ಪಂಚಾಯಿತಿಯೇ ಇದೀಗ ತಾಲೂಕು ಪಂಚಾಯಿತಿಯೂ ಹೌದು. ಒಂದು ತಾಪಂ ಇದೀಗ ಹೊಸ ಜಿಲ್ಲಾಪಂಚಾಯಿತಿ ಕ್ಷೇತ್ರವೂ ಹೌದು. ಕೇವಲ900 ಮತಗಳಿದ್ದರೂ ತಾಪಂ, ಹಾಗೆಯೇ 17 ಸಾವಿರ ಮತಗಳಿದ್ದರೂ ತಾಪಂ. ಒಟ್ಟಿನಲ್ಲಿ ಯಾವ ಮಾನದಂಡವೋ ಗೊತ್ತಿಲ್ಲ.ಜಿಲ್ಲೆಯಲ್ಲಿ ನೂತನ ತಾಪಂ ಮತ್ತು ಜಿಪಂ ಕ್ಷೇತ್ರಗಳರಚನೆಯಾಗಿದ್ದು, ಗ್ರಾಮೀಣಅಖಾಡಾದ ಮ್ಯೂಜಿಕಲ್‌ಚೇರ್‌ ಆಟ ಕೊನೆ ಹಂತಕ್ಕೆ ಬಂದಂತಾಗಿದೆ.

ಹೌದು. ಕೈ-ಕಮಲಪಾಳೆಯದ ಮಧ್ಯೆಭೀಕರ ರಣ ಕಾಳಗಕ್ಕೆಕಾರಣವಾಗಿ, ಜಿಲ್ಲೆಯಮಾಜಿ ಸಚಿವರು ಮತ್ತು ಹಾಲಿಸಂಸದರ ಮಧ್ಯೆ ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ಧಾರವಾಡ ಜಿಪಂ ಕ್ಷೇತ್ರಗಳ ಪುನರ್‌ವಿಂಗಡಣೆಯಾಗಿದ್ದು, ಇದೀಗ 22ರ ಬದಲು 27ಕ್ಷೇತ್ರಗಳು ರಚನೆಯಾಗಿವೆ.

ಕೈ ಭದ್ರಕೋಟೆಯಾಗಿದ್ದ ಜಿಲ್ಲಾ ಪರಿಷತ್ತು ಜಿಪಂ ಆದಾಗಿನಿಂದಲೂ ಬಿಜೆಪಿ ಪ್ರಾಬಲ್ಯ ಬೆಳೆದು ಕಮಲ ಪಡೆಯ ಭದ್ರಕೋಟೆಯೇ ಆಗಿದ್ದ ಧಾರವಾಡ ಜಿಪಂಆಪರೇಷನ್‌ ಹಸ್ತದಿಂದ ಸದ್ಯಕ್ಕೆ ಕೈ ವಶದಲ್ಲಿದೆ. ಈ ಬಾರಿಶತಾಯ ಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವಕಮಲ ಪಾಳೆಯ 27 ಕ್ಷೇತ್ರಗಳಲ್ಲಿ ಈಗಾಗಲೇ ತನ್ನ ಹುರಿಯಾಳುಗಳನ್ನು ತೆರೆಯಲ್ಲೇ ಸಜ್ಜುಗೊಳಿಸಿದೆ. ಆದರೆ ಈ ಕ್ಷೇತ್ರ ಪುನರ್‌ ವಿಂಗಡನೆಯಲ್ಲಿಯೇ ಬಿಜೆಪಿ ತಂತ್ರಗಾರಿಕೆ ಮಾಡಿದೆ ಎಂದು ಕಾಂಗ್ರೆಸ್‌ಆರೋಪಿಸುತ್ತಿದ್ದು, ಇದಕ್ಕೆ ಬಿಜೆಪಿ ಕೂಡ ತಿರುಗೇಟು ನೀಡಲು ಸಜ್ಜಾಗಿದೆ.

ತೆರೆಮರೆಯಲ್ಲೇ ಬಾಲ ಕಟ್‌?: ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಳೆದ ಬಾರಿ ಬಿಜೆಪಿ ಮತ್ತುಕಾಂಗ್ರೆಸ್‌ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿತ್ತು.ಬಿಜೆಪಿಯ ಭದ್ರಕೋಟೆಗೆ ಲಗ್ಗೆ ಹಾಕಿದ್ದ ಕೈ ಕೆಲವುಕ್ಷೇತ್ರಗಳನ್ನು ಪುನರ್‌ ವಿಂಗಡನೆ ಮಾಡಿ ಹಳ್ಳಿಗಳಸೇರ್ಪಡೆ ಮತ್ತು ತೆಗೆದು ಹಾಕುವಿಕೆಯನ್ನು ಸದ್ದಿಲ್ಲದೇಮಾಡಿತ್ತು. ತಮ್ಮ ಪ್ರಾಬಲ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿಕೈ ಕೊಂಚ ಆಟ ಆಡಿದ್ದು ಸತ್ಯವೇ. ಅತೀ ಹೆಚ್ಚುಸ್ಥಾನಗಳನ್ನು ಗೆಲ್ಲುವ ಬರದಲ್ಲಿ ಕೆಲವಷ್ಟು ಗ್ರಾಪಂಗಳನ್ನುಅವೈಜ್ಞಾನಿಕವಾಗಿ ಒಗ್ಗೂಡಿಸಿ ತಾಪಂ ಕ್ಷೇತ್ರಗಳನ್ನು ರಚಿಸಿತ್ತು.

ಒಂದು ಕ್ಷೇತ್ರ ರಚನೆಗೆ ಅಕ್ಕಪಕ್ಕದ ಗ್ರಾಪಂಗಳನ್ನುಸೇರ್ಪಡೆ ಮಾಡಿಕೊಳ್ಳುವುದು ನಿಯಮ. ಆದರೆ ಈನಿಯಮಗಳನ್ನು ಗಾಳಿಗೆ ತೂರಿ ತಮಗೆ ಮನಬಂದಂತೆಕ್ಷೇತ್ರ ರಚಿಸಿತ್ತು. ಇದೀಗ ಬಿಜೆಪಿಗರು ಇದೇ ದಾರಿಯಲ್ಲಿ ನಡೆಯುತ್ತಿದ್ದು, ತಮ್ಮ ಪ್ರಾಬಲ್ಯವಿರುವ ಗ್ರಾಪಂಗಳನ್ನುಒಟ್ಟಿಗೆ ಸೇರಿಸಿಕೊಂಡಿದ್ದಾರೆ. ಅಷ್ಟೇಯಲ್ಲ, ಕಾಂಗ್ರೆಸ್‌ಮತಕೋಟೆಗಳನ್ನು ವಿಭಜಿಸಿ ಬಿಜೆಪಿ ಪ್ರಾಬಲ್ಯದಕ್ಷೇತ್ರಗಳಿಗೆ ಸೇರ್ಪಡೆಗೊಳಿಸುವ ಮೂಲಕ ಕೈಗೆಮಾರ್ಮಾಘಾತ ನೀಡಿದ್ದು, ಆಯಾ ವಿಧಾನಸಭಾವಾರುಜಿಪಂ ಮತ್ತು ತಾಪಂ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳನ್ನುಗೆಲ್ಲುವುದಕ್ಕೆ ಸ್ಕೆಚ್‌ ಸಿದ್ಧಗೊಳಿಸಿಕೊಂಡಿದ್ದಾರೆ.ಗ್ರಾಪಂಗಳೇ ತಾಪಂ ಕ್ಷೇತ್ರಗಳೂ: ಜನಸಂಖ್ಯೆ ದೃಷ್ಟಿಯಿಂದಲೂ ಸಮಾನವಾಗಿ ಕ್ಷೇತ್ರಗಳ ಪುನರ್‌ ವಿಂಗಡಣೆಯಾಗಿಲ್ಲ. ಕೆಲವಷ್ಟು ಕ್ಷೇತ್ರಗಳಲ್ಲಿ ಅತೀಕಡಿಮೆ ಜನಸಂಖ್ಯೆ ಇದ್ದರೆ, ಇನ್ನೂ ಕೆಲವಷ್ಟು ಕ್ಷೇತ್ರಗಳಲ್ಲಿ ಹೆಚ್ಚು ಜನಸಂಖ್ಯೆ ಇದೆ. ಇದು ಅಭಿವೃದ್ಧಿಕಾರ್ಯಗಳ ದೃಷ್ಟಿಯಿಂದ ಮತ್ತು ಹಣಕಾಸುಲಭ್ಯತೆ ವಿಚಾರದಲ್ಲಿ ತೀವ್ರ ತಾರತಮ್ಯವಾಗುತ್ತದೆ ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ.

ತಾಪಂ ಕ್ಷೇತ್ರಗಳ ಪೈಕಿ ಅಣ್ಣಿಗೇರಿ ನೂತನತಾಲೂಕಿನಲ್ಲಿ ರಚನೆಯಾಗಿರುವ 11 ತಾಪಂಕ್ಷೇತ್ರಗಳ ಮತದಾರರ ಸಂಖ್ಯೆ ಸರಾಸರಿ ಕೇವಲ3000 ಸಾವಿರಷ್ಟಿದೆ. ಶಿಶ್ವಿ‌ನಹಳ್ಳಿ ತಾಪಂ ಅತೀ ಕಡಿಮೆಜನಸಂಖ್ಯೆ ಹೊಂದಿದ್ದು ಕೇವಲ 2733 ಮತದಾರರನ್ನು ಹೊಂದಿದೆ.

ಇನ್ನು ಅಳ್ನಾವರ ತಾಲೂಕಿನ 11 ತಾಪಂ ಕ್ಷೇತ್ರಗಳಮತದಾರರ ಸಂಖ್ಯೆ ಗ್ರಾಪಂಗಿಂತಲೂ ಕಡಿಮೆಇದೆ. ಅಲ್ಲಿನ ಪ್ರತಿಯೊಂದು ಗ್ರಾಪಂಗಳು ಕೂಡತಾಪಂ ಕ್ಷೇತ್ರಗಳು ಕೂಡ ಆಗಿವೆ. ಜಿಲ್ಲೆಯಲ್ಲಿಯೇಅತೀ ಕಡಿಮೆ 956 ಮತದಾರರನ್ನು ಹೊಂದಿರುವ ಅಂಬೋಳಿ ತಾಪಂ ಕ್ಷೇತ್ರವಾಗಿ ರಚನೆಯಾಗಿದೆ. ಇನ್ನು 17228 ಮತಗಳನ್ನು ಹೊಂದಿರುವ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ತಾಪಂ ಕ್ಷೇತ್ರ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮತದಾರರಿರುವ ಕ್ಷೇತ್ರ.

ಅದರಂತೆ 16763 ಜನಸಂಖ್ಯೆಹೊಂದಿರುವ ಕುಸುಗಲ್‌ ಹಾಗೂ ಕುಂದಗೋಳತಾಪಂನಲ್ಲಿ 15525 ಮತದಾರರಿರುವ ಗುಡಗೇರಿಹಾಗೂ 15971 ಮತದಾರರಿರುವ ಇಂಗಳಗಿ ಅತೀಹೆಚ್ಚು ಮತದಾರರ ಸಂಖ್ಯೆ ಹೊಂದಿರುವ ತಾಪಂಕ್ಷೇತ್ರಗಳಾಗಿವೆ. 17 ಸಾವಿರ ಜನಸಂಖ್ಯೆ ಹೊಂದಿರುವಅದರಗುಂಚಿ ಒಂದೇ ತಾಪಂ ಕ್ಷೇತ್ರವು ಅಳ್ನಾವರ ಇಡೀತಾಪಂನ ಒಟ್ಟು ಜನಸಂಖ್ಯೆಗೆ ಸಮವಾಗಿದೆ. ಹೀಗಾಗಿಇಲ್ಲಿ ವೈಜ್ಞಾನಿಕವಾಗಿ ಮತ್ತು ಅಗತ್ಯ ಮಾನದಂಡಗಳಿಗೆಅನುಗುಣವಾಗಿ ಕ್ಷೇತ್ರ ಪುನರ್‌ ವಿಂಗಡಣೆ ಮತ್ತುಹೊಸ ಕ್ಷೇತ್ರಗಳ ಉದಯವಾಗಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.

ಬಿಜೆಪಿ ರಾಷ್ಟ್ರೀಯ ಪಕ್ಷವಾಗುವುದರಜತೆಗೆ ಪ್ರತಿ ಗ್ರಾಮದ ನಂ.1ಪಕ್ಷ ಕೂಡ ಆಗಿದೆ. ಮೊನ್ನೆ ನಡೆದ 136ಗ್ರಾಪಂ ಚುನಾವಣೆಯಲ್ಲಿ ಆಯ್ಕೆಯಾಗಿ ಅಧ್ಯಕ್ಷ-ಉಪಾಧ್ಯಕ್ಷರಾದವರ ಪೈಕಿ ಶೇ.65 ಜನಬಿಜೆಪಿಯವರೇ ಆಗಿದ್ದಾರೆ. ಹೀಗಿರುವಾಗನಾವೇಕೆ ಅಂಜುತ್ತೇವೆ. ಜಿಪಂ, ತಾಪಂಗಳಲ್ಲಿಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನಗೆಲ್ಲುತ್ತೇವೆ.  -ಬಸವರಾಜ ಕುಂದಗೋಳಮಠ, ಬಿಜೆಪಿ ಗ್ರಾ.ಜಿಲ್ಲಾಧ್ಯಕ್ಷರು.

ಬಿಜೆಪಿ ಗೆಲ್ಲುವುದಕ್ಕೆ ಅನುಕೂಲವಾಗುವಂತೆಜಿಲ್ಲೆಯಲ್ಲಿನ ಜಿಪಂ ಮತ್ತು ತಾಪಂ ಕ್ಷೇತ್ರಗಳನ್ನು ಪುನರ್‌ ವಿಂಗಡಣೆ ಮತ್ತು ಹೊಸ ಕ್ಷೇತ್ರಗಳ ರಚಿಸಲಾಗಿದೆ. ಕಾಂಗ್ರೆಸ್‌ಮತಗಳು ವಿಭಜನೆಯಾಗುವಂತೆ ಬಿಜೆಪಿಶಾಸಕರು-ಮುಖಂಡರು ತೆರೆಯ ಹಿಂದೆಯೇ ಇಲ್ಲಿ ಕೆಲಸ ಮಾಡಿದ್ದಾರೆ. ಏನೇ ಮಾಡಿದರೂ ಜಿಲ್ಲೆಯಕಾಂಗ್ರೆಸ್‌ ಅತೀ ಹೆಚ್ಚು ಜಿಪಂ ಮತ್ತು ತಾಪಂಕ್ಷೇತ್ರಗಳನ್ನು ಗೆಲ್ಲುವುದು ನಿಶ್ಚಿತ.  -ಅನೀಲಕುಮಾರ್‌ ಪಾಟೀಲ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು

ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆಯೇಕ್ಷೇತ್ರಗಳನ್ನು ರಚಿಸಿಕೊಂಡಿದ್ದಾರೆ.ಚುನಾವಣಾ ಆಯೋಗ ಇದನ್ನು ಸರಿಯಾಗಿಮಾಡಬೇಕಿತ್ತು. ಆದರೆ ಅಧಿಕಾರದುರುಪಯೋಗ ಮಾಡಿಕೊಂಡ ಅಧಿಕಾರಿಗಳು ಬಿಜೆಪಿ ಹಿತಾಸಕ್ತಿಗೆ ತಕ್ಕಂತೆ ವರ್ತಿಸುತ್ತಿದ್ದಾರೆ.ಮತದಾರರ ಸಂಖ್ಯೆ ಗಮನಿಸಬೇಕೇ ಹೊರತು,ಜಾತಿ,ಪಕ್ಷಗಳ ಮತ ಕ್ರೂಢೀಕರಣದಆಧಾರದಲ್ಲಿ ಆಗಬಾರದು.  -ಗುರುರಾಜ ಹುಣಸೀಮರದ, ಜೆಡಿಎಸ್‌ ಮುಖಂಡ.

 

-ಡಾ|ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.