Dharawad: ಬರ ದೂರ ಮಾಡಲು ಪ್ರಾರ್ಥಿಸಿ 130 ಕಿ.ಮೀ. ಚಕ್ಕಡಿ ಸೇವೆಗೈದ ರೈತ
Team Udayavani, Feb 20, 2024, 10:19 PM IST
ಧಾರವಾಡ: ಬರಗಾಲದ ಛಾಯೆ ದೂರ ಮಾಡುವಂತೆ ಪ್ರಾರ್ಥಿಸಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ರೈತ ಈರಣ್ಣ ಕರೀಕಟ್ಟಿ ಉಳವಿ ಚೆನ್ನಬಸವೇಶ್ವರ ದೇವಸ್ಥಾನಕ್ಕೆ ಚಕ್ಕಡಿ ಹೊತ್ತು ಯಾತ್ರೆ ಆರಂಭಿಸಿದ್ದಾರೆ.
ಪ್ರತಿ ವರ್ಷ ಎತ್ತಿನ ಚಕ್ಕಡಿ ಸಮೇತ ಶ್ರೀ ಉಳವಿಗೆ ಹೋಗುತ್ತಾರೆ. ಆದರೆ ಈ ಭಾರಿ ಭೀಕರ ಬರಗಾಲದ ಹಿನ್ನಲೆಯಲ್ಲಿ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸುತ್ತಾ ಹೆಗಲ ಮೇಲೆ ಚಕ್ಕಡಿ ಹೊತ್ತು ಹೆಬ್ಬಳ್ಳಿಯಿಂದ ಉಳವಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಫೆ.24 ರಂದು ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನೆರವೇರಲಿದ್ದು, ಈ ವೇಳೆ ರೈತ ಈರಣ್ಣ 80 ಕೆಜಿ ತೂಕದ ಚಕ್ಕಡಿಯನ್ನು ಹೆಗಲ ಮೇಲೆ ಹೊತ್ತು ಪಾದಯಾತ್ರೆ ಮೂಲಕ ಉಳವಿ ತಲುಪಲಿದ್ದಾರೆ. ಚೆನ್ನಬಸವೇಶ್ವರನಿಗೆ ಜಯವಾಗಲಿ…ಹರ ಹರ ಮಹಾದೇವ ಎನ್ನುತ್ತಾ ಹೆಬ್ಬಳ್ಳಿ ಗ್ರಾಮದ ಇತರ ಯುವಕರು, ಯುವ ರೈತ ಈರಣ್ಣ ಕರೀಕಟ್ಟಿ ಅವರಿಗೆ ಸಾಥ್ ನೀಡಿದ್ದಾರೆ.
ಬರಗಾಲದ ಛಾಯೆ ದೂರ ಮಾಡುವಂತೆ ಈ ರೀತಿ ಚಕ್ಕಡಿ ಹೊತ್ತು ಸಾಗಿರುವ ರೈತನ ಭಕ್ತಿ ಭಾವ ಗಮನ ಸೆಳೆದಿದೆ. ಈ ವಿಶಿಷ್ಟ ರೀತಿಯ ಪಾದಯಾತ್ರೆಯ ಮೂಲಕ ಉಳವಿ ತಲುಪಿದ ಬಳಿಕ ವಿಶೇಷ ಪೂಜೆ ಸಲ್ಲಿಸಿದ್ದು, ಈ ಪಾದಯಾತ್ರೆಗೆ ಕುಟುಂಬಸ್ಥರು, ಸ್ನೇಹಿತರು ಸಾಥ್ ನೀಡಿದ್ದಾರೆ.
ಇದನ್ನೂ ಓದಿ: Kaup: ಸಮುದ್ರ ಕಿನಾರೆಯಲ್ಲಿ ರವಿಶಂಕರ್ ಗುರೂಜಿ ಅವರಿಂದ ಆನಂದ ಲಹರಿ ಮಹಾಸತ್ಸಂಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು
ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು
Parashurama Park 2 ವಾರದಲ್ಲಿ ಕ್ರಮ ಕೈಗೊಳ್ಳಲು ನಿರ್ಮಿತಿ ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
ಬಿಸಿಲು: ಮತದಾನ ಸಮಯ ಪರಿಷ್ಕರಣೆಗೆ ಬಿಜೆಪಿ ಮನವಿ
Prajwal Revanna ದುಬಾೖಗೆ ಹೋಗಿದ್ದು ಗೊತ್ತಿಲ್ಲ: ಡಾ| ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು
ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು
Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ