ಗಡಿ ಭಾಗದಲ್ಲಿ ಕಮಲ ಅರಳಿಸಿ
Team Udayavani, May 10, 2018, 5:34 PM IST
ಚಿಕ್ಕೋಡಿ: ಇಡೀ ರಾಜ್ಯದಲ್ಲಿ ಪರಿವರ್ತನೆಯ ಅಲೆ ಪ್ರಾರಂಭವಾಗಿದೆ. ಕೊನೆಯ ಬಾರಿ ಕಾಂಗ್ರೆಸ್ ಕೇವಲ 17 ರಾಜ್ಯಗಳಲ್ಲಿ ತನ್ನ ಆಡಳಿತದ ಅಧಿಪತ್ಯ ಸಾಧಿಸಿತ್ತು. ಆದರೆ ಇಂದು ಬಿಜೆಪಿ ದೇಶದ ಸುಮಾರು 22 ರಾಜ್ಯಗಳೊಟ್ಟಿಗೆ 23 ಸ್ಥಾನವನ್ನು ಕರ್ನಾಟಕದಿಂದ ಪಡೆದುಕೊಳ್ಳಲಿದ್ದು, ರಾಜ್ಯದಲ್ಲಿ ಹಾಗೂ ಕ್ಷೇತ್ರದಲ್ಲಿ ಕಾಂಗ್ರೆಸನ್ನು ಕಿತ್ತೂಗೆದು ಕಮಲವನ್ನು ಅರಳಿಸಲು ತಾವೆಲ್ಲರೂ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಬುಧವಾರ ಯಕ್ಸಂಬಾ ಪಟ್ಟಣದ ಪ್ರತಿ ಮನೆ ಮನೆಗೂ ತೆರಳಿ ಮತಯಾಚಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ರ್ಯಾಲಿ ಮೂಲಕ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಕ್ಷೇತ್ರದ ಜನ 30 ವರ್ಷಗಳಿಂದ ಅಭಿವೃದ್ಧಿ ಕಾಣದ ಕಾಂಗ್ರೆಸ್ ಆಡಳಿತದಿಂದ ಬೇಸತ್ತಿದ್ದು, ಬಿಜೆಪಿಗೆ ಸ್ವ-ಇಚ್ಛೆಯಿಂದ ಸೇರ್ಪಡೆಗೊಂಡು ಪಕ್ಷದ ಬಲ ಹಾಗೂ ನಮ್ಮ ಬಹುಮತಗಳ ಗೆಲುವಿಗೆ ಕಹಳೆ ಊದಲು ಸಜ್ಜಾಗಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ಪಕ್ಷದ ಕಾರ್ಯಕರ್ತರನ್ನು ಕೇವಲ ಮತದಾನದ ಸಂದರ್ಭದಲ್ಲಿ ಮಾತ್ರ ಹಿತೈಷಿಗಳಂತೆ ಕಾಣುತ್ತಾರೆ. ಅದೇ ಬಿಜೆಪಿಯ ನಾಯಕರು ಪ್ರತಿ ಕಾರ್ಯಕರ್ತರನ್ನು ನಾಯಕನಂತೆ ನೋಡುತ್ತಾ, ಅವರಿಗೆ ಅ ಧಿಕಾರ ಹಾಗೂ ಜವಾಬ್ದಾರಿ ವಹಿಸಿ ಸಮಾಜಸೇವೆಗೆ ಪ್ರೇರೆಪಿಸುವ ಪಕ್ಷ ಬಿಜೆಪಿಯದಾಗಿದೆ ಎಂದರು. ಯುವ ಧುರೀಣ ಬಸವಪ್ರಸಾದ ಜೊಲ್ಲೆ, ಶಿವರಾಜ ಜೊಲ್ಲೆ, ರಾಜು ಬಾಕಳೆ, ಸುನೀಲ ಅಕ್ಕೋಳೆ, ಸುಧೀರ ಮಾಳಿ, ಉಮೇಶ ಪೋತದಾರ, ದಯಾನಂದ ಮಾಳಿ, ರಜನಿಕಾಂತ ಪಾಂಗಮ, ಅಪ್ಪಾಸಾಬ ಬಾಕಳೆ, ಶಂಕರ ಬಾಕಳೆ, ಪ್ರಶಾಂತ ವಸ್ತ್ರದ, ಮಹೇಶ ಬಾಕಳೆ, ಉದಯ ರಾಯಜಾಧವ, ಮಂದಾರ ರಾಯಜಾಧವ, ಅಮರ ಪರೀಟ ಇತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ