ಆದರ್ಶ ಪಾಲಿಸಿದರೆ ರಂಗಭೂಮಿ ಉತ್ತುಂಗಕ್ಕೆ


Team Udayavani, Feb 17, 2017, 1:26 PM IST

hub1.jpg

ಧಾರವಾಡ: ಕನ್ನಡ ರಂಗಭೂಮಿಯಲ್ಲಿ ಹಿಂದೆ ಇದ್ದ ಆದರ್ಶಗಳನ್ನು ರೂಢಿಸಿಕೊಂಡರೆ ಮತ್ತೆ ಆ ಗತವೈಭವ ಮರುಕಳಿಸಲು ಸಾಧ್ಯ ಎಂದು ಕನ್ನಡದ ಹಿರಿಯ ವೃತ್ತಿರಂಗಭೂಮಿ ಕಲಾವಿದೆ ಮತ್ತು ಡಾ| ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಬಾಯಿ ಏಣಗಿ ಅಭಿಪ್ರಾಯಪಟ್ಟರು. 

ಅವರು ಉತ್ತರ ಕರ್ನಾಟಕ ಲೇಖಕಿಯರ ಸಂಘದಿಂದ ಹಮ್ಮಿಕೊಂಡಿದ್ದ ಅನನ್ಯ ಮಹಿಳೆಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. 50ರ ದಶಕದಲ್ಲಿ ಕನ್ನಡ ರಂಗಭೂಮಿಯಲ್ಲಿ ಪ್ರಾಮಾಣಿಕತೆ, ವಿಶ್ವಾಸ, ಉತ್ತಮ ನಟನೆ, ಪ್ರೇಕ್ಷಕನನ್ನ ಪೂಜ್ಯಭಾವದಿಂದ ನೋಡುವುದು ಸೇರಿದಂತೆ ಅನೇಕ ಉತ್ತಮ ಆದರ್ಶಗಳಿದ್ದವು. ಹೀಗಾಗಿ ಜನರು ರಂಗಭೂಮಿಯನ್ನ ಇಷ್ಟ ಪಡುತ್ತಿದ್ದರು. 

ಉತ್ತಮ ನಟರಾಗಿ ಹೊರ ಹೊಮ್ಮಲು ದಶಕಗಳ ಸಮಯ ಬೇಕಿತ್ತು. ಆದರೆ ಇಂದು ಎಲ್ಲರೂ ತರಾತುರಿಯಲ್ಲೇ ನಡೆದು ಮೇಲಕ್ಕೇರಿ, ಕೇಳಕ್ಕಿಳಿದು ಬಿಡುವ ಕಾಲ ಬಂದಿದೆ. ಹೀಗಾಗಿ ರಂಗಭೂಮಿ ಕೊಂಚ ಸಂಕಷ್ಟದಲ್ಲಿದೆ ಎನ್ನಬಹುದು. ಆದರೆ ಉತ್ತಮ ಆದರ್ಶಗಳನ್ನು ಇಂದಿನ ರಂಗಭೂಮಿ ಪಾಲಿಸಿದರೆ ಮತ್ತೆ ಕನ್ನಡ ರಂಗಭೂಮಿ ಗತವೈಭವಕ್ಕೆ ಏರಲಿದೆ ಎಂದು ಹೇಳಿದರು. 

ಆತ್ಮಚರಿತ್ರೆ ಬೇಡ: ತಮ್ಮ ಜೀವನದಲ್ಲಿ ಕಹಿ ಘಟನೆಗಳನ್ನ ಮೆಲಕು ಹಾಕಿದ ಲಕ್ಷ್ಮೀಬಾಯಿ ಅವರು, ನನ್ನೊಳಗಿ ನೋವು ನನ್ನಲ್ಲಿಯೇ ಇರಬೇಕು. ಅದನ್ನು ಬೇರೆಯವರಿಗೆ ಹೇಳಿ ದೊಡ್ಡದು ಮಾಡುವುದು ನನಗೆ ಇಷ್ಟವಿಲ್ಲ. ಹೀಗಾಗಿ ನಾನು ನನ್ನ ಆತ್ಮಚರಿತ್ರೆ ಬರೆದು ಕೊಡುತ್ತೇನೆ ಎಂದು ಬಂದವರಿಗೆ ಬೇಡ ಎಂದು ಹೇಳಿದ್ದೇನೆ.

ಆತ್ಮಚರಿತ್ರೆ ಬೇಡವೇ ಬೇಡ. ನನ್ನ ಮೊಮ್ಮಕ್ಕಳಿಗೆ ನಾನು ಮೊದಲು ಓದಿ ನೌಕರಿ ಹಿಡಿಯಿರಿ, ಆ ಮೇಲೆ ರಂಗಕ್ಕೆ ಬನ್ನಿ ಎಂದು ಸಲಹೆ ನೀಡಿದ್ದೇನೆ. ಕಾರಣ, ನಾವು ಅನುಭವಿಸಿದ ಕಷ್ಟ, ನೋವುಗಳನ್ನು ನನ್ನ ಮುಂದಿನ ಪೀಳಿಗೆ ಅನುಭವಿಸುವುದು ಬೇಡ ಎಂದು ಹೇಳಿದರು. 

ಬಸವಣ್ಣನಿಗೆ ನಮಸ್ಕಾರ: ತಮ್ಮ ರಂಗಭೂಮಿ ನೆನಪುಗಳನ್ನು ಹಂಚಿಕೊಂಡ ಅವರು, ಮುಂಬೈನಲ್ಲಿ ಪೃಥ್ವಿರಾಜ್‌ಕಪೂರ ಅವರ “ಪೈಸೇ ಹೀ ಪೈಸೆ’ ನಾಟಕ ನೋಡಿ ಬಂದು ಇಲ್ಲಿ ನಾವು ಜಗಜ್ಯೋತಿ ಬಸವೇಶ್ವರ ನಾಟಕವನ್ನು ಆರಂಭ ಮಾಡಿದೇವು. ಈ ನಾಟಕದಿಂದ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ಬಸವಣ್ಣನ ಜನ್ಮಭೂಮಿ ಬಸವ ಕಲ್ಯಾಣದ ಅಭಿವೃದ್ಧಿಗೆ ಕಳುಹಿಸಿ ಕೊಡುತ್ತಿದ್ದೇವು.

ನಾಟಕ ಮುಗಿದ ಮೇಲೆ ನಾಡೋಜ ಏಣಗಿ ಬಾಳಪ್ಪ ಮತ್ತು ನನ್ನ ಕಾಲಿಗೆ ಜನರು ನಮಸ್ಕರಿಸುತ್ತಿದ್ದರು. ನಾವು ಬೇಡ ಎಂದರೂ ಕೇಳುತ್ತಿರಲಿಲ್ಲ. ಕನ್ನಡದ ಜನರು ತೋರಿದ ಪ್ರೀತಿ, ಅಭಿಮಾನ ಎಂದಿಗೂ ಮರೆಯಲಾರದ್ದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ| ಹೇಮಾ ಪಟ್ಟಣಶೆಟ್ಟಿ,

ಲಕ್ಷ್ಮೀಬಾಯಿ ಏಣಗಿ ಅಂತಹ ಕಲಾವಿದೆಯರು ಒಬ್ಬ ಮಹಿಳೆಯಾಗಿ ಸಮಾಜದ ಎಲ್ಲಾ ಶೋಷಣೆಗಳನ್ನು ತಾಳ್ಮೆಯಿಂದ ಎದುರಿಸಿ ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಸರ್ಕಾರಗಳು ಅವರಿಗೆ ನೀಡಬೇಕಾದ ಆದ್ಯತೆ ಇನ್ನೂ ನೀಡದಿರುವುದು ವಿಷಾದನೀಯ ಎಂದು ಹೇಳಿದರು. ಲಲಿತಾ ಪಾಟೀಲ ವಚನ ಪ್ರಾರ್ಥನೆ ಸಲ್ಲಿಸಿದರು. ಸಂಸ್ಕೃತಿ ಬೋಸ್ಲೆ ಸ್ವಾಗತಿಸಿದರು. ಸುಜಾತಾ ಹಡಗಲಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಇದ್ದರು. 

ಟಾಪ್ ನ್ಯೂಸ್

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain 10 ಜಿಲ್ಲೆಗಳ 11 ನದಿಗಳಲ್ಲಿ  ಪ್ರವಾಹ ಭೀತಿ

Heavy Rain 10 ಜಿಲ್ಲೆಗಳ 11 ನದಿಗಳಲ್ಲಿ  ಪ್ರವಾಹ ಭೀತಿ

rain 21

Heavy Rain; ಬೆಳಗಾವಿ, ಧಾರವಾಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ

Hubli: ಬಂಧಿತ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ… ಆರೋಪಿ ಕಾಲಿಗೆ ಗುಂಡೇಟು

Hubballi: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Uttara Karnataka; ನದಿಗಳ ಅಬ್ಬರಕ್ಕೆ ಉತ್ತರದಲ್ಲಿ “ನೆರೆ’ ಹೊರೆ

Uttara Karnataka; ನದಿಗಳ ಅಬ್ಬರಕ್ಕೆ ಉತ್ತರದಲ್ಲಿ “ನೆರೆ’ ಹೊರೆ

Hubli; ಕರ್ತವ್ಯ ಬಹಿಷ್ಕರಿಸಿ ಪಾಲಿಕೆ ಕಚೇರಿ ಸಿಬ್ಬಂದಿ ಪ್ರತಿಭಟನೆ

Hubli; ಕರ್ತವ್ಯ ಬಹಿಷ್ಕರಿಸಿ ಪಾಲಿಕೆ ಕಚೇರಿ ಸಿಬ್ಬಂದಿ ಪ್ರತಿಭಟನೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.