![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-415x229.jpg)
ಪಂ| ಬಸವರಾಜ ರಾಜಗುರು ಪುಣ್ಯಸ್ಮರಣೆ-ಸನ್ಮಾನ
Team Udayavani, Feb 16, 2017, 2:48 PM IST
![hub7.jpg](https://www.udayavani.com/wp-content/uploads/2017/02/16/hub7.jpg)
ಧಾರವಾಡ: ಸ್ವರ ಸಾಮ್ರಾಟ್ ಪಂ| ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಬಸವರಾಜ ರಾಜಗುರು ಅವರ 25ನೇ ಪುಣ್ಯಸ್ಮರಣೆ ಪ್ರಯುಕ್ತ ನಗರದಲ್ಲಿ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಸಂಗೀತ ಸಮಾರೋಹ ಕಾರ್ಯಕ್ರಮಕ್ಕೆ ಬುಧವಾರ ಸಂಜೆ ಜಿಲ್ಲಾಧಿಕಾರಿ ಡಾ| ಬಿ.ಎಸ್.ಬೊಮ್ಮನಹಳ್ಳಿ ಚಾಲನೆ ನೀಡಿದರು.
ಈ ವೇಳೆ ಟ್ರಸ್ಟ್ ಸದಸ್ಯ ನಿಜಗುಣ ರಾಜಗುರು ಮಾತನಾಡಿ, ಇಂದು ಗುರು-ಶಿಷ್ಯರ ಸಂಬಂಧ ಸಂಗೀತ ಕ್ಷೇತ್ರದಲ್ಲಿ ಮಾತ್ರ ಉಳಿದುಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಾರವಾಡವನ್ನು ಗುರುತಿಸಿದ ಡಾ| ಬಸವರಾಜ ರಾಜಗುರು ಅವರ ಹೆಸರನ್ನು ಉಳಿಸುವ ಮತ್ತು ಯುವ ಜನತೆಯಲ್ಲಿ ಅವರ ಕಾರ್ಯ ಸಾಧನೆ ಬಿತ್ತುವ ದೃಷ್ಟಿಯಿಂದ ಡಾ| ಬಸವರಾಜ ರಾಜಗುರು ಟ್ರಸ್ಟ್ ನಿರಂತರ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದೆ.
ಅಲ್ಲದೇ ಶೀಘ್ರದಲ್ಲಿಯೇ ಡಾ| ಬಸವರಾಜ ರಾಜಗುರು ಅವರ ಕುರಿತಾದ ಸಾಕ್ಷéಚಿತ್ರ ಹೊರ ತರಲಾಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಗುರು-ಶಿಷ್ಯ ಪರಂಪರೆಯಲ್ಲಿ ಅಪಾರ ನಂಬಿಕೆಯಿದ್ದ ಡಾ| ಬಸವರಾಜ ರಾಜಗುರು ಅವರ ನೆನಪಿಗಾಗಿ ಟ್ರಸ್ಟ್ ವತಿಯಿಂದ ಅವರ ಮೊದಲ ಶಿಷ್ಯರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಡಾ| ಬಸವರಾಜ ರಾಜಗುರು ಅವರ ಮೊದಲ ಶಿಷ್ಯರಾದ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಪಂ| ಸೋಮನಾಥ ಮರಡೂರ ಹಾಗೂ ಪಂ| ಗಣಪತಿ ಭಟ್ ಸೇರಿದಂತೆ ಸಂತೂರ ವಾದಕ ಮುಂಬೈನ ಪಂ| ಸತೀಶ ವ್ಯಾಸ ಅವರನ್ನು ಸನ್ಮಾನಿಸಲಾಯಿತು. ವಿಶ್ವರಾಜ ರಾಜಗುರು ಹಾಗೂ ಪಂ| ಗಣಪತಿ ಭಟ್ ಅವರಿಂದ ಗಾಯನ ಹಾಗೂ ಮುಂಬಯಿಯ ಪಂ| ಸತೀಶ ವ್ಯಾಸ ಅವರಿಂದ ಸಂತೂರ್ ವಾದನ ಜರುಗಿತು.
ಟ್ರಸ್ಟ್ನ ಸದಸ್ಯರಾದ ಭಾರತಿದೇವಿ ರಾಜಗುರು, ಡಾ| ಮುದ್ದು ಮೋಹನ, ಡಾ| ಉದಯಕುಮಾರ ದೇಸಾಯಿ, ಸಿದ್ಧಲಿಂಗೇಶ ರಂಗಣ್ಣವರ ಇದ್ದರು. ಫೆ.16ರಂದು ಸಂಗೀತಾ ಕಟ್ಟಿ (ಗಾಯನ), ಪಂ| ಶ್ರೀಪಾದ ಹೆಗಡೆ (ಗಾಯನ), ಪಂ| ರೋಣು ಮುಜುಮದಾರ (ಕೊಳಲು ವಾದನ) ನಡೆಯಲಿದೆ. ಫೆ.17ರಂದು ಡಾ| ಮುದ್ದುಮೋಹನ್ (ಗಾಯನ), ಪಂ| ಪರಮೇಶ್ವರ ಹೆಗಡೆ (ಗಾಯನ), ಡಾ| ಹನುಮಣ್ಣ ನಾಯಕ ದೊರೆ (ಗಾಯನ), ಪಂ| ಸೋಮನಾಥ ಮರಡೂರ (ಗಾಯನ) ಭಾಗಹಿಸಲಿದ್ದಾರೆ.
ಟಾಪ್ ನ್ಯೂಸ್
![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-150x83.jpg)
Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ
![ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!](https://www.udayavani.com/wp-content/uploads/2024/07/Dubai1-150x84.jpg)
ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!
![Screenshot (7) copy](https://www.udayavani.com/wp-content/uploads/2024/07/Screenshot-7-copy-150x83.jpg)
Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!
![ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು](https://www.udayavani.com/wp-content/uploads/2024/07/poorna-150x83.jpg)
Hubli; ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು
![gajanur3](https://www.udayavani.com/wp-content/uploads/2024/07/gajanur3-150x84.jpg)
ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.