ವಿಶ್ವಕ್ಕೆ ಸಿಹಿ ಉಣಿಸಲು ಸಜ್ಜಾದ ಗೋಧಿ ಹುಗ್ಗಿ 


Team Udayavani, Dec 12, 2021, 12:47 PM IST

ವಿಶ್ವಕ್ಕೆ ಸಿಹಿ ಉಣಿಸಲು ಸಜ್ಜಾದ ಗೋಧಿ ಹುಗ್ಗಿ 

ಧಾರವಾಡ: ಉತ್ತರ ಕರ್ನಾಟಕದ ಸಿಹಿ ತಿನಿಸುಗಳಾದ ಧಾರವಾಡ ಪೇಢಾ, ಬೆಳಗಾವಿ ಕುಂದಾ, ಗೋಕಾಕದ ಕರದಂಟುಗಳು ವಿಮಾನವೇರಿ ವಿದೇಶಗಳಿಗೆ ಹೋಗಿದ್ದು ಹಳೇ ಸುದ್ದಿ. ಇದೀಗ ಇದೇ ಭಾಗದ ಪ್ರಸಿದ್ಧ ಸಿಹಿ ಖಾದ್ಯ, ಮದುವೆ ಸೇರಿದಂತೆ ಎಲ್ಲಾ ಶುಭ ಕಾರ್ಯಗಳಲ್ಲಿ ಬಾಯಿ ಸಿಹಿಮಾಡುವ ಗೋಧಿ ಹುಗ್ಗಿ ಕೂಡ ವಿಶ್ವದಎಲ್ಲಾ ರಾಷ್ಟ್ರಗಳಲ್ಲಿರುವ ಸಿಹಿ ಪ್ರಿಯರು ಚಪ್ಪರಿಸಲು ಸಜ್ಜಾಗಿದೆ.

ಹೌದು, ಧಾರವಾಡದ ಸಾಂಪ್ರದಾಯಿಕ ಅಡುಗೆಗಳಿಗೆ ಪ್ರಸಿದ್ಧರಾದ ಹಿರಿಯ ಬಾಣಸಿಗ ವೀರಭದ್ರಪ್ಪ ಕಲ್ಲಪ್ಪ ಲಟ್ಟಿ ಎಂಬುವರು ಕಳೆದ ನಾಲ್ಕು ವರ್ಷಗಳಿಂದ ಸತತ ಪರಿಶ್ರಮ ಪಟ್ಟು ಕಡೆಗೂ ಗೋಧಿ ಹುಗ್ಗಿಯನ್ನು ಪ್ಯಾಕೇಟ್‌ನಲ್ಲಿ ಹಾಕಿ “ರೆಡಿ ಟು ಈಟ್‌’ ಮಾದರಿಯಲ್ಲಿ ಸಜ್ಜುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಬರೋಬ್ಬರಿ 50 ಲಕ್ಷ ರೂ. ಖರ್ಚು ಮಾಡಿ ಸತತ ಸಂಶೋಧನೆ ಮತ್ತು ತಂತ್ರಜ್ಞರ ಸಲಹೆ, ಸಹಕಾರ ಪಡೆದು ಆರು ಗಂಟೆಗಳ ಕಾಲ ಮಾಡುವ ಗೋಧಿ ಹುಗ್ಗಿಯನ್ನು ಕೇವಲ ಅರ್ಧ ಗಂಟೆಯಲ್ಲಿ ಸಜ್ಜುಗೊಳಿಸಿ ಊಟ ಮಾಡುವ ಹೊಸ ವಿಧಾನ ಕಂಡು ಹಿಡಿಯುವಲ್ಲಿ ಸಫಲರಾಗಿದ್ದಾರೆ.

ರೆಡಿ ಟೂ ಈಟ್‌ ಪ್ರಯೋಜನವೇನು?: ಗೋಧಿ ಹುಗ್ಗಿಯನ್ನು ಸರಳ, ಬೇಗವಾಗಿ ಮಾಡಲು ಆಗುವುದಿಲ್ಲ. ನಗರೀಕರಣದ ನಂತರವಂತೂ ಗೋಧಿ ಹುಗ್ಗಿ ನಗರವಾಸಿಗಳಿಗೆ ಗಗನ ಕುಸುಮವೇ ಆಗಿತ್ತು. ಇನ್ನು ಹಳ್ಳಿಗಳಲ್ಲಿ ಕೂಡ ಇದೀಗ ಎಲ್ಲೆಡೆ ಕಟ್ಟಿಗೆ ಒಲೆಗಳು ಮಾಯವಾಗಿದ್ದು, ಮಾಡಲು ಸಾಕಷ್ಟು ಶ್ರಮ ಹಾಕಬೇಕು. ಗೋಧಿ ಒಡೆಸಿ, ಅದನ್ನು ಕುಟ್ಟಿ, ತಾಸುಗಟ್ಟಲೆ ಕುದಿಸಿ, ಕೇರು ಗಿಡದ ಹುಟ್ಟಿನಿಂದಲೇಅದನ್ನು ಮಸೆದು ಹದ ಮಾಡಬೇಕು.ಇದೆಲ್ಲವನ್ನು ಮಾಡಲು ಇಂದಿನವರಿಗೆ ಸಾಧ್ಯವೇ ಇಲ್ಲವಾಗಿತ್ತು.

ಇದೀಗ ಧಾರವಾಡದ ಬಾಣಸಿಗ ವೀರಭದ್ರಪ್ಪ ಅವರು, ಸೆಂಟ್ರಲ್‌ ಫುಡ್‌ ರಿಸರ್ಚ್‌ ಟೆಕ್ನಾಲಜಿ ಮೈಸೂರು ಸಂಸ್ಥೆಯೊಂದಿಗೆ ಸತತ ಮೂರು ವರ್ಷ ಮೇಲಿಂದ ಮೇಲೆ ಪ್ರಯೋಗಗಳನ್ನು ಮಾಡಿ, ಅಂತಿಮವಾಗಿ ಸರಳವಾಗಿ ಮತ್ತು 6 ತಿಂಗಳ ಕಾಲ ಕಾಯ್ದಿಟ್ಟುಕೊಂಡು ಗೋಧಿ ಹುಗ್ಗಿ ಮಾಡುವಂತ ತಂತ್ರಜ್ಞಾನವನ್ನುಅಭಿವೃದ್ಧಿ ಪಡಿಸಿಕೊಂಡಿದ್ದಾರೆ. ಇದಕ್ಕೆ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್‌ ನವೋದ್ಯಮ ವಿಚಾರದಲ್ಲಿ ಬೆನ್ನಿಗೆ ನಿಂತು ಸಹಾಯ ಮಾಡಿದೆ. ಸದ್ಯಕ್ಕೆ 225 ಗ್ರಾಂನ ಪ್ಯಾಕೆಟ್‌ಗಳನ್ನು ಸಜ್ಜುಗೊಳಿಸಿದ್ದು, ಬೇಡಿಕೆಗೆತಕ್ಕಂತೆ ಪೂರೈಕೆಗೆ ಸಜ್ಜಾಗಿದೆ. ಇದೀಗ ಹಳ್ಳಿ, ನಗರ, ಹೊರ ರಾಜ್ಯ, ಹೊರ ದೇಶಗಳಲ್ಲಿರುವ ಗೋಧಿ ಹುಗ್ಗಿ ಪ್ರಿಯರು ಇದರ ರುಚಿಯನ್ನು ಸವಿಯಲುಅನುಕೂಲವಾಗಿದೆ.

ರಾಜಕೋಟ ಗೋಧಿ ಬಳಕೆ: ಧಾರವಾಡ ನೆಲದಲ್ಲಿ ಈಗಾಗಾಲೇ ಅಮೃತ ಸೇರಿದಂತೆ ಅನೇಕ ಗೋಧಿ ತಳಿಗಳನ್ನು ಹುಗ್ಗಿಗೆ ಬಳಕೆ ಮಾಡಲಾಗುತ್ತಿದೆ.ಆದರೆ ಇಲ್ಲಿ ಪಂಜಾಬ್‌ ಮತ್ತು ಹರಿಯಾಣಗಳಲ್ಲಿ ಬೆಳೆಯುವ ರಾಜಕೋಟ ಗೋಧಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಕಾರಣ ಈ ಗೋಧಿ ವರ್ಷ ಪೂರ್ತಿ ಲಭ್ಯವಿರುತ್ತದೆ. ಬರುವ ದಿನಗಳಲ್ಲಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಯುವ ವಿವಿಧ ತಳಿಯ ಗೋಧಿಯನ್ನು ಪರೀಕ್ಷೆಗೆ ಒಳಪಡಿಸಿ, ಮೌಲ್ಯವರ್ಧಿಸಿ ಗೋಧಿ ಹುಗ್ಗಿಗೆ ಬಳಕೆ ಮಾಡಿಕೊಳ್ಳಲು ವೀರಭದ್ರಪ್ಪ ಯೋಜಿಸಿದ್ದಾರೆ.

ಏನಿದು ಗೋಧಿ ಹುಗ್ಗಿ? :

ಅಖಂಡವಾಗಿರುವ ಗೋಧಿ ಕಾಳುಗಳನ್ನು ನೆನೆಸಿ ಒಳಕಲ್ಲಿನಲ್ಲಿ ಕುಟ್ಟಿ, 4-6 ಗಂಟೆಗಳ ಕಾಲ ಕುದಿಸಿ ಅದಕ್ಕೆ ಬೆಲ್ಲ, ತುಪ್ಪ, ದ್ರಾಕ್ಷಿ, ಗೋಡಂಬಿ, ಕೇರು ಬೀಜ, ಖರ್ಜೂರ ಬೆರೆಸಿ ಮಿತ ದ್ರವ ಸ್ಥಿತಿಯಲ್ಲಿರುವಂತೆ ಮಾಡಿ ಸವಿಯುವುದೇ ಗೋಧಿಹುಗ್ಗಿ. ಉತ್ತರ ಕರ್ನಾಟಕ ಭಾಗದಲ್ಲಿ ಇದು ಪಾರಂಪರಿಕ ಆಹಾರ. ಮದುವೆ, ಸೀಮಂತ, ದೊಡ್ಡ ಕಾರ್ಯಕ್ರಮಗಳು, ಸಮಾವೇಶಗಳು ಸೇರಿದಂತೆ ಶುಭ ಸಂದರ್ಭಗಳಲ್ಲಿ ಸಾಮೂಹಿಕ ಭೋಜನಕ್ಕೆ ಗೋಧಿ ಹುಗ್ಗಿಯೇ ಇಲ್ಲಿ ಪ್ರಧಾನ ಸಿಹಿ ಆಹಾರ ಪದಾರ್ಥ. ಗೋಧಿಯನ್ನು ಒಡೆದು ರವೆ ಮಾಡಿ ಬೆಲ್ಲದ ಜತೆ ಸೇರಿಸಿದ ಸಿಹಿ ಪದಾರ್ಥಕ್ಕೆ ಹುಗ್ಗಿ ಎನ್ನಲಾಗುತ್ತದೆ. ಆದರೆ ಇದಕ್ಕಿಂತಲೂ ಅಖಂಡವಾಗಿ ಕುದಿಸಿದ ಗೋಧಿ ಹುಗ್ಗಿ ರುಚಿಯಲ್ಲಿ ಒಂದು ಕೈ ಮೇಲು.

ಪೌಷ್ಟಿಕತೆ ಕಣಜ :

ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಬಯಲು ಸೀಮೆ, ಬೆಳವಲದ ನಾಡಿನಲ್ಲಿ ಗೋಧಿ ಹುಗ್ಗಿ ಎಂದರೆ ಅದು ಬರೀ ಆಹಾರವಷ್ಟೇ ಅಲ್ಲ, ಪೌಷ್ಟಿಕತೆಯ ಕಣಜ ಎನ್ನುವ ಪರಿಕಲ್ಪನೆ ಇದೆ. ಗೋಧಿ ಹುಗ್ಗಿಗೆ ತುಪ್ಪ, ಹಾಲು, ಗೋಡಂಬಿ, ದ್ರಾಕ್ಷಿ, ಬಾದಾಮಿ, ಒಣ ಕೊಬ್ಬರಿ, ಖರ್ಜೂರ ಸೇರಿದಂತೆ ಎಲ್ಲಾ ಪೋಷಕಾಂಶಗಳಿರುವ ಪದಾರ್ಥಗಳನ್ನೇ ಬಳಕೆ ಮಾಡಲಾಗುತ್ತದೆ. ಹೀಗಾಗಿ ಇದು ಬರೀ ಆಹಾರವಷ್ಟೇ ಅಲ್ಲ, ಪೌಷ್ಟಿಕ ಆಹಾರದ ಪಟ್ಟಿಯಲ್ಲಿದೆ. ಬೆಂಗಳೂರಿನ ವಿದ್ಯಾರ್ಥಿ ಭವನ ಮಸಾಲೆ ದೋಸೆ ವಿದೇಶಿ ವಿಮಾನವೇರಿದಾಗ ಹೊರ ದೇಶದಲ್ಲಿನ ಕನ್ನಡಿಗರು ಸಂಭ್ರಮಿಸಿದ್ದರು. ಇದೀಗ ಕನ್ನಡಿಗರ ಸಿಹಿ ಖಾದ್ಯವೊಂದು ವಿದೇಶಗಳಲ್ಲಿರುವವರ ಬಾಯಿ ಚಪ್ಪರಿಸಲು ಸಜ್ಜಾಗಿರುವುದು ವಿಶೇಷ

ಗೋಧಿ ಹುಗ್ಗಿ ತಂತ್ರಜ್ಞಾನದ ಕುರಿತು ಹೊರ ದೇಶಗಳಲ್ಲಿರುವ ಕನ್ನಡಿಗರು ಅದರಲ್ಲೂ ಉತ್ತರ ಕರ್ನಾಟಕದ ಕನ್ನಡಿಗರು ಹೆಚ್ಚು ಹರ್ಷ ವ್ಯಕ್ತಪಡಿಸಿದ್ದು, ಯುಎಸ್‌ಎ, ಹಾಂಗ್‌ಕಾಂಗ್‌, ಆಸ್ಟ್ರೇಲಿಯಾ, ಇಂಗ್ಲೆಂಡ್‌, ರಷ್ಯಾದಿಂದ ಬೇಡಿಕೆ ಬಂದಿದೆ. ದುಬೈ-2020 ಪ್ರದರ್ಶನದಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ. ಕನ್ನಡದ ಸಿಹಿ ಆಹಾರವೊಂದನ್ನು ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಸವಿಯುವಂತೆ ಮಾಡಬೇಕೆಂಬ ಕನಸು ನನಸಾಗಿದೆ. -ವೀರಭದ್ರಪ್ಪ ಲಟ್ಟಿ, ಗುರು ಬಸವಾ ಕೇಟರಿಂಗ್‌ ಮಾಲೀಕ

­-ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Tollywood: ಪ್ರಶಾಂತ್‌ ನೀಲ್‌ – Jr. NTR ಸಿನಿಮಾಕ್ಕೆ ಈ ಟೈಟಲ್‌ ಫಿಕ್ಸ್?

Tollywood: ಪ್ರಶಾಂತ್‌ ನೀಲ್‌ – Jr. NTR ಸಿನಿಮಾಕ್ಕೆ ಈ ಟೈಟಲ್‌ ಫಿಕ್ಸ್?

Swati Maliwal Arvind Kejriwal’s aide repeatedly kicked her in stomach

AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

Anjali Ambigera Case; Girish and Anjali got married 15 days ago!

Anjali Ambigera Case; ಹಂತಕ ಗಿರೀಶ್ ಗೂ ಅಂಜಲಿಗೂ 15 ದಿನಗಳ ಮೊದಲೇ ಮದುವೆಯಾಗಿತ್ತು!

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

1-ewewqe

Anjali ಹತ್ಯೆ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ವಶಕ್ಕೆ

Anjali Ambigera Case; Protest by BJP workers in Hubli

Anjali Ambigera Case; ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

Minchu

Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.