ಇಸ್ಲಾಂ ಶಾಂತಿ-ಮಾನವೀಯ ಮೌಲ್ಯ ಸಾರುವ ಧರ್ಮ: ಸಚಿವ ರಾಯರಡ್ಡಿ
Team Udayavani, Jun 24, 2017, 2:27 PM IST
ಹುಬ್ಬಳ್ಳಿ: ಜಗತ್ತಿನಲ್ಲಿ ಶಾಂತಿ-ಮಾನವೀಯ ಮೌಲ್ಯಗಳನ್ನು ಸಾರುವ ಧರ್ಮ ಇಸ್ಲಾಂ ಆಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ಇಲ್ಲಿನ ಆನಂದನಗರ ಹೂ-ಬಳ್ಳಿ ಶಾದಿ ಮಹಲ್ನಲ್ಲಿ ಶುಕ್ರವಾರ ರಂಜಾನ್ ನಿಮಿತ್ತ ಪಾಲಿಕೆ ಸದಸ್ಯ ದೀಪಕ ಚಿಂಚೋರೆ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು.
ಇಸ್ಲಾಂ ಬಗ್ಗೆ ತಿಳಿಯದವರು ಏನೇನೋ ಮಾತನಾಡುತ್ತಾರೆ. ಅವರೆಲ್ಲರು ಒಂದು ಬಾರಿ ಕುರಾನ್ ಓದಿದರೆ ಇಸ್ಲಾಂ ಧರ್ಮದ ಸಂಪೂರ್ಣ ಮಾಹಿತಿ ಸಿಗಲಿದೆ. ಮನುಷ್ಯ ಹೇಗೆ ಬದುಕುಬೇಕು, ಯಾವ ಜಾಗದಲ್ಲಿ ಹೇಗಿರಬೇಕು ಎಂಬುದೆಲ್ಲವನ್ನು ಕುರಾನ್ನಲ್ಲಿ ಹೇಳಲಾಗಿದೆ. ಕುರಾನ್ ಕೇವಲ ಇಸ್ಲಾಂ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ.
ಅದು ಇಡೀ ಮಾನವ ಕುಲಕ್ಕೆ ಬೇಕಾದ ಗ್ರಂಥ ಎಂದರು. ರಂಜಾನ್ ಹಬ್ಬದ ವಿಶೇಷ ಎಂದರೆ ವರ್ಷ ಪೂರ್ತಿ ಹೇಗಿದ್ದೀರಿ ಎನ್ನುವುದಕ್ಕಿಂತ ಸತತ ಒಂದು ತಿಂಗಳ ಕಾಲ ಮಾಡುವ ಉಪವಾಸ ವ್ರತ, ಪ್ರಾರ್ಥನೆ ಮಾಡುವುದು. ಇದೆಲ್ಲವೂ ಯೋಗಕ್ಕೆ ಸಮಾನವಾಗಿದೆ. ಎಲ್ಲರು ಯೋಗ ಮಾಡಿ ಎಂದು ಹೇಳುತ್ತಾರೆ.
ನಮಾಜು ಮಾಡುವುದು ಯೋಗಕ್ಕಿಂತ ಶ್ರೇಷ್ಠವಾಗಿದೆ. ಈ ಹಬ್ಬದ ಮೂಲಕ ಎಲ್ಲರು ಸಮಾನರು ಎಂಬುದನ್ನು ಕೂಡಾ ತೋರಿಸಲಾಗುತ್ತದೆ. ಸಮಾಜದಲ್ಲಿರುವ ಶ್ರೀಮಂತರು ಬಡವರಿಗೆ ಧನಸಹಾಯ ಮಾಡುವ ಮೂಲಕ ಅವರಿಗೆ ಸಹಾಯ ನೀಡುವುದು ಇದರ ಇನ್ನೊಂದು ವಿಶೇಷವಾಗಿದೆ ಎಂದರು.
ಕಾಂಗ್ರೆಸ್ ಮಹಾನಗರ ಜಿಲ್ಲಾಧ್ಯಕ್ಷ ಎ.ಎಂ. ಹಿಂಡಸಗೇರಿ, ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಸಾಹಿತಿ ರಂಜಾನ್ ದರ್ಗಾ, ಪಾಲಿಕೆ ಸದಸ್ಯರಾದ ದೀಪಕ ಚಿಂಚೋರೆ, ಬಸೀರ ಗುಡಮಾಲ್, ವಾಹಬ್ ಮುಲ್ಲಾ, ನಜೀರ ಹೊನ್ಯಾಳ, ದಶರಥ ವಾಲಿ, ಮುಖಂಡರಾದ ಅನಿಲಕುಮಾರ ಪಾಟೀಲ, ಶಾಕೀರ್ ಸನದಿ, ಮುತವಲಿ ಸುಂಡಕೆ, ಸಲೀಂ ಬ್ಯಾಹಟ್ಟಿ, ರಾಬರ್ಟ್ ದದ್ದಾಪುರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
MUST WATCH
ಹೊಸ ಸೇರ್ಪಡೆ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ