ಕವಿವಿ: ವಾಲಿಬಾಲ್ ಪಂದ್ಯಾವಳಿ
Team Udayavani, Mar 5, 2017, 1:19 PM IST
ನವಲಗುಂದ: ವಿದ್ಯಾರ್ಥಿಗಳು ಪಾಠ ಪ್ರವಚನದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸದೃಢ ದೇಹ ಹೊಂದಬಹುದು ಎಂದು ನ.ತಾ.ಶಿ.ಸ. ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ| ಬಿ.ಸಿ. ಪೂಜಾರ ಹೇಳಿದರು.
ಇಲ್ಲಿನ ಶಂಕರ ಕಲಾ ಹಾಗೂವಾಣಿಜ್ಯ ವಿದ್ಯಾಲಯ ಆಯೋಜಿಸಿದ್ದ ಕವಿವಿ ಎರಡನೆ ವಲಯ ಮಟ್ಟದ ಅಂತರ್ ಮಹಾವಿದ್ಯಾಲಯಗಳ ಪುರುಷರ ವಾಲಿಬಾಲ್ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಗೆ ಸಾಕಷ್ಟು ಪ್ರೊàತ್ಸಾಹವಿದ್ದರೂ ಯುವಕರು ಉತ್ತಮ ಸಾಧನೆ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ.
ಯುವಕರು ಕ್ರೀಡೆಯಲ್ಲಿ ಅಭಿರುಚಿ ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಬಿ. ಯಳ್ಳೂರ ಮಾತನಾಡಿ,ಪಂದ್ಯಾವಳಿಯಲ್ಲಿ 14 ಕಾಲೇಜಿನ ತಂಡಗಳು ಪಾಲ್ಗೊಂಡಿವೆ. ಭಾಗವಹಿಸಿದ ಎಲ್ಲ ಆಟಗಾರರು ಸೋಲು-ಗೆಲುವನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಿ ಕ್ರೀಡೆಗೆ ಗೌರವ ತರಬೇಕೆಂದರು.
ಆಡಳಿತ ಮಂಡಳಿಯ ನಿರ್ದೇಶಕ ಬಸಣ್ಣ ಹಳ್ಳದ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ| ಪಿ.ಜಿ. ಹಿರೇಮಠ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಡಾ| ಎಸ್.ವಿ. ಬಡಿಗೇರ, ಪ್ರೊ| ಎಸ್.ಎಸ್. ಕಾಡಮ್ಮನವರ, ಪ್ರೊ| ಎಂ.ವೈ. ಬುಳಗಣ್ಣವರ, ಪ್ರೊ| ಎಸ್.ಬಿ. ಬದಾಮಿ, ಡಾ| ಕಸ್ತೂರಿ ಬಿಕ್ಕಣ್ಣವರ, ಡಾ| ಶೀಲಾ ತುಬಚಿ, ಪ್ರೊ| ರಮೇಶ ಚವ್ಹಾಣ, ವಾಲಿಬಾಲ್ ವಿಭಾಗದ ಕಾರ್ಯಾಧ್ಯಕ್ಷ ಮಹೇಶ ಕುರ್ತಕೋಟಿ ಇದ್ದರು. ಪ್ರೊ| ಎ.ಜಿ.ಜಕ್ಕನಗೌಡರ ಸ್ವಾಗತಿಸಿದರು. ಪ್ರೊ| ಬಿ.ಎಚ್.ಹೂಗಾರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್