ಸರಕು ಸಾಗಾಣಿಕೆ ವಾಹನದಲ್ಲಿ ಜನರ ಪ್ರಯಾಣ ಸಲ್ಲ
Team Udayavani, May 13, 2019, 11:55 AM IST
ಅಳ್ನಾವರ: ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಸುವುದು ಅಪಾಯಕಾರಿಯಾಗಿದ್ದು, ಇಂತಹ ಪ್ರಯಾಣ ಕಾನೂನಿಗೆ ವಿರುದ್ಧವಾಗಿದೆ ಎಂದು ಧಾರವಾಡ ಸಾರಿಗೆ ನಿರೀಕ್ಷಕ ಆರ್.ಎ. ಕಿತ್ತೂರ ಹೇಳಿದರು
ಪಟ್ಟಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಸುರಕ್ಷತೆ ಪ್ರಯಾಣ ಕುರಿತು ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರಕು ಸಾಗಾಣಿಕೆ ವಾಹನಗಳಲ್ಲಿ ಜನರನ್ನು ಕುಳ್ಳಿರಿಸಿಕೊಂಡು ಹೋಗಲು ಅವಕಾಶವಿಲ್ಲ. ಇಂತಹ ವಾಹನಗಳಲ್ಲಿ ಜನರು ಪ್ರಯಾಣ ಮಾಡಬಾರದು. ಜೀವಕ್ಕೆ ಅಪಾಯ ತರುವಂತಹ ಅವಘಡಗಳು ಸಂಭವಿಸುವ ಸಂಭವ ಅಧಿಕವಾಗಿರುತ್ತದೆ ಎಂದು ಹೇಳಿದರು.
ಧಾರವಾಡ ಗ್ರಾಮೀಣ ಸಿಪಿಐ ಪಿ.ಬಿ. ನೀಲಗಾರ ಮಾತನಾಡಿ, ಸುಗಮವಾದ ಜೀವನ ಸಾಗಿಸಲು ಅನುಕೂಲವಾಗುವ ಉದ್ದೇಶದಿಂದ ರೂಪಿಸಿರುವ ಕಾನೂನುಗಳಿಗೆ ಬದ್ಧರಾಗಿ ಮುನ್ನಡೆದಾಗ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ. ನಮ್ಮ ಒಳಿತಿಗಾಗಿ ಮಾಡಿರುವ ಕಾನೂನುಗಳ ಪರಿಪಾಲನೆ ಮಾಡುವ ಬಗ್ಗೆ ನಾವು ಕಟ್ಟಳೆಗಳನ್ನು ಹಾಕಿಕೊಳ್ಳಬೇಕಾಗಿದೆ ಎಂದರು. ಸ್ಥಳೀಯ ಠಾಣೆ ಪಿಎಸ್ಐ ಅನಿಲಕುಮಾರ ಡಿ. ಮಾತನಾಡಿದರು. ಸಾರಿಗೆ ನಿಯಂತ್ರಕ ಕಾಪಸೆ ಹಾಗೂ ವಿವಿಧ ಗ್ರಾಮಗಳ ಸಾರ್ವಜನಿಕರು, ವಾಹನ ಚಾಲಕರು, ಮಾಲೀಕರು ಪಾಲ್ಗೊಂಡಿದ್ದರು ಪ್ರವೀಣ ಪವಾರ ಸ್ವಾಗತಿಸಿದರು. ನಾಗರಾಜ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್
BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ
Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು
ಬಿಲ್ಡರ್ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್
QR code system: ರೈಲ್ವೆ ಟಿಕೆಟ್ ಖರೀದಿಗೆ ಕ್ಯೂಆರ್ಕೋಡ್ ವ್ಯವಸ್ಥೆ; ಉತ್ತಮ ಸ್ಪಂದನೆ