ಕುಂದಗೋಳದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
Team Udayavani, Oct 26, 2019, 11:12 AM IST
ಕುಂದಗೋಳ: ಇಲ್ಲಿನ ಪಟ್ಟಣ ಪಂಚಾಯ್ತಿ ಚುನಾವಣೆ ನಿಗದಿಗೊಳ್ಳುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆಕಾಂಕ್ಷಿಗಳು ಪಕ್ಷಗಳ ಬಿ ಫಾರ್ಮ್ಗಾಗಿ ಜೋರು ಲಾಬಿ ನಡೆಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿ ಆಕಾಂಕ್ಷಿತರ ಪಟ್ಟಿ ದೊಡ್ಡದಿದ್ದು, ದೀಪಾವಳಿ ನಂತರ ಚುನಾವಣೆ ಕಾವು ರಂಗೇರಲಿದೆ.
ಕಳೆದ ಅವ ಧಿಯಲ್ಲಿ 15 ವಾರ್ಡ್ಗಳನ್ನು ಹೊಂದಿದ್ದ ಪಂಚಾಯ್ತಿ ಪುನರ್ ವಿಂಗಡಣೆ ನಂತರ 19 ವಾಡ್ಗಳಾಗಿದ್ದು, ಈಗಾಗಲೇ ಮೀಸಲಾತಿ ಪ್ರಕಟಗೊಂಡಿದೆ. 1ನೇ ವಾರ್ಡ್ ಹಿಂದುಳಿದ ಅ ಮಹಿಳೆ, 2ನೇ ವಾರ್ಡ್ ಸಾಮಾನ್ಯ ಮಹಿಳೆ, 3ನೇ ವಾರ್ಡ್ ಪರಿಶಿಷ್ಟ ಜಾತಿ, 4ನೇ ವಾರ್ಡ್ ಸಾಮಾನ್ಯ, 5ನೇ ವಾರ್ಡ್ ಹಿಂದುಳಿದ ಅ, 6ನೇ ವಾರ್ಡ್ ಸಾಮಾನ್ಯ ಮಹಿಳೆ, 7ನೇ ವಾರ್ಡ್ ಹಿಂದುಳಿದ ಬ, 8ನೇ ವಾರ್ಡ್ ಹಿಂದುಳಿದ ಅ ಮಹಿಳೆ, 9ನೇ ವಾರ್ಡ್ ಸಾಮಾನ್ಯ, 10ನೇ ವಾರ್ಡ್ ಸಾಮಾನ್ಯ, 11ನೇ ವಾರ್ಡ್ ಸಾಮಾನ್ಯ ಮಹಿಳೆ, 12ನೇ ವಾರ್ಡ್ ಸಾಮಾನ್ಯ, 13ನೇ ವಾರ್ಡ್ ಹಿಂದುಳಿದ ಅ, 14ನೇ ವಾರ್ಡ್ ಹಿಂದುಳಿದ ಅ, 15ನೇ ವಾರ್ಡ್ ಸಾಮಾನ್ಯ, 16ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆ, 17ನೇ ವಾರ್ಡ್ ಪರಿಶಿಷ್ಟ ಪಂಗಡ, 18ನೇ ವಾರ್ಡ್ ಸಾಮಾನ್ಯ ಮಹಿಳೆ ಹಾಗೂ 19ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. 24ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಇದುವರೆಗೂ ಒಂದು ನಾಮಪತ್ರವೂ ಸಲ್ಲಿಕೆಯಾಗಿಲ್ಲ. ಅ. 31 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ನ. 4ರಂದು ನಾಮಪತ್ರ ಹಿಂಪಡೆಯುವ ಕೊನೆದಿನವಾಗಿದೆ. ನ. 12ರಂದು ಚುನಾವಣೆ ಜರುಗಲಿದೆ.
ಮೂರೂ ಪಕ್ಷಗಳಿಗೆ ಅಧಿಕಾರ: ಕಳೆದ ಅವಧಿಯಲ್ಲಿ ಬಿಜೆಪಿಯ 6, ಕಾಂಗ್ರೆಸ್ನ 6 ಹಾಗೂ ಜೆಡಿಎಸ್ನ 3 ಜನ ಆಯ್ಕೆಗೊಂಡಿದ್ದರು. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದೆ ಮೈತ್ರಿಯೊಂದಿಗೆ ಆಡಳಿತ ಚುಕ್ಕಾಣಿ ಹಿಡಿಯುವುದು ಅನಿವಾರ್ಯವಾಗಿತ್ತು. ಮೊದಲನೇ ಅವ ಧಿಗೆ ಅಧ್ಯಕ್ಷ ಸ್ಥಾನಕ್ಕೆಪರಿಶಿಷ್ಟ ಜಾತಿ ಮೀಸಲಾಗಿದ್ದರಿಂದ ಬಿಜೆಪಿ ಸದಸ್ಯರಾಗಿದ್ದ ಯಲ್ಲವ್ವ ಭಜಂತ್ರಿಗೆ ಯಾರೂ ಎದುರಾಳಿ ಇಲ್ಲದೆ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಉಪಾಧ್ಯಕ್ಷ ಸ್ಥಾನ ಜೆಡಿಎಸ್ ತೆಕ್ಕೆಗೆ ಹೋಗಿತ್ತು. 30 ತಿಂಗಳ ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿ ಮುರಿದುಬಿದ್ದಿತ್ತು.ಬಳಿಕ ಜೆಡಿಎಸ್-ಕಾಂಗ್ರೆಸ್ಮೈತ್ರಿ ಆರಂಭಗೊಂಡು, ಮೊದಲ ಅವಧಿಗೆ ಜೆಡಿಎಸ್ನ ಮಲ್ಲಿಕಾರ್ಜುನ ಕಿರೇಸೂರ ಅಧಿಕಾರಕ್ಕೇರಿದರು. ನಂತರ ಕಾಂಗ್ರೆಸ್ನ ಅಜೀಜ ಕ್ಯಾಲಕೊಂಡ ಹಾಗೂ ಹಾಸಂಬಿ ಛಡ್ಡಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದು ಈಗ ಇತಿಹಾಸ.
ಅಭಿವೃದ್ಧಿ ಅಷ್ಟಕ್ಕಷ್ಟೆ: ಕಳೆದ ಐದು ವರ್ಷದ ಆಡಳಿತದಲ್ಲಿ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು ಮಾತ್ರ ಅಷ್ಟಕ್ಕಷ್ಟೆ. ಕೆಲವೆಡೆ ಹದಿನೈದು ದಿನಕ್ಕೊಮ್ಮೆ ನೀರು ಬರುತ್ತಿದ್ದು, ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಹಗಲಲ್ಲೇ
ಸೊಳ್ಳೆಗಳ ಭರಾಟೆಯಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಈಗ ಮತ್ತೂಂದು ಚುನಾವಣೆ ಬಂದಿದ್ದು ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳು ಹೊಸ ಹೊಸ ಬಣ್ಣದ ಆಮಿಷ ನೀಡುತ್ತಾ ಮತ್ತೆ ಮತ ಭಿಕ್ಷೆಗೆಸಜ್ಜಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿಯವರು ಅಷ್ಟೊಂದು ಹಿಡಿತ ಇಲ್ಲದಿರುವುದರಿಂದ ಬಿ ಫಾರ್ಮ್ ಹಂಚುವುದೇ ತಲೆಬಿಸಿಯಾಗಿದೆ. ಇನ್ನು ಬಿಜೆಪಿಯಲ್ಲಿ ಮಾಜಿ ಶಾಸಕ
ಎಸ್.ಐ. ಚಿಕ್ಕನಗೌಡ್ರ ಹಾಗೂ ಮುಖಂಡ ಎಂ.ಆರ್. ಪಾಟೀಲ ಬೆಂಬಲಿಗರ ಗುಂಪಿದೆ. ಇಲ್ಲೂ ಸಹ ಬಿ ಫಾರ್ಮ್ ಹಂಚಲು ಸಚಿವರ- ಸಂಸದರ ಶಿಫಾರಸನ್ನು ತರುತ್ತಿರುವುದು ಕೇಳಿಬರುತ್ತಿದೆ. ಎರಡೂ ಪಕ್ಷಗಳ ಬಿ ಫಾರ್ಮ್ ವಂಚಿತರು ಜೆಡಿಎಸ್ ಕಡೆಗೆ ವಾಲುತ್ತಾರೆ ಎಂಬ ಮಾತು ದಟ್ಟವಾಗಿದೆ.
-ಶೀತಲ ಎಸ್. ಮುರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು