ಕುದರಿ ಮೇಲೆ ಸದಸ್ಯರ ಸವಾರಿ


Team Udayavani, Dec 9, 2017, 1:22 PM IST

h3-kudari.jpg

ಧಾರವಾಡ: ನಿಗದಿತ ಸಮಯಕ್ಕೆ ಸಭೆಗೆ ಹಾಜರಾಗದ ತಹಶೀಲ್ದಾರ್‌ ಪ್ರಕಾಶ ಕುದರಿ ಅವರ ನಡವಳಿಕೆ ಖಂಡಿಸಿ ತಾಪಂ ಸರ್ವ ಸದಸ್ಯರು ಕೆಲ  ಇಲಾಖೆಯ ಪ್ರಗತಿ ಪರಿಶೀಲನೆ ಮಾಡದೇ ಸಾಮಾನ್ಯ ಸಭೆಯನ್ನು ಡಿ. 13ಕ್ಕೆ ಮುಂದೂಡಿದ ಘಟನೆ ಶುಕ್ರವಾರ ಇಲ್ಲಿನ ತಾಪಂ ಸಭಾಭವನದಲ್ಲಿ ನಡೆಯಿತು.

ತಹಶೀಲ್ದಾರ್‌ ಯಾಕೆ ಬಂದಿಲ್ಲ? ಇದು ಅವರು ಗೈರಾಗುತ್ತಿರುವ ಸತತ ಮೂರನೇ ಸಾಮಾನ್ಯ ಸಭೆ. ರೈತರ ಬೆಳೆವಿಮೆ  ಪರಿಹಾರ, ಪಡಿತರ ಚೀಟಿ ಹೀಗೆ ಎಲ್ಲದಕ್ಕೂ ಅವರಿಂದಲೇ ನಮಗೆ ಉತ್ತರ ಬೇಕು. ಅವರಿಲ್ಲ ಎಂದಾದ ಮೇಲೆ ಈ ಸಭೆಯನ್ನೇ ಮುಂದೂಡಿ ಎಂದು ತಾಪಂ  ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. 

ತಾಪಂ ಅಧ್ಯಕ್ಷ ಮಲ್ಲನಗೌಡ ಭಾವಿಕಟ್ಟಿ ಹಾಗೂ ಇಒ ರುದ್ರಸ್ವಾಮಿ ಮಾತನಾಡಿ, ಕೋರ್ಟ್‌ ಕೇಸ್‌  ಇರುವುದರಿಂದ  ಅದನ್ನು ಮುಗಿಸಿಕೊಂಡು ಮಧ್ಯಾಹ್ನ 1:30ಕ್ಕೆ ತಹಶೀಲ್ದಾರ್‌ ಆಗಮಿಸುತ್ತಾರೆ ಎಂದು ಸಭೆಗೆ ತಿಳಿಸಿದರು. ಆಗ ತಹಶೀಲ್ದಾರ್‌ ಬಂದ  ಮೇಲೆಯೇ ಕಂದಾಯ ಇಲಾಖೆ, ಪಡಿತರ ಚೀಟಿ, ಬೆಳೆಹಾನಿ, ಬೆಳ ಪರಿಹಾರದ ವಿಷಯ ಚರ್ಚಿಸೋಣ ಎಂದು ಸದಸ್ಯರು ನಿರ್ಧರಿಸಿದರು.

ಮಧ್ಯಾಹ್ನ 2:30 ಆದರೂ ತಹಶೀಲ್ದಾರ್‌ ಸಭೆಗೆ ಹಾಜರಾಗದ್ದರಿಂದ ಅವರು  ಬಂದರೆ ಮಾತ್ರ ಸಭೆ ನಡೆಸಲು ಅವಕಾಶ ನೀಡಲಾಗುವುದು ಎಂದು ಸದಸ್ಯರು ಪಟ್ಟು  ಡಿದರು. ಈ ವೇಳೆ ಸಭೆಯಲ್ಲಿ  ಕೋಲಾಹಲ ಉಂಟಾಯಿತು. ಆಗ ಅಧ್ಯಕ್ಷರು ಹಾಗೂ ಇಒ ಸಭೆ ಮೊಟಕುಗೊಳಿಸಿದರು. 

ಕುದರಿ ತರಾಟೆಗೆ: ಸಭೆ ಮೊಟಕುಗೊಳಿಸುವಂತೆ ಸದಸ್ಯರು ಆಗ್ರಹಿಸುತ್ತಿದ್ದಂತೆ ತಹಶೀಲ್ದಾರ್‌ ಪ್ರಕಾಶ ಕುದರಿ ಆಗಮಿಸಿದರು. ಅವರನ್ನು ತೀವ್ರ ತರಾಟೆಗೆ  ತೆಗೆದುಕೊಂಡ ಸದಸ್ಯರು, ಸತತ ಮೂರು ಸಭೆಗೆ ಗೈರಾಗಿ ತಾಪಂ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಅವಮಾನ ಮಾಡಿದ್ದೀರಿ. ಬೆಳಗ್ಗೆ ಸಭೆಗೆ ಬರಬೇಕಾದ  ನೀವು ಮುಗಿದ ಮೇಲೆ ಏಕೆ ಬಂದಿದ್ದೀರಿ. ತಾಲೂಕಿನಾದ್ಯಂತ ಜನರು ಪಡಿತರ ಚೀಟಿ, ಬೆಳೆ ಪರಿಹಾರ ಸಮಸ್ಯೆ ಬಗೆಹರಿಸುತ್ತಿಲ್ಲ.

ಮುಂದಿನ ಸಭೆಗಾದ್ರೂ  ಬನ್ನಿ ಎಂದು ಖಾರವಾಗಿ ನುಡಿದರು. ಸದಸ್ಯರ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ತಹಶೀಲ್ದಾರ್‌ ಕುದರಿ ಸುಮ್ಮನೆ ನಿಂತಿದ್ದರು. ಆಗ ಮಧ್ಯ  ಪ್ರವೇಶಿಸಿದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇಒ ಸರ್ವ ಸದಸ್ಯರನ್ನು ಸಮಾಧಾನಪಡಿಸಿ ಸಭೆಯನ್ನು ಡಿ. 13ಕ್ಕೆ ಮುಂದೂಡಿದ ಬಗ್ಗೆ ಮತ್ತೂಮ್ಮೆ  ಪ್ರಸ್ತಾಪಿಸಿದರು. 

ಪ್ರಗತಿ ಪರಿಶೀಲನೆ: ಹಿಂಗಾರಿ ಬೆಳೆ ವಿಮೆ ತುಂಬುವ ಅವಧಿ ಮುಗಿದು ಹೋಗಿದ್ದು, ಸರಿಯಾಗಿ ಮಾಹಿತಿ ಇಲ್ಲದೇ ಅನೇಕರು ಬೆಳೆ ವಿಮೆ ತುಂಬಿಲ್ಲ. ಈ  ವಿಷಯದಲ್ಲಿ ಗ್ರಾಮ ಸೇವಕರು ಪ್ರಚಾರ ಮಾಡಿರಲಿಲ್ಲ ಆರೋಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಅಧಿಕಾರಿ ಹಿರೇಮಠ, ನಾವು ಪ್ರತಿ  ಗ್ರಾಮಕ್ಕೂ ಬೆಳೆ ವಿಮೆ ತುಂಬುವ ಬಗ್ಗೆ ಕರಪತ್ರ ಹಂಚಿದ್ದೇವೆ.

ಈ ಹಿಂದಿನ ಬೆಳೆ ವಿಮೆ ಪರಿಹಾರ ವಿತರಣೆಗೆ ಇನ್ಸೂರೆನ್ಸ್‌ ಕಮಿಟಿ ನೇಮಿಸಲಾಗಿದ್ದು,  ಅದರಿಂದ ವರದಿ ಬಂದ ನಂತರ ವಿಮೆ ಹಣ ರೈತರ ಖಾತೆಗೆ ಜಮೆ ಆಗಲಿದೆ ಎಂದು ತಿಳಿಸಿದರು. ತಾಪಂ ಉಪಾಧ್ಯಕ್ಷ ಮುತ್ತಪ್ಪ ನಾಯ್ಕರ, ಸ್ಥಾಯಿ ಸಮಿತಿ  ಅಧ್ಯಕ್ಷ ಫ‌ಕ್ಕೀರಪ್ಪ ಬುಡ್ಡಿಕಾಯಿ ಇತರರಿದ್ದರು.

ಟಾಪ್ ನ್ಯೂಸ್

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.