ಸಾಯಿಬಾಬಾ ಸಮಾಧಿ ಉತ್ಸವ ಸಮಾರೋಪ
Team Udayavani, Oct 21, 2018, 5:21 PM IST
ಹುಬ್ಬಳ್ಳಿ: ಜಗತ್ತಿನ 40ಕ್ಕೂ ಹೆಚ್ಚು ದೇಶಗಳಲ್ಲಿ ಶ್ರೀ ಶಿರಡಿ ಸಾಯಿಬಾಬಾ ಮಂದಿರಗಳಿರುವುದು ಬಾಬಾನಲ್ಲಿರುವ ಭಕ್ತಿಯನ್ನು ತೋರುತ್ತದೆ ಎಂದು ಶಿರಡಿ ಶ್ರೀ ಸಾಯಿಬಾಬಾ ವಿಶ್ವಸ್ಥ ವ್ಯವಸ್ಥಾ ಮಂಡಳಿ ಸದಸ್ಯ ಬಿಪಿನ್ದಾದಾ ಕೋಳೆ ಹೇಳಿದರು.
ಕೋರ್ಟ್ ವೃತ್ತದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಡೆದ 100ನೇ ಶ್ರೀ ಶಿರಡಿ ಸಮಾಧಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಶಿರಡಿ ಸಾಯಿಬಾಬಾ ಅವರ ಚಮತ್ಕಾರ ಎಂತದ್ದು ಎಂಬುದು ಇಡೀ ಜಗತ್ತಿಗೆ ತಿಳಿದಿರುವ ವಿಷಯ. ಮುಸ್ಲಿಂ ರಾಷ್ಟ್ರಗಳಲ್ಲೂ ಸಾಯಿಬಾಬಾ ಅವರ ಮಂದಿರಗಳಿವೆ ಎಂದು ಹೆಮ್ಮೆಯಿಂದ ಹೇಳಬಹುದು. ಸಬ್ ಕಾ ಮಾಲಿಕ್ ಏಕ್ ಹೇ ಎನ್ನುವ ಬಾಬಾ ಅನುಯಾಯಿಗಳು, ಭಕ್ತರು ಅಪಾರ. ಅವರು ಬಾಬಾನಿಗೆ ಸಲ್ಲಿಸುವ ಸೇವೆಯೂ ಅಪಾರವಾಗಿದೆ ಎಂದರು.
ಕಳೆದ 10 ದಿನಗಳಲ್ಲಿ ದೇಶದಲ್ಲಿರುವ ಸಾಯಿಬಾಬಾ ಮಂದಿರಗಳಲ್ಲಿ ಲಕ್ಷಾಂತರ ಜನರು ಅವರ ಪಾದುಕೆ ದರ್ಶನ ಮಾಡುವ ಮೂಲಕ ಪುನೀತರಾಗಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಂದಿರದ ಅಧ್ಯಕ್ಷ ಅಪ್ಪಾಸಾಹೇಬ ಚವ್ಹಾಣ ಮಾತನಾಡಿ, ಶ್ರೀ ಶಿರಡಿ ಸಾಯಿಬಾಬಾ ಅವರ 100ನೇ ಸಮಾಧಿ ಉತ್ಸವ ನಿಮಿತ್ತ ಮಂದಿರದಲ್ಲಿ 9 ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮ, ಸತತ 24 ಗಂಟೆಗಳ ಕಾಲ ಭಜನೆ, ಪ್ರವಚನ ಮೊದಲಾದ ಕಾರ್ಯಕ್ರಮ ನಡೆಸಲಾಯಿತು ಎಂದು ಹೇಳಿದರು.
ಶ್ರೀ ಪ್ರದೀಪ ಗುರೂಜಿ, ಡಾ| ಚಂದ್ರಕಾಂತ ಮಡಗಾಂವಕರ ಮಾತನಾಡಿದರು. ಸದಾನಂದ ನಿರಂಜನ, ನರಸಿಂಗಸಾ ರತನ್, ಉಪಾಧ್ಯಕ್ಷ ಮಹಾದೇವ ಮಾಶ್ಯಾಳ, ಖಜಾಂಚಿ ಡಾ| ಟಿ.ಎಸ್. ಮೋಹನಕುಮಾರ, ನಿರ್ದೇಶಕರಾದ ಬಸವರಾಜ ಅಂಬಲಿ, ಅನಿಲಕುಮಾರ ಮಿಸ್ಕಿನ್ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ