ಮಸ್ತಕಾಭಿಷೇಕ ವೇಳೆ ವಿಶೇಷ ವರ್ಣಚಿತ್ರ ಪ್ರದರ್ಶನ
Team Udayavani, Nov 30, 2017, 1:07 PM IST
ಧಾರವಾಡ: ಸುಮಾರು ನಾಲ್ಕು ದಶಕಗಳ ಹಿಂದೆಯೇ ಶ್ರವಣಬೆಳಗೊಳದ ಬಸದಿಗಳ ಗೋಡೆಗಳ ಮೇಲಿದ್ದ ಚಿತ್ರಗಳನ್ನು ಬಿಡಿಸಿ ಸಂಗ್ರಹಿಸಿಡಲಾಗಿದ್ದು, ಮಸ್ತಕಾಭಿಷೇಕ ಸಂದರ್ಭದಲ್ಲಿ ಈ ಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗುವುದು ಎಂದು ಲಲಿತ ಕಲಾ ಅಕಾಡೆಮಿ ನೂತನ ಅಧ್ಯಕ್ಷೆ ಎಂ.ಜೆ. ಕಮಲಾಕ್ಷಿ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಕಲಾಮಂಡಳ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಶ್ರವಣಬೆಳಗೊಳದ ಬಸದಿಗಳ ಗೋಡೆಗಳ ಮೇಲಿದ್ದ ಜೈನ ಸಮುದಾಯದ ಇತಿಹಾಸ ಸೇರಿದಂತೆ ಜೈನರ ವಿಶೇಷತೆ ತಿಳಿಸುವ 100ಕ್ಕೂ ಹೆಚ್ಚು ಚಿತ್ರಗಳನ್ನು ವರ್ಣಚಿತ್ರಗಳಲ್ಲಿ ಸೆರೆಹಿಡಿಯಲಾಗಿದೆ.
ಮಸ್ತಾಕಾಭಿಷೇಕದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಈ ಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲು ಯೋಜನೆ ಇದೆ ಎಂದರು. ಅಕಾಡೆಮಿಯಿಂದ ತಿಂಗಳ ಚಿತ್ರವೆಂಬ ಕಾರ್ಯಕ್ರಮ ವರ್ಷದ 12 ತಿಂಗಳು ನಡೆಯಲಿದೆ. ಐತಿಹಾಸಿಕ ಮಹತ್ವದ ಸ್ಥಳಗಳ ಚಿತ್ರಗಳನ್ನು ಸಂಗ್ರಹಿಸುವುದು ಹಾಗೂ ಅವುಗಳನ್ನು ಡಿಜಿಟಲೀಕರಣ ಮಾಡುವ ಜವಾಬ್ದಾರಿ ತಮ್ಮ ಮೇಲಿದೆ.
ಪಾಶ್ಚಾತ್ಯ ಶೈಲಿ ಚಿತ್ರಗಳ ಬದಲು ಇತಿಹಾಸ ಸಾರುವ ಸಾಕಷ್ಟು ಸ್ಥಳೀಯ ಅಂಶಗಳು ನಮ್ಮಲ್ಲಿವೆ. ಈ ಬಗ್ಗೆ ಚಿತ್ರಕಲಾವಿದರು ಗಮನ ಹರಿಸಬೇಕಿದೆ ಎಂದರು. ಚಿತ್ರಕಲಾ ಪರಿಷತ್ ಹುಟ್ಟುವ ಮೊದಲೇ ಶತಮಾನದ ಅಂಚಿನಲ್ಲಿರುವ ಕಲಾಮಂದಿರ ಅಸ್ತಿತ್ವದಲ್ಲಿದ್ದು, ನಿರೀಕ್ಷೆಯಂತೆ ಬೆಳೆಯಲಿಲ್ಲ.
ಸದ್ಯ ರಾಜ್ಯದಲ್ಲಿ 400ಕ್ಕೂ ಹೆಚ್ಚು ಚಿತ್ರಕಲಾ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿದ್ದು, ಅದ್ಭುತ ಕಲಾವಿದರು ಬೆಳೆಯುತ್ತಿದ್ದಾರೆ. ತಂತ್ರಜ್ಞಾನ ಹಾಗೂ ಆಧುನಿಕತೆ ಬೆಳೆದರೂ ಕೈ ಕೌಶಲಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ ಎಂದು ಹೇಳಿದರು.
ಶಾಲೆಯಲ್ಲಿ ಇರಲಿ ಚಿತ್ರಕಲೆ: ಹಿರಿಯ ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ನಾವು ಶಾಲೆ ಕಲಿಯುವ ಸಂದರ್ಭದಲ್ಲಿ ಚಿತ್ರಕಲೆ, ತೋಟಗಾರಿಕೆ, ಸಂಗೀತದ ತರಗತಿಗಳು ಇದ್ದವು. ಆದರೆ, ಇದೀಗ ಈ ವಿಷಯಗಳಿಗೆ ತಕ್ಕ ಮಹತ್ವ ನೀಡುತ್ತಿಲ್ಲ.
ರಾಜ್ಯ ಸರ್ಕಾರ ಚಿತ್ರಕಲಾ ಶಿಕ್ಷಕರನ್ನು ನೇಮಿಸಿಕೊಂಡು ಕಡ್ಡಾಯವಾಗಿ ಮಕ್ಕಳಿಗೆ ಚಿತ್ರಕಲಾ ಶಿಕ್ಷಣ ನೀಡಬೇಕು. ಅಕಾಡೆಮಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು. ಕಲಾಮಂಡಳದ ವತಿಯಿಂದ ಎಂ.ಜೆ. ಕಮಲಾಕ್ಷಿ ಅವರನ್ನು ಡಾ| ಮದನಮೋಹನ ತಾವರಗೇರಿ, ಗಾಯಿತ್ರಿ ದೇಸಾಯಿ,
-ಡಾ|ಮಾಲತಿ ಪಟ್ಟಣಶೆಟ್ಟಿ ಸನ್ಮಾನಿಸಿದರು. ಕುಮುದ್ ತಾವರಗೇರಿ, ಕಲಾಮಂಡಳ ಕಾರ್ಯದರ್ಶಿ ಮಧು ದೇಸಾಯಿ, ಕಲಾವಿದರಾದ ಎಂ.ಜೆ. ಬಂಗಲೆವಾಲೆ, ಎಸ್.ಎಂ. ಲೋಹಾರ, ಎಸ್.ಕೆ. ಪತ್ತಾರ, ಅಭಿಷೇಕ ದೇಸಾಯಿ, ಚಿಕ್ಕಮಠ, ಬಿ.ಎಚ್. ಕುರಿಯವರ, ಬಿ.ಎನ್. ಕುಂಬಾರ, ಶಶಿಧರ ನರೇಂದ್ರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು