ಮಾಹಿತಿಯ ಕಣಜ ಈ ಪೋರ

550ಕ್ಕೂ ಚಿತ್ರಪಟ ಗುರುತಿಸುತ್ತಾನೆ

Team Udayavani, Jun 15, 2020, 12:50 PM IST

ಮಾಹಿತಿಯ ಕಣಜ ಈ ಪೋರ

ಹುಬ್ಬಳ್ಳಿ: ಐದು ವರ್ಷದ ಈ ಪೋರ ದೇಶ, ವಿದೇಶಿ ಗಣ್ಯರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ, ವಚನಗಳು, ತತ್ವ ಪದಗಳು ಹೀಗೆ ಹಲವು ಕ್ಷೇತ್ರದ ಸಾಧಕರ ಸಾಧನೆಗಳನ್ನು ಲೀಲಾಜಾಲವಾಗಿ ಹೇಳುತ್ತಾನೆ. ತನ್ನ ಬುದ್ಧಿ ಸಾಮರ್ಥ್ಯದಿಂದ ವಯಸ್ಸಿಗೆ ಮೀರಿ ಸಾಧನೆ ಮಾಡುತ್ತಿರುವ ಬಾಲಕ ಹಲವು ಸಾಧನೆಯ ಪ್ರಶಸ್ತಿ- ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿದ್ದಾನೆ.

ಇಲ್ಲಿನ ತಬೀಬ್‌ ಲ್ಯಾಂಡ್‌ ನಿವಾಸಿಗಳಾದ ಗಿರೀಶಗೌಡ ಪಾಟೀಲ ಹಾಗೂ ಶಿವಲೀಲಾ ಪಾಟೀಲ ಅವರು ಪುತ್ರ ಸಿದ್ಧಾರ್ಥಗೌಡ ಪಾಟೀಲ ಚಟುವಟಿಕೆಗಳನ್ನು ನೋಡಿದರೆ ಎಂತಹವರಾದರೂ ಬಾಯಿ ಮೇಲೆ ಬೆರಳಿಟ್ಟುಕೊಳುತ್ತಾರೆ. ಎರಡು ವರ್ಷ ದವನಾಗಿದ್ದಾಗಲೇ ತನಲ್ಲಿ ಅಗಾಧ ಜ್ಞಾನಶಕ್ತಿಯ ಸಾಮರ್ಥ್ಯವಿದೆ ಎಂದು ಸಾಬೀತು ಮಾಡಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಧಕ ಪ್ರಶಸ್ತಿಗಳನ್ನು ಪಡೆದಿದ್ದಾನೆ. ಇಲ್ಲಿನ ಕಾನೂನು ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಗಿರೀಶ ಪಾಟೀಲ ಹಾಗೂ ಗೃಹಿಣಿಯಾಗಿರುವ ತಾಯಿ ಶಿವಲೀಲಾ ಅವರೇ ಗುರುಗಳಾಗಿದ್ದು, ಮನೆಯೇ ಮೊದಲ ಪಾಠ ಶಾಲೆಯಾಗಿದೆ.

ಸಿದ್ಧಾರ್ಥನ ವಿಶೇಷ ಸಾಮರ್ಥ್ಯ: ನಾನಾ ಕ್ಷೇತ್ರದಲ್ಲಿ ಸಾಧಕರ, ಮಹಾನ್‌ ಚಿಂತಕರು, ಸ್ವಾತಂತ್ರ್ಯ ಹೋರಾಟಗಾರರ ಸುಮಾರು 550ಕ್ಕೂ ಚಿತ್ರಪಟಗಳನ್ನು ಗುರುತಿಸಿ ಅವರ ಸಾಧನೆಯ ಕ್ಷೇತ್ರವನ್ನು ಹೇಳುತ್ತಾನೆ. 350ಕ್ಕೂ ಹೆಚ್ಚು ಕಂಪನಿಯ ಲೋಗೋ, ಧಾರ್ಮಿಕ ಚಿನ್ಹೆಗಳು ನೆನಪಿನಲ್ಲಿವೆ. ರಾಜ್ಯಗಳ ವೈಶಿಷ್ಟÂ, ಗಾದೆ ಮಾತುಗಳು ಅವುಗಳ ಭಾವಾರ್ಥ, ಖ್ಯಾತ ಕ್ರೀಡಾ ಪಟುಗಳು, ಗಣಿತಶಾಸ್ತ್ರಜ್ಞರು, ವಿಜ್ಞಾನಿಗಳು, ಸಂಗೀತ ಗಾರರು, ದೇಶದ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳು, ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿ ಹೆಸರುಗಳನ್ನು ನಿರರ್ಗಳವಾಗಿ ಹೇಳುತ್ತಾನೆ. ಜ್ಞಾನಪೀಠ ಪುರಸ್ಕೃತರ, ದಾಸ ಪರಂಪರೆಯ ಪ್ರಮುಖರು, ಪ್ರಮುಖ ರಾಜ, ರಾಣಿಯರು, ಮಹಾನ್‌ ವ್ಯಕ್ತಿಗಳ ಘೋಷಣೆಗಳು, ಸಾಮಾಜಿಕ ಹೋರಾಟಗಾರರು, ಖ್ಯಾತ ಲೇಖಕರು, ಸಾಹಿತಿಗಳು, ಕವಿಗಳು ಅವರ ಪ್ರಮುಖ ಗ್ರಂಥ ಅಷ್ಟೇ ಅಲ್ಲ ವಿಶ್ವದ ಗಮನ ಸೆಳೆದ ವಿವಿಧ ದೇಶದ ಪ್ರಮುಖ ವ್ಯಕ್ತಿಗಳ ಭಾವಚಿತ್ರಗಳನ್ನು ತಟ್ಟನೆ ಗುರುತಿಸಿ ಅವರ ಸಾಧನೆ ಸೇರಿದಂತೆ ಹಲವು ವಿಷಯ ಕೇಳಿ ತಿಳಿದುಕೊಂಡು ಲೀಲಾಜಾಲವಾಗಿ ವಿವರಿಸುವ ಸಿದ್ಧಾರ್ಥ, ಗಿನ್ನಿಸ್‌ ರೆಕಾರ್ಡ್‌ ಮಾಡಬೇಕೆಂಬ ಗುರಿ ಹೊಂದಿದ್ದಾನೆ.

ಅಪಾರ ದೈವಭಕ್ತಿ: ಸಿದ್ಧಾರ್ಥ ನಿತ್ಯ ಕನಿಷ್ಠ 45 ನಿಮಿಷ ಪೂಜೆ ಪುನಸ್ಕಾರ ಹಾಗೂ ಆಧ್ಯಾತ್ಮಕ್ಕೆ ಸಮಯ ಮೀಸಲು. ಲಿಂಗಪೂಜೆ-ಧ್ಯಾನದಲ್ಲಿ ತೊಡಗುತ್ತಾನೆ. 40ಕ್ಕೂ ಹೆಚ್ಚು ಬಸವಣ್ಣನವರ ವಚನಗಳು, ಶಿಶುವಿನಾಳ ಶರೀಫರ ತತ್ವದ ಪದಗಳು, ಶ್ಲೋಕಗಳು, ದಾಸರ ಪದ, ಭಕ್ತಿಗೀತೆಗಳು ಲಯಬದ್ಧವಾಗಿ ಹೇಳುತ್ತಾನೆ.

ಪ್ರಶಸ್ತಿ, ಪುರಸ್ಕಾರ: ಕಳೆದ ಮೂರು ವರ್ಷದಿಂದ ಮಗನ ಆಸಕ್ತಿಗೆ ತಂದೆ ತಾಯಿ ನೀರೆರೆದ ಪರಿಣಾಮ ಸಿದ್ಧಾರ್ಥ ಹಲವು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾನೆ. ತಮಿಳುನಾಡಿನ ಖಾಸಗಿ ವಿಶ್ವವಿದ್ಯಾಲಯವೊಂದು ಸಿದ್ಧಾರ್ಥನ ಸಾಧನೆಗೆ ಡಾಕ್ಟರೇಟ್‌ ಇನ್‌ ರೆಕಾರ್ಡ್‌ ಬ್ರೇಕಿಂಗ್‌, ಯುನಿವರ್ಸಲ್‌ ಅಚೀವರ್ ಬುಕ್‌ ಆಫ್‌ ರೆಕಾರ್ಡ್‌, ಫ್ಯೂಚರ್‌ ಕಲಾಂ ಬುಕ್‌ ಆಫ್‌ ರೆಕಾರ್ಡ್‌, ಕಲಾಂ ಬುಕ್‌ ಆಫ್‌ ರೆಕಾರ್ಡ್‌, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌, ಕರ್ನಾಟಕ ಅಚೀವರ್ ಬುಕ್‌ ಆಫ್‌ ರೆಕಾರ್ಡ್‌ ಪುರಸ್ಕಾರಗಳನ್ನು ತನ್ನಾಗಿಸಿಕೊಂಡ ಸಿದ್ಧಾರ್ಥ ಶಾಲಾ ಕಲಿಕೆಯಲ್ಲೂ ಬಲು ಚೂಟಿ.

ಎರಡು ವರ್ಷದವನಿದ್ದಾಗ ಇವನ ಆಸಕ್ತಿ ಗುರುತಿಸಿ ಅದನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದೆವು. ಯಾವುದಾದರೂ ಸಾಧನೆ ಮಾಡಬೇಕೆನ್ನುವುದು ಕಿಂಚಿತ್ತು ಇರಲಿಲ್ಲ. ಅವನಲ್ಲಿರುವ ನೆನೆಪಿನ ಶಕ್ತಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿದೆ. ಆಟಿಕೆ ಸಾಮಗ್ರಿಗಳ ಬದಲು ಚಿತ್ರಪಟ, ದೈವಿಕ ಸಾಮಗ್ರಿಗಳನ್ನು ಹೆಚ್ಚಾಗಿ ಇಷ್ಟಪಡುತ್ತಾನೆ.  ಗಿರೀಶಗೌಡ ಪಾಟೀಲ, ಸಿದ್ಧಾರ್ಥನ ತಂದೆ

ನಾವು ಹೇಳಿದ ವಿಷಯವನ್ನು ನೆನಪಿನಲ್ಲಿಟ್ಟುಕೊಂಡು ಯಾವಾಗ ಕೇಳಿದರೂ ಅದನ್ನು ಸಂಪೂರ್ಣವಾಗಿ ಹೇಳುತ್ತಾನೆ. ಮಕ್ಕಳ ಆಸಕ್ತಿ ಗುರುತಿಸಿ ಪ್ರೋತ್ಸಾಹ ನೀಡಬೇಕೆನ್ನುವುದನ್ನು ನಾವು ರೂಢಿಸಿಕೊಂಡು ಮನೆಯಲ್ಲಿ ಹೇಳಿಕೊಡುತ್ತಿದ್ದೇವೆ.  ಶಿವಲೀಲಾ ಪಾಟೀಲ, ಸಿದ್ಧಾರ್ಥನ ತಾಯಿ

ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.