ದೀಪಾವಳಿ ಪ್ರಯುಕ್ತ ತತ್ಕಾಲ್ ವಿಶೇಷ ರೈಲು
Team Udayavani, Nov 8, 2018, 6:10 AM IST
ಹುಬ್ಬಳ್ಳಿ: ದೀಪಾವಳಿ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆ ಒದಗಿಸಲಿದೆ. ಯಶವಂತಪುರ-ಹುಬ್ಬಳ್ಳಿ ತತ್ಕಾಲ್ ಎಕ್ಸ್ಪ್ರೆಸ್ (06583) ರೈಲು ನ.11ರಂದು ರಾತ್ರಿ 11 ಗಂಟೆಗೆ ಯಶವಂತಪುರದಿಂದ ಹೊರಡಲಿದ್ದು, ಮರುದಿನ ಮಧ್ಯಾಹ್ನ 2:35ಕ್ಕೆ ಹುಬ್ಬಳ್ಳಿಗೆ ಬರಲಿದೆ.
ಒಂದು ಟ್ರಿಪ್ ಮಾತ್ರ ಸಂಚರಿಸುವ ರೈಲು ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರ, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ ಮಾರ್ಗವಾಗಿ ಸಂಚರಿಸಲದೆ.
ತತ್ಕಾಲ್ ಎಕ್ಸ್ಪ್ರೆಸ್:ಹುಬ್ಬಳ್ಳಿ-ಯಲಹಂಕ ಮಧ್ಯೆ (ಹೊಸಪೇಟೆ ಮಾರ್ಗವಾಗಿ) ವಿಶೇಷ ತತ್ಕಾಲ್( 06584) ರೈಲು ಸೇವೆ ಕಲ್ಪಿಸಲಾಗುವುದು. ರೈಲು ನ.11ರಂದು ಸಂಜೆ 4:45ಕ್ಕೆ ಹುಬ್ಬಳ್ಳಿಯಿಂದ ಪ್ರಯಾಣ ಬೆಳೆಸಲಿದ್ದು, ಯಲಹಂಕ ನಿಲ್ದಾಣಕ್ಕೆ ಮರುದಿನ ಬೆಳಗ್ಗೆ 8 ಗಂಟೆಗೆ ಬಂದು ಸೇರಲಿದೆ. ರೈಲು ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ಬಳ್ಳಾರಿ, ರಾಯದುರ್ಗ, ಚಿತ್ರದುರ್ಗ, ಚಿಕ್ಕಜಾಜೂರ, ಕಡೂರ, ಅರಸಿಕೆರೆ, ತುಮಕೂರ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ಬೋಗಿಗಳ ಸೇರ್ಪಡೆ: ದೀಪಾವಳಿ ಪ್ರಯುಕ್ತ ಕೆಲವು ರೈಲುಗಳಿಗೆ ತಾತ್ಕಾಲಿಕವಾಗಿ ಬೋಗಿ ಜೋಡಿಸಲಾಗುವುದು. ಬೆಂಗಳೂರು ನಗರ-ಹುಬ್ಬಳ್ಳಿ ಜನಶತಾಬ್ದಿ (1207912080) ರೈಲಿಗೆ ನ.11ರವರೆಗೆ ಒಂದು ಚೇರ್ ಕಾರ್ ಜೋಡಿಸಲಾಗುವುದು. ಹುಬ್ಬಳ್ಳಿ-ಚೆನ್ನೈ ಎಕ್ಸ್ಪ್ರೆಸ್ (22697/22698) ರೈಲಿಗೆ ನ.10 ಹಾಗೂ ನ.11ರಂದು ಒಂದು 3-ಟೈರ್ ದ್ವಿತೀಯ ದರ್ಜೆ ಸ್ಲಿàಪರ್ ಕೋಚ್ ಜೋಡಿಸಲಾಗುವುದು. ಬೆಂಗಳೂರು ನಗರ-ಕೊಲ್ಹಾಪುರ (16589/16590) ರಾಣಿ ಚನ್ನಮ್ಮ ಎಕ್ಸ್ಪ್ರೆಸ್ ರೈಲಿಗೆ ನ.11ರವರೆಗೆ ಒಂದು 3 ಟೈರ್ ದ್ವಿತೀಯ ದರ್ಜೆ ಸ್ಲಿàಪರ್ ಕೋಚ್ ಅಳವಡಿಸಲಾಗುವುದು. ಮೈಸೂರು-ತಾಳಗುಪ್ಪ (16227/16228) ರೈಲಿಗೆ ನ.9ರಿಂದ ನ.12ವರೆಗೆ ಒಂದು 3-ಟೈರ್ ದ್ವಿತೀಯ ದರ್ಜೆ ಸ್ಲಿàಪರ್ ಕೋಚ್ ಜೋಡಿಸಲಿದೆ.
ಮೈಸೂರು-ಧಾರವಾಡ ಎಕ್ಸ್ಪ್ರೆಸ್ (17301/17302)ರೈಲಿಗೆ ನ.10ರವರೆಗೆ ಒಂದು 3-ಟೀರ್ ದ್ವಿತೀಯ ದರ್ಜೆ ಸ್ಲಿàಪರ್ ಕೋಚ್ ಅಳವಡಿಸಲಾಗುವುದು. ಮೈಸೂರು-ಸೊಲ್ಲಾಪುರ ಗೋಲ್ಗುಂಬಜ್ ಎಕ್ಸ್ಪ್ರೆಸ್ (16535/16536) ರೈಲಿಗೆ ನ.12ರವರೆಗೆ ಒಂದು 3-ಟೀರ್ ದ್ವಿತೀಯ ದರ್ಜೆ ಸ್ಲಿàಪರ್ ಕೋಚ್ ಜೋಡಿಸಲಾಗುವುದು. ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸ್ಪ್ರೆಸ್ (16591) ರೈಲಿಗೆ ನ.10 ಹಾಗೂ ನ.11ರಂದು ಒಂದು 3-ಟೀರ್ ಎಸಿ ಕೋಚ್ ಜೋಡಿಸಲು ನಿರ್ಧರಿಸಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
MUST WATCH
ಹೊಸ ಸೇರ್ಪಡೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ