ಪರಿಸರ ಸಂಪತ್ತಿನ ನಿಷ್ಕಾಳಜಿ ಶೋಚನೀಯ; ಪರಿಸರವಾದಿ ಹೆಬ್ಳೀಕರ್
ಜ್ಞಾನ ಹಂಚಿಕೆಯಾಗಬೇಕು ಹೊರತು ಮಾರಾಟವಾಗಬಾರದು
Team Udayavani, Feb 25, 2023, 10:29 AM IST
ಧಾರವಾಡ: ನಾಗರಿಕತೆ ಹುಟ್ಟಿದ್ದು ಪರಿಸರದ ಮೇಲೆ. ಹೀಗೆ ವಿಕಸಿತಗೊಂಡ ನಾಗರಿಕತೆ ಇಂದು ಅಳಿವಿನಂಚಿನಲ್ಲಿದೆ. ನಮ್ಮ ನೆಲದ ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಯಬೇಕಾದರೆ ನಮ್ಮ ಪರಿಸರವನ್ನು ರಕ್ಷಿಸಬೇಕು ಎಂದು ಪರಿಸರವಾದಿ ಸುರೇಶ ಹೆಬ್ಳೀಕರ್ ಹೇಳಿದರು.
ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಬೆಂಗಳೂರಿನ ಅಸೀಮಾ ಪ್ರತಿಷ್ಠಾನ ಹಾಗೂ ಮೈಸೂರಿನ ಫೋಟೋ ಜರ್ನಲಿಸಂ ಅಕಾಡೆಮಿ ಆಶ್ರಯದಲ್ಲಿ ನಡೆದ ಪತ್ರಿಕೋದ್ಯಮ ವಿಭಾಗದ 40ನೇ ವರ್ಷಾಚರಣೆ ಮತ್ತು ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದ ಜನರಲ್ಲಿ ಇರುವ ಜ್ಞಾನ ಬೇರೆ ಯಾವ ಪಾಶ್ಚಿಮಾತ್ಯ ದೇಶಗಳಲ್ಲಿ ಇಲ್ಲ. ಆದರೆ ಇಲ್ಲಿನ ಜನರು ಪರಿಸರ ಸಂಪತ್ತಿನ ಬಗೆಗೆ ಇರುವ ನಿಷ್ಕಾಳಜಿ ಶೋಚನೀಯ. ಸಾಮಾಜಿಕತೆ, ಆರ್ಥಿಕತೆ, ಸಂಸ್ಕೃತಿ ಎಲ್ಲವೂ ಪರಿಸರ ನೀಡಿದ ಕೊಡುಗೆಗಳು. ಆದರೆ ದೇಶವು ಆರ್ಥಿಕತೆಯಲ್ಲಿ ಮುಂದುವರಿಯಬೇಕೆಂಬ ದುರಾಸೆಯಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಅಗತ್ಯತೆಗೂ ಮೀರಿ ಬಳಸುತ್ತಿದೆ. ನಿಸರ್ಗದ ಮೇಲಿನ ಒತ್ತಡದ ಪರಿಣಾಮ ಪ್ರಪಂಚದಲ್ಲಿ
ಮುಂದುವರಿದ ದೇಶಗಳೆಲ್ಲ ಭೂಕಂಪ ಹಾಗೂ ಹವಾಮಾನ ವೈಪರಿತ್ಯದಂತಹ ಪರಿಣಾಮಗಳನ್ನು ಎದುರಿಸುತ್ತಿವೆ ಎಂದರು.
ಅಸೀಮಾ ಪತಿಷ್ಠಾನದ ಪ್ರಮೋದ ಸುಬ್ಬರಾವ್ ಮಾತನಾಡಿ, ಪರಿಸರ ಯಾವುದೇ ಸ್ವಾರ್ಥವಿಲ್ಲದೆ ಮನುಷ್ಯರ ಅಗತ್ಯತೆಗಳನ್ನು ಒದಗಿಸುತ್ತದೆ. ಆದರೆ ಮನುಷ್ಯ ತ್ಯಾಜ್ಯ ವಸ್ತುಗಳನ್ನು ಹಾಗೂ ಅನೇಕ ರೀತಿಯಿಂದ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಮನುಷ್ಯ ಸ್ವಾರ್ಥ ಕಡಿಮೆ ಮಾಡಿ ಪರಿಸರದ ಕಡೆಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ರಶ್ಮಿ ಎಸ್. ಮಾತನಾಡಿ, ಸ್ಥಳೀಯ ಪಾರಂಪರಿಕ ಜ್ಞಾನವನ್ನು ಅರಿತುಕೊಳ್ಳಬೇಕು. ಕೃತಕ ಬುದ್ಧಿಮತ್ತೆಯು ಇಂದು ಪತ್ರಕರ್ತರ ಸ್ಥಾನವನ್ನು ಕಬಳಿಸುವ ಸಂದರ್ಭದಲ್ಲಿ ಮಾನವೀಯತೆಗಾಗಿ ಪತ್ರಿಕೋದ್ಯಮ ಕೆಲಸ ಮಾಡಬೇಕಿದೆ. ಪತ್ರಿಕೋದ್ಯಮವನ್ನು ಅನ್ನಕ್ಕಾಗಿ ಮಾಡಬಾರದು, ಅಂತಃಕರಣಕ್ಕೆ ಮಾಡಬೇಕು.
ಜ್ಞಾನ ಹಂಚಿಕೆಯಾಗಬೇಕು ಹೊರತು ಮಾರಾಟವಾಗಬಾರದು. ಪಾರಂಪರಿಕ ಜ್ಞಾನವನ್ನು ಪತ್ರಿಕೋದ್ಯಮದವರು ದಾಖಲಿಸಲು ಸಾಧ್ಯ. ಸಣ್ಣ ಸಣ್ಣ ವಿಷಯಗಳನ್ನು ಬೆನ್ನತ್ತಿ ಹೋಗಿ ದಾಖಲೆಗಳನ್ನು ನೀಡಿ ಚಳವಳಿಯ ಕಾಲವನ್ನು ಸೃಷ್ಟಿಸಬೇಕು ಎಂದರು.
ವಿಭಾಗದ ಮುಖ್ಯಸ್ಥ ಡಾ| ಜೆ.ಎಂ ಚಂದುನವರ, ಫೋಟೊ ಜರ್ನಲಿಸಂ ಅಕಾಡೆಮಿಯ ಮಂಜುನಾಥ ಎಂ. ಆರ್ ಮಾತನಾಡಿದರು. ಡಾ| ಸಂಜಯಕುಮಾರ ಮಾಲಗತ್ತಿ ಸ್ವಾಗತಿಸಿದರು. ಜಯಶ್ರೀ ಪ್ರಾರ್ಥಿಸಿದರು. ಮಮತಾ ನಾಯ್ಡು ಹಾಗೂ ಶಿವರಾಜ ವಿಶ್ವನಾಥ ಪರಿಚಯಿಸಿದರು. ಆದಿತ್ಯ ಯಲಿಗಾರ ನಿರೂಪಿಸಿದರು. ಗಂಗಾಧರ ಕಾಂಬಳೆ ವಂದಿಸಿದರು.
ಬಹುಮಾನ ವಿತರಣೆ
ಪತ್ರಿಕೋದ್ಯಮ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕವಿವಿ ಪತ್ರಿಕೋದ್ಯಮ ವಿಭಾಗದ ಶಿವರಾಜ ವಿಶ್ವನಾಥ, ದ್ವಿತೀಯ ಸ್ಥಾನ ಪಡೆದ ರಾಯಾಪುರದ ಎಸ್ಜೆಎಂಸಿ ಪದವಿ ಕಾಲೇಜಿನ ರವಿಕುಮಾರ ಚನ್ನಹಳ್ಳಿ, ತೃತೀಯ ಸ್ಥಾನ ಪಡೆದ ಹುಬ್ಬಳ್ಳಿಯ ಕೆಎಲ್ಇ ಎಸ್ಕೆ ಆರ್ಟ್ಸ್ ಕಾಲೇಜಿನ ಗ್ಲೋರಿಯಾ ರಾಜೀವ್ ಹಾಗೂ ಪರಿಸರ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹುಬ್ಬಳ್ಳಿಯ ಪಿ.ಸಿ.ಜಾಬಿನ್ ಕಾಲೇಜಿನ ಐಶ್ವರ್ಯಾ, ದ್ವಿತೀಯ ಸ್ಥಾನ ಪಡೆದ ಕೆಎಸ್ ಎಸ್ ಪದವಿ ಕಾಲೇಜಿನ ಚನ್ನವೀರಪ್ಪ, ದ್ವಿತೀಯ ಸ್ಥಾನ ಪಡೆದ ಪವಿತ್ರಾ ಅವರಿಗೆ ಬಹುಮಾನ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು