Emergency ಹೇರಿದವರು ಪ್ರಜಾಪ್ರಭುತ್ವ ಬಗ್ಗೆ ಬುದ್ದಿ ಹೇಳುತ್ತಾರೆ: ಪ್ರಹ್ಲಾದ ಜೋಶಿ
Team Udayavani, Feb 26, 2024, 3:21 PM IST
ಹುಬ್ಬಳ್ಳಿ: ನರೇಂದ್ರ ಮೋದಿಯವರು ಸರ್ವಾಧಿಕಾರಿ, ಇನ್ನೇನೋ ಆಗುತ್ತಾರೆಂದು ಟೀಕೆ ಮಾಡಲಿ. ಮೂರನೇ ಬಾರಿ ಮೋದಿಯವರು ಪ್ರಧಾನಿಯಾಗುವುದು ಶತಸಿದ್ದ. ವಿಪಕ್ಷದವರು ಇಂತಹ ಅಸಂಬದ್ದ ಟೀಕೆಗಳೊಂದಿಗೆ ಅಳುತ್ತಲೇ ಇರಬೇಕಾಗುವುದು ಅಷ್ಟೇ ಸತ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದರು.
ಅಣ್ಣಿಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗಿನಿಂದ ಹಿಡಿದು ಇಂದಿನವರೆಗೆ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷ ನಾಯಕರು ಇದೇ ರೀತಿ ಆರೋಪಿಸುತ್ತಾ ಬಂದಿದ್ದು, ಅದಕ್ಕೆ ಯಾವ ಅರ್ಥವಿಲ್ಲ. ದೇಶದಲ್ಲಿ 94 ರಾಜ್ಯ ಸರ್ಕಾರಗಳನ್ನು ಅಸಂವಿಧಾನಿಕ ರೀತಿಯಲ್ಲಿ ವಜಾಗೊಳಿಸಿದವರು, ದೇಶಕ್ಕೆ ತುರ್ತುಪರಿಸ್ಥಿತಿ ಹೇರಿದವರು ಪ್ರಜಾಪ್ರಭುತ್ವ ಬಗ್ಗೆ ನಮಗೆ ಬುದ್ದಿ ಹೇಳುತ್ತಾರಾ ಎಂದು ಪ್ರಶ್ನಿಸಿದರಲ್ಲದೆ, ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಗೊಂಡಿದೆ. ದೇಶದ ವರ್ಚಸ್ಸು ಹೆಚ್ಚಿದೆ ಇದನ್ನು ದೇಶದ ಜನತೆ ಮನಗಂಡಿದ್ದಾರೆ ಎಂದರು.
ಕಳಸಾ-ಬಂಡೂರಿ ನಾಲಾ ಯೋಜನೆಗೆ ವನ್ಯಜೀವಿ ಮಂಡಳಿಯಿಂದ ಕೆಲ ಮಾಹಿತಿ ಅಗತ್ಯವಿದೆ. ರಾಜ್ಯ ಸರ್ಕಾರ ಮಾಹಿತಿ ನೀಡಿದರೆ, ಕೇಂದ್ರದಿಂದ ಅಗತ್ಯ ಅನುಮೋದನೆಗೆ ಪ್ರಾಮಾಣಿಕ ಯತ್ನ ಮಾಡುತ್ತೇವೆ ಎಂದರು.
ಒಂದಂತು ಸ್ಪಷ್ಟ ಮೋದಿ ಅಧಿಕಾರಾವಧಿಯಲ್ಲೇ ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನ ಆಗುವುದು ಖಚಿತ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ
ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು