ಈರುಳ್ಳಿ ರೈತನ ಹಣ ಕದ್ದಿದ್ದ ಮೂವರು ಕಳ್ಳರ ಬಂಧನ
Team Udayavani, Sep 20, 2017, 12:29 PM IST
ಧಾರವಾಡ: ಈರುಳ್ಳಿ ಮಾರಾಟ ಮಾಡಿ ಹಣದೊಂದಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವನ ಹಣ ಕಳ್ಳತನ ಮಾಡಿದ್ದ ಮೂವರು ಕಳ್ಳರನ್ನು ವಿದ್ಯಾಗಿರಿ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕಿತ್ತೂರು ಮೂಲದ ದಸ್ತಗಿರಸಾಬ ಇಸ್ಮಾಯಿಲ್ಸಾಬ ಮುಲ್ಲಾ, ಹಳೇ ಹುಬ್ಬಳ್ಳಿ ಆನಂದ ನಗರ ನಿವಾಸಿ ಫರೋಜ್ ಅಬ್ದುಲಮಜೀದ ಪಂಚಮಸಾಲದಾರ ಮತ್ತು ಆಟೋ ಚಾಲಕ ಶಬ್ಬೀರ ಅಬ್ದುಲಮಜೀದ ಪಂಚಮಸಾಲದಾರ ಬಂಧಿತ ಆರೋಪಿಗಳು.
ಈಚೆಗೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕುರುಬರದಿನ್ನಿ ಗ್ರಾಮದ ಹುಸೇನಸಾಬ ಹಸನಸಾಬ ಕಬಾಡಿ ಎಂಬುವರು ತಮ್ಮ ಜಮೀನಿನಲ್ಲಿನ ಈರುಳ್ಳಿ ತಂದು ಹುಬ್ಬಳ್ಳಿಯಲ್ಲಿ ಮಾರಾಟ ಮಾಡಿ ಹಣದೊಂದಿಗೆ ಊರಿಗೆ ಮರಳುತ್ತಿರುವಾಗ,
ಎಸ್ಡಿಎಂ ಆಸ್ಪತ್ರೆ ಬಳಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಹುಸೇನಸಾಬ ಕಬಾಡಿಯವರ ಜೇಬು ಕತ್ತರಿಸಿ, 1.04 ಲಕ್ಷ ಹಣವನ್ನು ಆರೋಪಿಗಳು ಕಳ್ಳತನ ಮಾಡಿದ್ದರು. ಈ ಕುರಿತು ಹುಸೇನಸಾಬ ನೀಡಿದ ದೂರಿನ ಆಧಾರದ ಮೇಲೆ ವಿದ್ಯಾಗಿರಿ ಠಾಣೆಯ ಪೊಲೀಸರು ತನಿಖೆ ಕೈಕೊಂಡು, ಆರೋಪಿಗಳನ್ನು ಬಂ ಧಿಸಿ 83 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ