ಜಲ ಸಂಘರ್ಷ: ಲಾಠಿ ಪ್ರಹಾರ
Team Udayavani, Apr 15, 2018, 3:52 PM IST
ಹುಬ್ಬಳ್ಳಿ: ನೀರು ಸಂಗ್ರಹಿಸುವ ವಿಷಯವಾಗಿ ಶುಕ್ರವಾರ ರಾತ್ರಿ ಇಲ್ಲಿನ ವೀರಾಪುರ ಓಣಿ ಗೊಲ್ಲರ ಓಣಿಯಲ್ಲಿ ಅಕ್ಕಪಕ್ಕದ ಮನೆಯ ಎರಡು ಕುಟುಂಬದ ಸದಸ್ಯರು ಒಬ್ಬರಿಗೊಬ್ಬರು ಹಲ್ಲೆ ಮಾಡಿಕೊಂಡಿದ್ದ ಘಟನೆ ಶನಿವಾರ ಬೆಳಗ್ಗೆಯೂ ಮರುಕಳಿಸಿದೆ. ಈ ಸಂದರ್ಭದಲ್ಲಿ ಪರಸ್ಪರರು ಕಲ್ಲು
ತೂರಾಟ ನಡೆಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಆನಂದ ಡಿ. ಗೊಲ್ಲರ, ಹುಲಿಗೆಪ್ಪ ಜಿ. ಗೊಲ್ಲರ, ದೀಪಕ ಎಂ. ಗೊಲ್ಲರ ಹಾಗೂ
ಮಂಜುನಾಥ ಆರ್. ಬಿಲ್ಹಾನ, ಗಣೇಶ ಆರ್. ಗಬ್ಬೂರ, ಹನಮಂತ ಊರ್ಫ್ ಬಂಡ್ಯಾ ಜಿ. ವಜ್ಜಣ್ಣನವರ ಎಂಬವರನ್ನು ಬೆಂಡಿಗೇರಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಗೊಲ್ಲರ ಹಾಗೂ ಶಿಕ್ಕಲಗಾರ ಕುಟುಂಬದ ಸದಸ್ಯರು ನೀರು ಹಿಡಿದಿಟ್ಟುಕೊಳ್ಳುವ ವಿಷಯವಾಗಿ ಶುಕ್ರವಾರ ಪರಸ್ಪರ ಹೊಡೆದಾಡಿಕೊಂಡಿದ್ದರು. ಅಲ್ಲದೆ ಎರಡು ಕುಟುಂಬದವರು ಠಾಣೆಯ
ಮೆಟ್ಟಿಲು ಹತ್ತಿದ್ದರು. ಆಗ ಪೊಲೀಸರು ಎರಡು ಕುಟುಂಬದವರ ನಡುವೆ ಸಂಧಾನ ಮಾಡಿ ಬಗೆಹರಿಸಿ
ಕಳುಹಿಸಿದ್ದರು.
ಶನಿವಾರ ಬೆಳಗ್ಗೆ ಮತ್ತೆ ಎರಡು ಕುಟುಂಬದ ಸದಸ್ಯರು ಪರಸ್ಪರ ವಾಗ್ವಾದಕ್ಕೆ ಇಳಿದಾಗ ಅದು ವಿಕೋಪಕ್ಕೆ ಹೋಗಿದೆ. ಆಗ ಒಬ್ಬರಿಗೊಬ್ಬರು ಕೈ ಕೈ ಮೀಲಾಸಿದ್ದಲ್ಲದೆ ಕಲ್ಲು, ಇಟ್ಟಂಗಿ
ಸೇರಿದಂತೆ ಇನ್ನಿತರೆ ವಸ್ತುಗಳನ್ನು ತೂರಿದ್ದಾರೆ. ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಅವರ ಮೇಲೂ ಕಲ್ಲು-ಇಟ್ಟಂಗಿ ಎಸೆದಿದ್ದಾರೆ. ಆಗ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿ ಗಲಾಟೆ ಮಾಡುತ್ತಿದ್ದವರನ್ನು ಚದುರಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ಕೆಲ ಪೊಲೀಸರಿಗೂ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿ ಬೆಂಡಿಗೇರಿ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಹಿರಿಯ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಫಲಿತಾಂಶ ಬಳಿಕ ಸಿಎಂ- ಡಿಸಿಎಂ ಕಲಹ: ಶೆಟ್ಟರ್
Hubli; ಸರ್ಕಾರ ಕೂಡಲೇ ನಾಗೇಂದ್ರ ರಾಜೀನಾಮೆ ಪಡೆಯಬೇಕು: ಶೆಟ್ಟರ್ ಆಗ್ರಹ
Valmiki Nigama case:ಸಿಬಿಐ ತನಿಖೆಯಿಂದ ಸಿಎಂ ಹೇಗೆ ಭಾಗಿಯಾಗಿದ್ದಾರೆಂದು ತಿಳಿಯಲಿದೆ: ಜೋಶಿ
Hubballi; ನೇಹಾ ಮತ್ತು ಅಂಜಲಿ ಮಾದರಿಯಲ್ಲೇ …: ಶಿಕ್ಷಕಿಗೆ ಬೆದರಿಕೆ ಪತ್ರ
Hubli; ಇದು ದಪ್ಪ ಚರ್ಮದ ಸರ್ಕಾರ; ಕೂಡಲೇ ನಾಗೇಂದ್ರ ರಾಜೀನಾಮೆ ನೀಡಲಿ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.