ಚಿಗರಿ ನೆಗೆತಕ್ಕೆ ಕಾಮಗಾರಿ ಅಡ್ಡಿ
Team Udayavani, May 29, 2019, 9:09 AM IST
ಇನ್ನು ಬಿಆರ್ಟಿಎಸ್ ರಸ್ತೆಯಾದಾಗಿನಿಂದ ಪಕ್ಕದ ಕಾರಿಡಾರ್ ರಸ್ತೆಗಳಲ್ಲಿ ಕಾರು,ಲಾರಿ ಮತ್ತು ಬೈಕ್ಗಳ ಪಾರ್ಕಿಂಗ್ ಹಾವಳಿ ಮುಂದುವರಿದಿದೆ. ಆರಂಭದಲ್ಲಿಯೇ ಯೋಜಿಸಿದಂತೆ ಬಿಆರ್ಟಿಎಸ್ಗೆ ಸಮಾನಾಂತರವಾಗಿ ನಿರ್ಮಾಣಗೊಂಡ ಸಾಮಾನ್ಯ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಪಾರ್ಕಿಂಗ್ಗೆ ಅವಕಾಶ ನೀಡಲ್ಲ ಎಂದು ಜಿಲ್ಲಾಡಳಿತ ಮತ್ತು ಕಂಪನಿ ಹಲವು ಬಾರಿ ಹೇಳಿತ್ತು. ಆದರೆ ಧಾರವಾಡ,ಹುಬ್ಬಳ್ಳಿ ನಗರ ಮತ್ತು ನಗರ ಮಧ್ಯದಲ್ಲಿರುವ ಸಮಾನಾಂತರ ರಸ್ತೆಯಲ್ಲಿ ಎಲ್ಲೆಂದರೆಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದು ಸಮಾನಾಂತರ ರಸ್ತೆಗಳಲ್ಲಿನ ಸಂಚಾರ ವ್ಯತ್ಯಯಕ್ಕೆ ಕಾರಣವಾಗುತ್ತಿದೆ. ಧಾರವಾಡದ ಕೋರ್ಟ್ ವೃತ್ತದಿಂದ ಜ್ಯುಬಿಲಿ ವೃತ್ತದವರೆಗೆ, ಟೋಲ್ನಾಕಾದಿಂದ ಎನ್ಟಿಟಿಎಫ್ ವರೆಗೂ ಬಿಆರ್ಟಿಎಸ್ ಸಮಾನಾಂತರ ರಸ್ತೆಗಳಲ್ಲಿ ಪಾರ್ಕಿಂಗ್ ಹಾವಳಿ ಇದ್ದೇ ಇದೆ. ಅಷ್ಟೇಯಲ್ಲ, ಬಿಆರ್ಟಿಎಸ್ ರಸ್ತೆಯಲ್ಲೇ ಅನೇಕರೂ ಎಗ್ಗಿಲ್ಲದೇ ವಾಹನ ನುಗ್ಗಿಸಿಕೊಂಡು ಹೋಗುವ ಮತ್ತು ತಡೆಯಲು ಬಂದ ಅಧಿಕಾರಿಗೆ ಗುದ್ದಿ ಹೋದ ಪ್ರಕರಣಗಳು ನಡೆದಿವೆ.
ಸರ್ಕಾರಿ ಬಸ್ಗೇಕೆ ನೋ ಎಂಟ್ರಿ?
ಇನ್ನು ಬಿಆರ್ಟಿಎಸ್ ಬಸ್ಗಳು ನಿಗದಿತ ಕಾರಿಡಾರ್ನಲ್ಲಿಯೇ ಸಂಚರಿಸುತ್ತವೆ. ಆದರೆ ಈ ರಸ್ತೆಗೆ ಸಮಾನಾಂತರವಾಗಿ ಇರುವ ಎರಡೂ ರಸ್ತೆಗಳಲ್ಲಿ ಸರ್ಕಾರಿ ಅಂದರೆ ವಾಯವ್ಯ ಸಾರಿಗೆ ಬಸ್ಗಳು ಯಾಕೆ ಸಂಚರಿಸುತ್ತಿಲ್ಲ ? ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಅವಳಿ ನಗರ ಮಧ್ಯೆ ಸಂಚರಿಸಲು ಹೈಟೆಕ್ ಸಾರಿಗೆ ಇರುವಂತೆಯೇ ಸ್ಥಳೀಯವಾಗಿ ಓಡಾಡುವ ಪ್ರಯಾಣಿಕರಿಗೆ ಸರ್ವಿಸ್ ರಸ್ತೆಯಲ್ಲಿನ ಬಸ್ ಸೇವೆಯೂ ಅಷ್ಟೇ ಮುಖ್ಯವಾಗಿತ್ತು. ಅದೂ ಅಲ್ಲದೇ ಇದೇ ರಸ್ತೆಗೆ ಇದೀಗ ಖಾಸಗಿ ಸಂಸ್ಥೆ ಬೇಂದ್ರೆ ಬಸ್ಗಳನ್ನು ಓಡಿಸಲು ಯೋಜಿಸಲಾಗುತ್ತಿದೆ. ಇಲ್ಲಿ ಖಾಸಗಿ ಬಸ್ಗಳನ್ನು ಓಡಿಸುವ ಬದಲು ಸರ್ಕಾರಿ ಬಸ್ ಸೇವೆ ಇರಿಸಬಹುದು. ಇದ್ದಕ್ಕಿದ್ದಂತೆ ಸರ್ಕಾರಿ ಬಸ್ ಸೇವೆ ನಿಲ್ಲಿಸಿರುವುದು ಅನೇಕ ಊಹಾಪೋಹಳನ್ನು ಸೃಷ್ಟಿಸಿದೆ. ಅಷ್ಟೇಯಲ್ಲ, ಧಾರವಾಡದಿಂದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ನೇರ ಬಸ್ಗಳಿಗೆ ಬೇಡಿಕೆ ಇದ್ದರೂ ಬಸ್ ಸೇವೆ ಇಲ್ಲವಾಗಿದೆ ಎನ್ನುವ ಆರೋಪ ಕೂಡ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
•ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ