ಚಿಗರಿ ನೆಗೆತಕ್ಕೆ ಕಾಮಗಾರಿ ಅಡ್ಡಿ


Team Udayavani, May 29, 2019, 9:09 AM IST

hubali-tdy-1..
ಧಾರವಾಡ: ಅಲ್ಲಲ್ಲಿ ಮುಗಿಯದ ಫುಟ್ಪಾತ್‌ ಕೆಲಸಗಳು..ಇನ್ನೂ ಬೆಳಗದ ಅದೆಷ್ಟೋ ನೂರು ಬೀದಿದೀಪಗಳು..ಪೂರ್ಣಗೊಳ್ಳದ ನವಲೂರು ರೈಲ್ವೆ ಕ್ರಾಸಿಂಗ್‌ ಸೇತುವೆ..ಅಪೂರ್ಣವಾಗಿಯೇ ಉಳಿದ ಬಿಆರ್‌ಟಿಎಸ್‌ ಕಾಮಗಾರಿ… ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯದ ಜನಸಂಪರ್ಕದ ಕೊಂಡಿಯಾಗಿ ಬೆಳೆದು ನಿಂತಿರುವ ಬಿಆರ್‌ಟಿಎಸ್‌ ಬಸ್‌ ಸೇವೆ ಇನ್ನೂ ಪರಿಪೂರ್ಣ ಸ್ಥಿತಿ ತಲುಪುತ್ತಲೇ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿರುವ ಈ ಅಂಶಗಳು, ಬಿಆರ್‌ಟಿಎಸ್‌ ಯೋಜನೆ ಪೂರ್ಣಗೊಳ್ಳುವುದೆಂದು? ಎನ್ನುವ ಪ್ರಶ್ನೆಯನ್ನು ಮೂಡಿಸುತ್ತಿದೆ. ಹೌದು. ಬರೊಬ್ಬರಿ ಎಂಟು ವರ್ಷಗಳಿಂದ 12 ಬಾರಿ ಡೆಡ್‌ಲೈನ್‌(ಕಾಲಮಿತಿ) ಹಾಕಿಕೊಂಡು ಬಿಆರ್‌ಟಿಎಸ್‌ ಕಾಮಗಾರಿ ಮುಕ್ತಾಯಗೊಳಿಸುವುದಕ್ಕೆ ಜಿಲ್ಲಾಡಳಿತ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿದ್ದರೂ, ಇನ್ನೂ ಬಿಆರ್‌ಟಿಎಸ್‌ ಪರಿಪೂರ್ಣ ಹಂತಕ್ಕೆ ಬಂದು ತಲುಪುತ್ತಲೇ ಇಲ್ಲ.
ಸದ್ಯಕ್ಕೆ 120 ಕ್ಕೂ ಹೆಚ್ಚು ಚಿಗರಿ ಬಸ್‌ ಸೇವೆಗಳನ್ನೇನೋ ಆರಂಭಿಸಲಾಗಿದೆ. ಆದರೆ ಅಲ್ಲಲ್ಲಿ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಬಸ್‌ ಸೇವೆಗೆ ಅಡಚಣೆಯಾಗುತ್ತಿದೆ. ಇನ್ನು ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಬಿಆರ್‌ಟಿಎಸ್‌ ರಸ್ತೆಯುದ್ಧಕ್ಕೂ ಬೀದಿದೀಪಗಳನ್ನು ಅಳವಡಿಸಲಾಗಿದೆ. ಆದರೆ ಎರಡೂ ನಗರಗಳ ಮಧ್ಯದ ಕಾರಿಡಾರ್‌ ರಸ್ತೆಯಲ್ಲಿ ಇನ್ನೂ ಬೀದಿದೀಪಗಳು ಬಂದಿಲ್ಲ. ಸೇತುವೆ-ಕಾರಿಡಾರ್‌ ಕಟ್: ನವಲೂರು ಬಳಿಯ ಸೇತುವೆ ಕಾಮಗಾರಿ ಆರಂಭಗೊಂಡು ಮೂರು ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಇಲ್ಲಿ ಸ್ಥಳೀಯರು ಆರಂಭದಲ್ಲಿ ಸ್ಕೈವಾಕ್‌ ಬದಲು ನೆಲ ಸೇತುವೆ ಕೇಳಿದ್ದರು. ಇದೀಗ ರಸ್ತೆ ಕ್ರಾಸ್‌ಗೆ ರ್‍ಯಾಂಪ್‌ ಕೇಳುತ್ತಿದ್ದು ಅದನ್ನು ಹೈ ಪವರ್‌ ಕಮಿಟಿಯಲ್ಲಿ ನಿರ್ಧರಿಸಲು ಕಾಯ್ದಿರಿಸಲಾಗಿದೆ. ಹೀಗಾಗಿ ಈ ಕಾಮಗಾರಿ ಅರ್ಧಕ್ಕೆ ನಿಂತುಕೊಂಡಿದೆ. ಇನ್ನು ಸನಾ ಕಾಲೇಜು ಬಳಿ ಧಾರ್ಮಿಕ ಸ್ಥಳವೊಂದರ ವಿವಾದದ ಹಿನ್ನೆಲೆಯಲ್ಲಿ ಅಲ್ಲಿಯೂ ಬಿಆರ್‌ಟಿಎಸ್‌ ಪ್ರತ್ಯೇಕ ರಸ್ತೆ ಕಾಮಗಾರಿ ಹಾಗೆ ಉಳಿದಿದೆ. ಒಂದು ಕೋಮಿನ 12 ಮಂದಿರಗಳನ್ನು ತೆರವುಗೊಳಿಸಲಾಗಿದ್ದು, ಇನ್ನೊಂದು ಕೋಮಿನ ಪ್ರಾರ್ಥನಾ ಸ್ಥಳ ತೆರವು ಯಾಕೆ ಮಾಡಿಲ್ಲ ಎಂದು ಅನೇಕ ಬಾರಿ ಪ್ರತಿಭಟನೆಗಳು ನಡೆದಿವೆ. ಹೀಗಾಗಿ ಸದ್ಯಕ್ಕೆ ಇಲ್ಲಿ ಬಿಆರ್‌ಟಿಎಸ್‌ನ ಯಾವುದೇ ಕಾಮಗಾರಿ ನಡೆಸಲಾಗುತ್ತಿಲ್ಲ.
ಬಿಆರ್‌ಟಿಎಸ್‌ನ ಶೇ.92 ಕಾಮಗಾರಿಗಳು ಮುಕ್ತಾಯಗೊಂಡಿವೆ. ಇದೀಗ ಪೂರ್ಣಪ್ರಮಾಣದಲ್ಲಿ ಸಾರಿಗೆ ಸೇವೆ ಚಾಲನೆಯಲ್ಲಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸತ್ಯ. ಇಲ್ಲಿ ಸಣ್ಣಪುಟ್ಟ ತೊಂದರೆಗಳಿದ್ದು, ಅವುಗಳನ್ನು ಶೀಘ್ರ ಸರಿಪಡಿಸುತ್ತೇವೆ. •ದೀಪಾಚೋಳನ್‌,ಡಿಸಿ,ಧಾರವಾಡ.
ಬಿಆರ್‌ಟಿಎಸ್‌ ಪಾರ್ಕಿಂಗ್‌:

ಇನ್ನು ಬಿಆರ್‌ಟಿಎಸ್‌ ರಸ್ತೆಯಾದಾಗಿನಿಂದ ಪಕ್ಕದ ಕಾರಿಡಾರ್‌ ರಸ್ತೆಗಳಲ್ಲಿ ಕಾರು,ಲಾರಿ ಮತ್ತು ಬೈಕ್‌ಗಳ ಪಾರ್ಕಿಂಗ್‌ ಹಾವಳಿ ಮುಂದುವರಿದಿದೆ. ಆರಂಭದಲ್ಲಿಯೇ ಯೋಜಿಸಿದಂತೆ ಬಿಆರ್‌ಟಿಎಸ್‌ಗೆ ಸಮಾನಾಂತರವಾಗಿ ನಿರ್ಮಾಣಗೊಂಡ ಸಾಮಾನ್ಯ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಪಾರ್ಕಿಂಗ್‌ಗೆ ಅವಕಾಶ ನೀಡಲ್ಲ ಎಂದು ಜಿಲ್ಲಾಡಳಿತ ಮತ್ತು ಕಂಪನಿ ಹಲವು ಬಾರಿ ಹೇಳಿತ್ತು. ಆದರೆ ಧಾರವಾಡ,ಹುಬ್ಬಳ್ಳಿ ನಗರ ಮತ್ತು ನಗರ ಮಧ್ಯದಲ್ಲಿರುವ ಸಮಾನಾಂತರ ರಸ್ತೆಯಲ್ಲಿ ಎಲ್ಲೆಂದರೆಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದು ಸಮಾನಾಂತರ ರಸ್ತೆಗಳಲ್ಲಿನ ಸಂಚಾರ ವ್ಯತ್ಯಯಕ್ಕೆ ಕಾರಣವಾಗುತ್ತಿದೆ. ಧಾರವಾಡದ ಕೋರ್ಟ್‌ ವೃತ್ತದಿಂದ ಜ್ಯುಬಿಲಿ ವೃತ್ತದವರೆಗೆ, ಟೋಲ್ನಾಕಾದಿಂದ ಎನ್‌ಟಿಟಿಎಫ್‌ ವರೆಗೂ ಬಿಆರ್‌ಟಿಎಸ್‌ ಸಮಾನಾಂತರ ರಸ್ತೆಗಳಲ್ಲಿ ಪಾರ್ಕಿಂಗ್‌ ಹಾವಳಿ ಇದ್ದೇ ಇದೆ. ಅಷ್ಟೇಯಲ್ಲ, ಬಿಆರ್‌ಟಿಎಸ್‌ ರಸ್ತೆಯಲ್ಲೇ ಅನೇಕರೂ ಎಗ್ಗಿಲ್ಲದೇ ವಾಹನ ನುಗ್ಗಿಸಿಕೊಂಡು ಹೋಗುವ ಮತ್ತು ತಡೆಯಲು ಬಂದ ಅಧಿಕಾರಿಗೆ ಗುದ್ದಿ ಹೋದ ಪ್ರಕರಣಗಳು ನಡೆದಿವೆ.

ಸರ್ಕಾರಿ ಬಸ್‌ಗೇಕೆ ನೋ ಎಂಟ್ರಿ?

ಇನ್ನು ಬಿಆರ್‌ಟಿಎಸ್‌ ಬಸ್‌ಗಳು ನಿಗದಿತ ಕಾರಿಡಾರ್‌ನಲ್ಲಿಯೇ ಸಂಚರಿಸುತ್ತವೆ. ಆದರೆ ಈ ರಸ್ತೆಗೆ ಸಮಾನಾಂತರವಾಗಿ ಇರುವ ಎರಡೂ ರಸ್ತೆಗಳಲ್ಲಿ ಸರ್ಕಾರಿ ಅಂದರೆ ವಾಯವ್ಯ ಸಾರಿಗೆ ಬಸ್‌ಗಳು ಯಾಕೆ ಸಂಚರಿಸುತ್ತಿಲ್ಲ ? ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಅವಳಿ ನಗರ ಮಧ್ಯೆ ಸಂಚರಿಸಲು ಹೈಟೆಕ್‌ ಸಾರಿಗೆ ಇರುವಂತೆಯೇ ಸ್ಥಳೀಯವಾಗಿ ಓಡಾಡುವ ಪ್ರಯಾಣಿಕರಿಗೆ ಸರ್ವಿಸ್‌ ರಸ್ತೆಯಲ್ಲಿನ ಬಸ್‌ ಸೇವೆಯೂ ಅಷ್ಟೇ ಮುಖ್ಯವಾಗಿತ್ತು. ಅದೂ ಅಲ್ಲದೇ ಇದೇ ರಸ್ತೆಗೆ ಇದೀಗ ಖಾಸಗಿ ಸಂಸ್ಥೆ ಬೇಂದ್ರೆ ಬಸ್‌ಗಳನ್ನು ಓಡಿಸಲು ಯೋಜಿಸಲಾಗುತ್ತಿದೆ. ಇಲ್ಲಿ ಖಾಸಗಿ ಬಸ್‌ಗಳನ್ನು ಓಡಿಸುವ ಬದಲು ಸರ್ಕಾರಿ ಬಸ್‌ ಸೇವೆ ಇರಿಸಬಹುದು. ಇದ್ದಕ್ಕಿದ್ದಂತೆ ಸರ್ಕಾರಿ ಬಸ್‌ ಸೇವೆ ನಿಲ್ಲಿಸಿರುವುದು ಅನೇಕ ಊಹಾಪೋಹಳನ್ನು ಸೃಷ್ಟಿಸಿದೆ. ಅಷ್ಟೇಯಲ್ಲ, ಧಾರವಾಡದಿಂದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ನೇರ ಬಸ್‌ಗಳಿಗೆ ಬೇಡಿಕೆ ಇದ್ದರೂ ಬಸ್‌ ಸೇವೆ ಇಲ್ಲವಾಗಿದೆ ಎನ್ನುವ ಆರೋಪ ಕೂಡ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಜೂನ್‌ ಬಳಿಕವೂ ಬೇಂದ್ರೆ ಬಸ್‌?:
ಆರಂಭದಲ್ಲಿ ಸಾಕಷ್ಟು ವಿರೋಧ ಎದುರಿಸಿದ್ದ ಬೇಂದ್ರೆ ಸಾರಿಗೆ ಬಸ್‌ ಸೇವೆ ಪರವಾನಗಿ ಜೂನ್‌,2019ರ ಕ್ಕೆ ಮುಕ್ತಾಯವಾಗಲಿದೆ. ಈ ಬಸ್‌ಗಳು ಕಡಿಮೆಯಾದರೆ ಮಾತ್ರ ಬಿಆರ್‌ಟಿಎಸ್‌ಗೆ ಹೆಚ್ಚಿನ ಲಾಭ ಲಭಿಸುತ್ತದೆ ಎನ್ನುವ ಲೆಕ್ಕಾಚಾರ ಹಾಕಲಾಗಿತ್ತು. ಅಷ್ಟೇಯಲ್ಲ, ಬಿಆರ್‌ಟಿಎಸ್‌ ಯೋಜನೆ ಯಶಸ್ವಿಯಾಗಬೇಕಾದರೆ ಖಾಸಗಿ ಸರ್ವಿಸ್‌ಗಳು ಇಲ್ಲಿ ಸೇವೆ ನಿಲ್ಲಿಸಬೇಕು. ಆದರೆ ಬೇಂದ್ರೆ ಸಾರಿಗೆ ಬಸ್‌ಗಳನ್ನು ಕಾರಿಡಾರ್‌ ರಸ್ತೆಯಲ್ಲೇ ಓಡಾಟಕ್ಕೆ ಉಳಿಸಿಕೊಳ್ಳುವ ಯೋಚನೆ ಮಾಡಲಾಗಿದೆ. ಈ ಸಂಬಂಧ ಉನ್ನತ ಅಧಿಕಾರ ಸಮಿತಿಯೇ ನಿರ್ಧಾರ ಕೈಗೊಳ್ಳಲಿದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ಉದಯವಾಣಿ’ಗೆ ತಿಳಿಸಿದ್ದಾರೆ.

 

•ಬಸವರಾಜ ಹೊಂಗಲ್

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.