![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಕಲೆಗೆ ಬೆಲೆ ಕಟ್ಟಲಾಗದು
•ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪ್ರದರ್ಶನದಲ್ಲಿ ಕೋಟ್ಯಂತರ ರೂ. ವ್ಯವಹಾರ
Team Udayavani, May 10, 2019, 2:25 PM IST
![gadaga-tdy-4..](https://www.udayavani.com/wp-content/uploads/2019/05/gadaga-tdy-4..-1-620x260.jpg)
ಗದಗ: ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಚಿತ್ರಕಲಾ ಪ್ರದರ್ಶನವನ್ನು ಪುಣ್ಯಾಶ್ರಮದ ಪೀಠಾಪತಿ ಕಲ್ಲಯ್ಯಜ್ಜನವರು ಉದ್ಘಾಟಿಸಿದರು.
ಗದಗ: ಚಿತ್ರ ರಚನೆ-ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಗಳಿದ್ದಂತೆ. ಕಲಾವಿದನ ಕಲೆಗೆ ಬೆಲೆ ಕಟ್ಟಲಾಗದು ಎಂದು ನಿವೃತ್ತ ಶಿಕ್ಷಕ ಶಿವಾನಂದ ಶಿಶುವಿನಹಳ್ಳಿ ಹೇಳಿದರು.
ನಗರದ ಪಂಚಾಕ್ಷರ ಗವಾಯಿಗಳ ಮಠದಲ್ಲಿ ನಜೀರ್ ಅಹ್ಮದ್ ಡಂಬಳ ಹಮ್ಮಿಕಕೊಂಡಿದ್ದ ಗುರು ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲೆಗೆ ನಿರ್ಧಿಷ್ಟ ಬೆಲೆ ಕಟ್ಟಲಾಗದು. ರವಿವರ್ಮರ ಒಂದು
ಕೃತಿಗೆ 16 ಕೋಟಿ ರೂ.ಗೆ ಮಾರಾಟವಾಗಿತ್ತು. ಏರ್ ಇಂಡಿಯಾ ಸಂಸ್ಥೆ ಪ್ರಮುಖ ಕಲಾವಿದರ ಕೃತಿಗಳನ್ನು ಖರೀದಿಸಿದ್ದು, ಅವುಗಳ ಮೌಲ್ಯ ನೂರಾರು ಕೋಟಿ ರೂ. ಮೀರುತ್ತದೆ ಎಂದು ಹೇಳಿದರು.
ಚಿತ್ರಕಾರರಲ್ಲಿ ಎರಡು ವಿಧ. ಆತ್ಮತೃಪ್ತಿಗಾಗಿ ಕೃತಿ ರಚಿಸುವವರು, ಮತ್ತೂಬ್ಬರು ಸಮಾಜದ ಆಶಯಕ್ಕೆ ತಕ್ಕಂತೆ ಕಲಾಕೃತಿಗಳಿಗೆ ಜೀವ ತುಂಬುತ್ತಾರೆ. ಕೆಲವರು ಕಲಾಕೃತಿಗಳ ಮಾರಾಟ ಬಯಸುತ್ತಾರೆ. ಚಿತ್ರಕಲಾ ಕೃತಿಗಳಿಗೆ ದೇಶ- ವಿದೇಶಗಳಲ್ಲಿ ಸಾಕಷ್ಟು ಬೇಡಿಕೆಯಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಚಿತ್ರಕಲಾವಿದರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ಕೋಟ್ಯಂತ ರೂ. ವ್ಯವಹಾರವಾಗುತ್ತದೆ ಎಂದು ಹೇಳಿದರು.
ಆರಂಭಿಕ ವರ್ಷಗಳಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಲಾವಿದರು ಕೈತುಂಬ ಸಂಪಾದಿಸುತ್ತಿದ್ದರು. ಆನಂತರ ಕೃತಕ ಬೆಲೆ ಏರಿಕೆ ಯಾಗಿ ದಿಢೀರ್ ಕುಸಿತವಾಯಿತು. ಹೀಗಾಗಿ ಕಲಾವಿದರ ಹಣ ಸಂಪಾದಿಸುವ ಕನಸು ನುಚ್ಚು ನೂರಾಯಿತು. ಈಗ ಮತ್ತೆ ಚಿತ್ರಕಲೆಗಳ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ. ಕಲಾವಿದರ ಸಂಕಷ್ಟವನ್ನರಿತ ಕರ್ನಾಟಕ ಚಿತ್ರಕಲಾ ಪರಿಷತ್ ಬೆಂಗಳೂರಿನಲ್ಲಿ ವರ್ಷಕ್ಕೊಂದು ದಿನ ಚಿತ್ರ ಸಂತೆ ಆಯೋಜಿಸಿ ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು.
ಪ್ರಾಥಮಿಕ ಶಾಲೆ ಶಿಕ್ಷಕರೂ ಆಗಿರುವ ಕಲಾವಿದ ಎಂ.ಬಿ. ಪರ್ವತಗೌಡರ ಮಾತನಾಡಿ, ‘ವಿಶ್ವ ಕಲಾದಿನ’ ಅಂಗವಾಗಿ ಈ ಚಿತ್ರಕಲಾ ಪ್ರದರ್ಶನವನ್ನು ಇದೇ ಮೊದಲ ಬಾರಿಗೆ ಗವಾಯಿಗಳ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು
ವೀರೇಶ್ವರ ಪುಣ್ಯಾಶ್ರಮದ ಬಸವರಾಜ ಹಿಡ್ಕಿಮಠ, ವಸಂತ ಅಕ್ಕಿ, ಅಶೋಕ ಅಕ್ಕಿ, ಕಡ್ಲಿಕೊಪ್ಪ, ಮಹೇಶ ಸಂದಿಗವಾಡ, ವಿಜಯ ಕಿರೇಸೂರ, ಬೇವಿನಮರದ, ಸಂತೋಷ ವೀರಾಪುರ, ಯುಸೂಫ್ ಡಂಬಳ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.