![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
ತೆನೆ ಬೆಂಬಲದಲ್ಲೂ ಕೈನಲ್ಲಿ ಗುಂಪು
ಬಿಜೆಪಿಗೆ ಅತಿ ಹೆಚ್ಚು ಮತದಾನ ಲಾಭದ ನಿರೀಕ್ಷೆ•ಕೈಗೆ ಕಮಲ ಪ್ರಮುಖರ ಒಳ ಹೊಡೆತದ ಲಾಭ!
Team Udayavani, May 10, 2019, 2:05 PM IST
![gadaga-01..](https://www.udayavani.com/wp-content/uploads/2019/05/gadaga-01..-1-620x419.jpg)
ಹೌದು, ತೇರದಾಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ ಶೇ.74.90ರಷ್ಟು ಮತದಾನ (ಕಳೆದ ಬಾರಿ ಶೇ.74.41)ವಾಗಿದೆ. ಕಳೆದ ಬಾರಿಗಿಂತ ಈ ಸಲ 17,272 ಜನ ಮತದಾರರು ಹೆಚ್ಚಳವಾಗಿದ್ದು, ಮತದಾನ ಪ್ರಮಾಣದಲ್ಲಿ ಶೇ.049ನಷ್ಟು ಕಳೆದ ಲೋಕಾ ಚುನಾವಣೆಗಿಂತ ಹೆಚ್ಚಾಗಿದೆ. ಮತದಾನ ಪ್ರಮಾಣ ಹೆಚ್ಚಾದಷ್ಟು ಬಿಜೆಪಿಗೇ ಲಾಭ ಎಂಬುದು ಆ ಪಕ್ಷದ ಈಚಿನ ನಂಬಿಕೆಗಳು ಹಲವು ಬಾರಿ ನಿಜಗೊಳಿಸಿವೆ. ಹೀಗಾಗಿ ಈ ಬಾರಿಯೂ ಅದೇ ನಂಬಿಕೆಯಲ್ಲಿ ಬಿಜೆಪಿ ಇದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿಯ ಗೆಲುವಿಗೆ ಈ ಕ್ಷೇತ್ರ ದೊಡ್ಡ ಕೊಡುಗೆ ನೀಡಿತ್ತು. 8 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲೇ ಅತಿ ಹೆಚ್ಚು 34,859 ಮತಗಳ ಅಂತರ ಬಿಜೆಪಿಗೆ ಇಲ್ಲಿ ದೊರೆತಿತ್ತು. ಒಂದು ವರ್ಷದ ಹಿಂದಷ್ಟೇ ನಡೆದಿದ್ದ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, 2,599 ಮತಗಳ ಅಂತರ ಪಡೆದಿದ್ದರೆ, ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 20,888 ಮತಗಳ ಹಿನ್ನಡೆ ಸಾಧಿಸಿತ್ತು. 2013ರ ಚುನಾವಣೆಯಲ್ಲಿ ಬಿಜೆಪಿ- ಕೆಜೆಪಿ ಗೊಂದಲದಲ್ಲಿ ಹಿನ್ನಡೆ ಅನುಭವಿಸಿದ್ದೇವು. ಈಗ ಪಕ್ಷದಲ್ಲಿ ಸಂಘಟನೆಯ ಬಲವಿದೆ. ಪ್ರತಿ ಹಳ್ಳಿ ಹಳ್ಳಿಯಲ್ಲೂ ಮೋದಿ ಅಲೆ, ಅಭ್ಯರ್ಥಿ ಗದ್ದಿಗೌಡರ ಪ್ರಭಾವ (ಗದ್ದಿಗೌಡರು ಈ ಕ್ಷೇತ್ರದ ಧಾರ್ಮಿಕ, ಸಾಂಸ್ಕೃತಿಕ ಸಹಿತ ಪ್ರತಿ ಕಾರ್ಯಕ್ಕೂ ಹಾಜರಾಗುತ್ತಾರೆ)ವಿದೆ. ಅಲ್ಲದೇ ಕಾಂಗ್ರೆಸ್ನಲ್ಲಿ 3ರಿಂದ 4 ಗುಂಪುಗಾರಿಕೆ ಇವೆ. ಇದು ಬಿಜೆಪಿಗೆ ಮತಗಳಾಗಿ ಲಾಭವಾಗಿದೆ ಎಂಬುದು ಪಕ್ಷದ ನಿರೀಕ್ಷೆ.
ಬಿಜೆಪಿ ಒಳ ಹೊಡೆತ ಲಾಭದ ವಿಶ್ವಾಸ: ಕ್ಷೇತ್ರ ವ್ಯಾಪ್ತಿಯ ಮಹಾಲಿಂಗಪುರ, ತೇರದಾಳ, ರಬಕವಿ-ಬನಹಟ್ಟಿ ಹಾಗೂ ಗ್ರಾಮೀಣ ಭಾಗದ ಮತಗಟ್ಟೆವಾರು ಮತದಾನದ ವಿವರೊಂದಿಗೆ ಲೆಕ್ಕ ಹಾಕುತ್ತಿರುವ ಕಾಂಗ್ರೆಸ್, ಜೆಡಿಎಸ್ ಬಲದೊಂದಿಗೆ ಬಿಜೆಪಿಯ ಕೆಲ ಪ್ರಮುಖರ ಒಳ ಹೊಡೆತದ ಲಾಭ ನಮಗೆ ಆಗಿದೆ ಎನ್ನುತ್ತಿದೆ.
ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಇಲ್ಲಿ 12,433 ಮತ ಪಡೆದಿತ್ತು. ಆ ಮತಗಳು ಮೈತ್ರಿ ಕಾರಣದಿಂದ ನಮಗೆ ಬರುತ್ತವೆ. ಅಲ್ಲದೇ ಬಹುಕಾಲದ ಬೇಡಿಕೆಯಾಗಿದ್ದ ತೇರದಾಳ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಿಸಿದ್ದರ ಲಾಭವೂ ನಮಗೆ ತಟ್ಟಿದೆ. ತೇರದಾಳ ಪಟ್ಟಣದಲ್ಲಿ ಅತಿ ಕಡಿಮೆಯಾಗುತ್ತಿದ್ದ ಮತದಾನ ಈ ಬಾರಿ ಹೆಚ್ಚಾಗಿರುವುದೂ (ತಾಲೂಕಿಗಾಗಿ ಇಡೀ ಪಟ್ಟಣ ಎರಡು ಬಾರಿ ಚುನಾವಣೆ ಬಹಿಷ್ಕರಿಸಿತ್ತು) ಅದೇ ಕಾರಣಕ್ಕೆ ಎಂಬ ನಂಬಿಕೆಯಲ್ಲಿ ಕಾಂಗ್ರೆಸ್ ಇದೆ.
ಮೈತ್ರಿ ಪಕ್ಷಗಳಿಂದ ಹೆಚ್ಚು ಕೇಂದ್ರೀಕೃತ: ಕಳೆದ ಲೋಕಸಭೆ ಚುನಾವಣೆಯಲ್ಲಿ 34,859 ಮತಗಳ ಭಾರಿ ಹಿನ್ನಡೆ ಅನುಭವಿಸಿದ್ದರಿಂದ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಹಿತ, ಎರಡೂ ಪಕ್ಷಗಳ ನಾಯಕರು ತೇರದಾಳ ಕ್ಷೇತ್ರದ ಮೇಲೆ ಹೆಚ್ಚು ಕೇಂದ್ರೀಕೃತಗೊಂಡು ಪ್ರಚಾರ ನಡೆಸಿದ್ದರು. ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ, ತೇರದಾಳ ಪಟ್ಟಣಕ್ಕೆ ಬಂದು, ನಿಮ್ಮ ಹಲವು ವರ್ಷದ ಬೇಡಿಕೆ ಈಡೇರಿಸಿದ್ದೇನೆ, ನನ್ನ ತಂಗಿ (ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ)ಯನ್ನು ಗೆಲ್ಲಿಸಿ. ಅದೇ ನೀವು ನನಗೆ ಕೊಡುವ ಉಡುಗೊರೆ ಎಂದು ಭಾವನಾತ್ಮಕ ಭಾಷಣವೂ ಮಾಡಿದ್ದರು. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ, ಕ್ಷೇತ್ರದಲ್ಲಿರುವ ಅಹಿಂದ ಮತಗಳ ಮೇಲೆ ಕಣ್ಣಿಟ್ಟೇ ಮತಬೇಟೆಯ ಭಾಷಣ ಮಾಡಿದ್ದರು. ಇದೆಲ್ಲದರ ಪರಿಣಾಮ, ನಮಗೆ ಹೆಚ್ಚು ಮತ ಬಂದಿವೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ತೊಡಗಿದೆ.
ಜೆಡಿಎಸ್ಗೂ ನೆಲೆ: ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿರುವ ಪ್ರೊ| ಬಸವರಾಜ ಕೊಣ್ಣೂರ, ಜೆಡಿಎಸ್ ಸೇರ್ಪಡೆಯಿಂದ ಈ ಕ್ಷೇತ್ರದಲ್ಲಿ ಪಕ್ಷಕ್ಕೂ ಒಂದಷ್ಟು ನೆಲೆ ಸಿಕ್ಕಿದೆ. ಈ ನೆಲೆಯೇ ಕಾಂಗ್ರೆಸ್ ಅಭ್ಯರ್ಥಿಗೆ ಒಂದಷ್ಟು ಬಲ ಕೊಡಲಿದೆ ಎಂಬ ವಿಶ್ಲೇಷಣೆ ಕೂಡ ನಡೆಯುತ್ತಿದೆ. ಆದರೆ, ಸ್ಥಳೀಯವಾಗಿ ಕಾಂಗ್ರೆಸ್ನ ಗುಂಪುಗಾರಿಕೆಯಿಂದ ಜೆಡಿಎಸ್ನವರಿಗೂ ಈ ಚುನಾವನೆಯಲ್ಲಿ ಒಂದಷ್ಟು ಬೇಸರ ಮೂಡಿಸಿತ್ತು ಎಂಬ ಮಾತು ಕೇಳಿ ಬಂದಿತ್ತು.
ಎರಡು ಪಕ್ಷಗಳ ಹಲವು ಲೆಕ್ಕಾಚಾರಗಳ ನಡುವೆಯೂ, ಟೀಮ್ ಮೋದಿ ತಂಡ, ಈ ಕ್ಷೇತ್ರದಲ್ಲಿ ಅತಿಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಿದೆ. ಪಟ್ಟಣ, ಹಳ್ಳಿಗಳಲ್ಲಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ತಂಡ, ಮತ್ತೂಮ್ಮೆ ಮೋದಿ ಹೆಸರಿನಲ್ಲಿ ಬಿಜೆಪಿ ಬಲ ಕೊಡಿಸುವ ಕೆಲಸ ಗುಪ್ತಗಾಮಿನಿಯಂತೆ ನಡೆದಿತ್ತು. ಜತೆಗೆ ಮೋದಿ ಪ್ರಭಾವ, ಈ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಮತ್ತೋತ್ತರದ ಬಳಿಕ ಸಮಬಲದ ಲೆಕ್ಕಾಚಾರಗಳಿದ್ದರೂ, ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂಬ ಮಾತು ಕ್ಷೇತ್ರದ ಗ್ರಾಮೀಣ ಜನರಿಂದ ಕೇಳಿ ಬಂದಿದೆ.
•ಕಿರಣ ಆಳಗಿ/ ಚಂದ್ರಶೇಖರ ಮೋರೆ
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.