Arsikere ; ಮಹಾರಥೋತ್ಸವದ ವೇಳೆ ಮುರಿದು ಬಿದ್ದ ಕಳಸ!
ಅಪಶಕುನ ಎಂದು ಭಕ್ತರ ಆತಂಕ...
Team Udayavani, Jun 30, 2023, 7:12 PM IST
ಅರಸೀಕೆರೆ: ಸಮೀಪದ ಚಿಕ್ಕ ತಿರುಪತಿ ಕ್ಷೇತ್ರದಲ್ಲಿ ಶುಕ್ರವಾರ ನಡೆಯುತ್ತಿದ್ದ ಜಾತ್ರಾ ಮಹೋತ್ಸವದ ಮಹಾರಥೋತ್ಸವದ ವೇಳೆ ರಥದ ಮೇಲಿನ ಕಳಸ ಮುರಿದು ಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಗುಪ್ತಚರ ಇಲಾಖೆಯ ಪೊಲೀಸ್ ಪೇದೆ ಚಂದ್ರಮೌಳಿ ಎನ್ನುವವರು ಗಾಯಗೊಂಡಿದ್ದಾರೆ.
ಚಂದ್ರಮೌಳಿ ಅವರ ತಲೆ ಮತ್ತು ಭುಜಕ್ಕೆ ಗಾಯವಾಗಿದ್ದು ತತ್ ಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳಸ ಮುರಿದ್ದು ಬಿದ್ದ ಬಳಿಕ ರಥೋತ್ಸವವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಈ ರೀತಿ ನಡೆದಿರುವುದು ಅಪಶಕುನ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.