![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಬಂಕಾಪುರ ಪುರಸಭೆ ಚುನಾವಣೆ ಮುಂದೂಡಿಕೆ
Team Udayavani, May 9, 2019, 2:08 PM IST
![hav-4](https://www.udayavani.com/wp-content/uploads/2019/05/hav-4-3-620x406.jpg)
ಬಂಕಾಪುರ: ಪಟ್ಟಣದ ಪುರಸಭೆ ಅವೈಜ್ಞಾನಿಕ ವಾರ್ಡ್ಗಳ ವಿಂಗಡಣೆ ವಿರೋಧಿಸಿ ಸ್ಥಾಯಿ ಸಮಿತಿ ಮಾಜಿ ಸದಸ್ಯ ಮಹಬಳೇಶ ಹೊನಕೇರಿ ಕೋರ್ಟ್ ಮೇಟ್ಟಲೇರಿದ ಕಾರಣ ಮೇ 29 ರಂದು ನಡೆಯಬೇಕಾಗಿದ್ದ ಪುರಸಭೆ ಚುನಾವಣೆಗೆ ಬ್ರೇಕ್ ಬಿದ್ದಂತಾಗಿದೆ.
ಮಾ. 2014 ರಲ್ಲಿ ಅಸ್ತಿತ್ವಕ್ಕೆ ಬಂದ ಹಿಂದಿನ ಪುರಸಭೆ ಆಡಳಿತ ಮಂಡಳಿಯ ಅಧಿಕಾರ ಅವಧಿ, 2019ರ ಮಾ.27 ರಂದು ಕೊನೆಗೊಂಡಿದೆ. ಏಪ್ರಿಲ್ನಲ್ಲಿ ನಡೆಯಬೇಕಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮೊದಲೇ ಲೋಕಸಭೆ ಚುನಾವಣೆ ಬಂದಿದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಚುನಾವಣೆ ಆಯೋಗ ಮುಂದೂಡಿತ್ತು. ಈಗಾಗಲೇ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿದಿದ್ದು, ಫಲಿತಾಂಶ ಬರುವ ಮೊದಲೇ ಚುನಾವಣೆ ಆಯೋಗ ಮೇ 29 ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದೆ. ಆದರೆ, ಪಟ್ಟಣದ ಪುರಸಭೆ ಇತ್ತಿಚೆಗೆ ನಡೆಸಿದ ವಾರ್ಡ್ ವಿಂಗಡಣೆ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಬಳೇಶ ಹೊನಕೇರಿ ಕೋರ್ಟ್ಗೆ ಮೋರೆ ಹೋಗಿರುವುದರಿಂದ ಬಂಕಾಪುರ ಪುರಸಭೆ ಚುನಾವಣೆ ಮುಂದುಡಲಾಗಿದೆ. ಇದರಿಂದ ಪುರಸಭೆ ಸದಸ್ಯರಾಗಲು ಹಾತೋರೆಯುತ್ತಿದ್ದ ಆಕಾಂಕ್ಷಿಗಳ ಆಸೆಗೆ ತಣ್ಣೀರೇರಚಿದಂತಾಗಿದೆ.
2018ರಲ್ಲಿ ಅಧಿಕಾರ ಅವಧಿ ಮುಕ್ತಾಯವಾಗುವ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ವಾರ್ಡ್ಗಳನ್ನು 2011ರ ಜನಗಣತಿ ಆಧಾರದ ಮೇಲೆ ವಾರ್ಡ್ಗಳ ಪುನರ್ ವಿಂಗಡಣೆ ಮಾಡಿಕೊಳ್ಳಬೇಕಾದರೆ, ಕೆಲವು ನಿಯಮ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಪುರಸಭೆ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಅರ್ಹತೆ ಇಲ್ಲದ, ಗುತ್ತಿಗೆ ಆಧಾರಿತ ಸಿಬ್ಬಂದಿಗಳಿಂದ ತಮ್ಮ ಅನಕೂಲತಕ್ಕಂತೆ ಅವೈಜ್ಞಾನಿಕವಾಗಿ ವಾರ್ಡ್ಗಳನ್ನು ವಿಭಜಿಸಿದ್ದಾರೆ.
ಸುಮಾರು 16,500 ಮತದಾರರನ್ನು ಹೊಂದಿರುವ ಪಟ್ಟಣದಲ್ಲಿ 23 ವಾರ್ಡಗಳಿವೆ. ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಒಟ್ಟು ಮತಗಳನ್ನು ವಾರ್ಡಗಳ ಸಂಖ್ಯೆಯಿಂದ ಭಾಗಿಸಿದಾಗ ಬರುವ ಮತದಾರರ ಸಂಖ್ಯೆಗೆ ಅನುಗುಣವಾಗಿ ವಾರ್ಡ್ಗಳ ಮತದಾರರನ್ನು ವಿಂಗಡಿಸಬೇಕಿತ್ತು. ಆದರೆ, ಒಂದು ವಾರ್ಡಿನಲ್ಲಿ 4 ನೂರು ಮತದಾರರನ್ನು ಹೊಂದಿದರೆ, ಮತ್ತೂಂದು ವಾರ್ಡಿನಲ್ಲಿ 9 ನೂರು ಮತದಾರರಿದ್ದಾರೆ. ಇದು ಸಂಪೂರ್ಣ ಅವೈಜ್ಞಾನಿಕ ಪದ್ಧತಿ. ಪ್ರಭಾವಿ ವ್ಯಕ್ತಿಗಳಿಗೆ ಅನಕೂಲ ಮಾಡಿಕೊಡುವ ಉದ್ದೇಶ ಇದಾಗಿದೆ ಎಂದು ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಬಳೆಶ ಹೊನಕೇರಿ ಹೈಕೋರ್ಟ್ ಮೇಟ್ಟಲೇರಿದ್ದರಿಂದ ಚುನಾವಣೆ ಆಯೋಗ ಬಂಕಾಪುರ ಪುರಸಭೆ ಚುನಾವಣೆಯನ್ನು ತಡೆ ಹಿಡಿದಿದೆ. ಚುನಾವಣೆ ಆಕಾಂಕ್ಷಿಗಳು ಮುಂದಿನ ಆದೇಶ ಮತ್ತು ಚುನಾವಣೆ ಆಯೋಗ ಚುನಾವಣೆಯನ್ನು ನಿಗದಿಪಡಿಸುವ ವರೆಗೆ ಕಾಯಬೇಕಾದ ಅನಿವಾರ್ಯತೆ ಬಂದೋದಗಿದೆ.
ಬಂಕಾಪುರ ಪುರಸಭೆ ಚುನಾವಣೆ ತಡೆ ಹಿಡಿದಿರುವ ಬಗ್ಗೆ ನನಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
•ಹರ್ಸಲ್ ನಾರಾಯಣರಾವ್ ಬೋಯರ್,ಸವಣೂರ ಉಪವಿಭಾಗಾಧಿಕಾರಿ
ಜವಾಬ್ದಾರಿಯುತ ಅಧಿಕಾರಿಗಳಿಂದ ಮಾಡಿಸಬೇಕಾಗಿದ್ದ ವಾರ್ಡ್ ವಿಂಗಡಣೆ ಗುತ್ತಿಗೆ ಆಧಾರಿತ ನೌಕರರಿಂದ ಮಾಡಿಸಲಾಗಿದೆ. ಈ ವಿಷಯದಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ಸಂಬಂಧಪಟ್ಟ ಮೇಲಧಿಕಾರಿಗಳು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
•ಮಹಬಳೇಶ ಹೊನಕೇರಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ
ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ವಾರ್ಡ್ಗಳ ವಿಂಗಡಣೆಯಾಗಿಲ್ಲ. ಪ್ರತಿ ವಾರ್ಡ್ಗಳಿಗೆ ಸರಾಸರಿ ಮತಗಳು ವಿಂಗಡಣೆಯಾಗಬೇಕಾಗಿರುವುದರಿಂದ ವಾರ್ಡ್ ವಿಭಜನೆ ಪುನರ್ ಪರಿಷ್ಕರಣೆಯಾಗಬೇಕು.
•ಸೋಮಶೇಖರ ಗೌರಿಮಠ, ಪುರಸಭೆ ಮಾಜಿ ಸದಸ್ಯ
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Lokayukta: ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಉಪ ತಹಶೀಲ್ದಾರ್](https://www.udayavani.com/wp-content/uploads/2024/07/9-16-150x90.jpg)
Lokayukta: ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಉಪ ತಹಶೀಲ್ದಾರ್
![Hirekerur: ಬೈಕ್ ಮೇಲೆ ಬಿದ್ದ ಮರ; ಹೆಸ್ಕಾಂ ನೌಕರರಿಬ್ಬರು ಸಾವು](https://www.udayavani.com/wp-content/uploads/2024/07/haveri-3-150x83.jpg)
Hirekerur: ಬೈಕ್ ಮೇಲೆ ಬಿದ್ದ ಮರ; ಹೆಸ್ಕಾಂ ನೌಕರರಿಬ್ಬರು ಸಾವು
![4-haveri](https://www.udayavani.com/wp-content/uploads/2024/07/4-haveri-150x90.jpg)
Haveri: ಮನೆ ಮೇಲ್ಛಾವಣಿ ಕುಸಿದು 18 ತಿಂಗಳ ಅವಳಿ ಮಕ್ಕಳು ಸೇರಿ ಮೂವರು ಸಾವು
![ಹಾವೇರಿ: ಐದು ವರ್ಷದಲ್ಲಿ 350 ಕುರಿಗಳ ಸಾವು! ಕೇಂದ್ರದ ಕಾರ್ಯವೈಖರಿ ಬಗ್ಗೆ ಅನುಮಾನ](https://www.udayavani.com/wp-content/uploads/2024/07/Haveri-2-150x62.jpg)
ಹಾವೇರಿ: ಐದು ವರ್ಷದಲ್ಲಿ 350 ಕುರಿಗಳ ಸಾವು! ಕೇಂದ್ರದ ಕಾರ್ಯವೈಖರಿ ಬಗ್ಗೆ ಅನುಮಾನ
![Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು](https://www.udayavani.com/wp-content/uploads/2024/07/haveri-1-150x92.jpg)
Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು.. ಸಾರ್ವಜನಿಕರಿಂದ ಆಕ್ರೋಶ
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.