ಬರಹಗಾರರಿಗೆ ಪ್ರೇರಣೆ ನೀಡುವಂತವರಾಗಿ

ಕೃತಿಯಲ್ಲಿನ‌ ವೈಚಾರಿಕತೆ-ಮೌಡ್ಯ ವಿರೋಧಿ ಧೋರಣೆ ಸ್ವಾಗತಾರ್ಹ: ಬಸವಶಾಂತಲಿಂಗ ಶ್ರೀ

Team Udayavani, May 7, 2019, 12:47 PM IST

haveri-tdy-1..

ಹಾವೇರಿ: ಶ್ರೀದ್ವಯರು, ಗಣ್ಯರು, ಸಾಹಿತಿಗಳು ಕೃತಿ ಲೋಕಾರ್ಪಣೆಗೊಳಿಸಿದರು.

ಹಾವೇರಿ: ಸಮಕಾಲೀನ ಸಮಸ್ಯೆಗಳನ್ನು ಅರ್ಥೈಸಿ ಅವುಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡಿ ಚರ್ಚೆಗೊಡ್ಡುವ ಶಕ್ತಿ ಅಂಕಣ ಬರಹಗಳಿಗಿದೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ನುಡಿದರು.

ಇಲ್ಲಿಯ ಹೊಸಮಠದ ಆವರಣದಲ್ಲಿ ನಡೆದ ಜಿಲ್ಲೆಯ ಆರು ಯುವ ಬರಹಗಾರರು ಬರೆದ ‘ಆರಂಕಣಕಾರರು’ ಮತ್ತು ಕವಯತ್ರಿ ಗಾಯತ್ರಿ ರವಿಯವರ ‘ಕುರುಡನಿಗೆ ಕನ್ನಡಿ’ ಎಂಬೆರಡು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಾವೇರಿ ನೆಲದ ಆರು ಯುವ ಬರಹಗಾರರ ಸಂಪಾದಿತ ‘ಆರಂಕಣಕಾರರು’ ಕೃತಿಯಲ್ಲಿ ವೈಚಾರಿಕತೆ ಮತ್ತು ಮೌಡ್ಯ ವಿರೋಧಿ ಧೋರಣೆಗಳಿರುವುದು ಸ್ವಾಗತಾರ್ಹ. ಇದೊಂದು ಸಾಮಾಜಿಕ ಜಾಗೃತಿಯ ಕೆಲಸ ಎಂದರು.

ತಮ್ಮ ಜೀವನದಲ್ಲಿ ಕಂಡುಂಡ ಸಹಜ ಅನುಭವಗಳನ್ನು ‘ಕುರುಡನಿಗೆ ಕನ್ನಡಿ’ ಕಾವ್ಯ ಸಂಕಲನದಲ್ಲಿ ಬಹಳ ಸೂಕ್ಷ ್ಮವಾಗಿ ಗಾಯತ್ರಿ ರವಿ ಚಿತ್ರಿಸಿದ್ದಾರೆ. ಇದು ಹೊಸ ಕವಿಗಳಿಗೆ ಕಾವ್ಯ ಪ್ರೀತಿ ಬೆಳೆಯಲು ಪ್ರೇರಣಾದಾಯಕವಾಗಿದೆ ಎಂದರು.

ಸಾನ್ನಿಧ್ಯವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಬರಹಗಾರರಾಗಲು ಸಾಧ್ಯವಾಗದಿದ್ದರೆ ಬರಹಗಾರರಿಗೆ ಪ್ರೇರಣೆ ನೀಡುವಂತವರಾಗಬೇಕು. ಈ ಎರಡೂ ಕೆಲಸಗಳು ‘ಆರಂಕಣಕಾರರು’ ಮತ್ತು ‘ಕುರುಡನಿಗೆ ಕನ್ನಡಿ’ ಪುಸ್ತಕಗಳ ಸಂದರ್ಭದಲ್ಲಿ ಆಗಿರುವುದು ಶ್ಲಾಘನೀಯ. ಹಲವು ಹೊಸ ಬರಹಗಾರರಿಗೆ ನೆಲೆ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕವಿಪ್ರ ನೌಕರರ ಸಂಘದ ನಾಯಕರಾದ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ಹೊಸ ಕಾಲದಲ್ಲಿ ಪುಸ್ತಕದ ಸ್ವರೂಪ ಮತ್ತು ಅಸ್ತಿತ್ವ ತುಂಬ ಬೇರೆಯಾಗಿದೆ. ಕ್ಷಣಾರ್ಧದಲ್ಲಿ ನೂರಾರು ಪುಟಗಳ ಪುಸ್ತಕಗಳನ್ನು ಅಂತರ್ಜಾಲದಲ್ಲಿ ಮುಳಗಿಸಿ ಬಿಡುವ ಈ ದಿನಗಳಲ್ಲಿ ಪುಸ್ತಕಗಳು ಉಳಿಯಬೇಕು. ಪುಸ್ತಕದ ಓದು ಮಾತ್ರ ಸುಖ ಕೊಡಬಲ್ಲವು. ಪುಸ್ತಕ ಸಂಸ್ಕೃತಿ ನಾಶವಾಗಬಾರದು ಎಂದರು.

‘ಆರಂಕಣಕಾರರು’ ಕೃತಿ ಪರಿಚಯಿಸಿದ ಲೇಖಕಿ ರೇಖಾ ಭೈರಕ್ಕನವರ, ಸರಳ ಭಾಷೆ, ನಿತ್ಯದ ಜ್ವಲಂತ ಅನುಭವಗಳನ್ನು ಕಟ್ಟಿಕೊಡವ ಅಂಕಣ ಬರಹ ತುಂಬ ಕಠಿಣವಾದ ಕೆಲಸ. ಆದರೆ, ಹಾವೇರಿ ಆರು ಹೊಸ ಪ್ರತಿಭೆಗಳು ವಿಮರ್ಶೆ, ಲಲಿತ ಪ್ರಬಂಧ ಹಾಗೂ ಸಾಮಾಜಿಕ ಸಮಸ್ಯೆಗಳ ಬರೆದ ‘ಆರಂಕಣಕಾರರು’ ಓದಿಗೆ ಸೆಳೆಯುವ ಕೃತಿ ಎಂದರು.

ಲೇಖಕಿ ಗಾಯತ್ರಿ ರವಿ ಅವರ ‘ಕುರುಡನಿಗೆ ಕನ್ನಡಿ’ ಸಂಕಲನ ಪರಿಚಯ ಮಾಡಿಕೊಟ್ಟ ಪ್ರತಿಭಾವಂತ ಕವಿ ಶಿಗ್ಗಾವಿಯ ರಂಜಾನ್‌ ಕಿಲ್ಲೇದಾರ್‌, ಮಾತು ಮತ್ತು ಮೌನಗಳ ಮೌಲ್ಯಗೊತ್ತಿರುವ ಗಾಯತ್ರಿ ರವಿಯವರು ಅತ್ಯಂತ ಸೂಕ್ಷ ್ಮಗ್ರಾಹಿಯಾಗಿ ಕಾವ್ಯ ರಚಿಸಿದ್ದು ಹಾವೇರಿ ನೆಲದ ಹೆಮ್ಮೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ‘ಆರಂಕಣಕಾರರು’ ಕೃತಿಯೊಳಗಿನ ಲೇಖಕರಾದ ವಾಗೀಶ ಬ. ಹೂಗಾರ, ಜಿ.ಎಂ. ಓಂಕಾರಣ್ಣನವರ, ಚಿನ್ನು ಎಸ. ರಾಗಿ (ಸವಣೂರು), ಗಾಯತ್ರಿ ರವಿ, ಲತಾ ರಮೇಶ ವಾಲಿ (ಸವಣೂರು) ಹಾಗೂ ರಾಜೇಶ್ವರಿ ರವಿ ಸಾರಂಗಮಠ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಗಣ್ಯರಾದ ಡಾ| ಜೆ.ಜಿ. ದೇವಧರ, ಮಾಧುರಿ, ನಾಗೇಂದ್ರ ಕಟಕೋಳ, ಎನ್‌.ಕೆ. ಮರೋಳ, ಕರಿಯಪ್ಪ ಹಂಚಿನಮನಿ, ವೈ.ಬಿ. ಆಲದಕಟ್ಟಿ, ಗಂಗಾಧರ ನಂದಿ, ಮಾರುತಿ ಶಿಡ್ಲಾಪೂರ, ದಾಕ್ಷಾಯಿಣಿ ಗಾಣಗೇರ, ಲಲಿತಕ್ಕ ಹೊರಡಿ, ರುದ್ರಪ್ಪ ಜಾಬೀನ್‌, ಸಿ.ಎ. ಕೂಡಲಮಠ, ಶಶಿಕಲಾ ಅಕ್ಕಿ, ಮುಂತಾದವರು ಭಾಗವಹಿಸಿದ್ದರು.

ವೈಷ್ಣವಿ ಪ್ರಾರ್ಥನೆ ಹಾಡಿದಳು. ನಾಗರಾಜ ನಡುವಿನಮಠ ಸ್ವಾಗತಿಸಿದರು. ಎಸ್‌.ಆರ್‌. ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಲ್ಲಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು. ಪೃಥ್ವಿರಾಜ ಬೆಟಗೇರಿಯವರು ವಂದಿಸಿದರು.

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta: ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಉಪ ತಹಶೀಲ್ದಾರ್

Lokayukta: ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಉಪ ತಹಶೀಲ್ದಾರ್

Hirekerur: ಬೈಕ್ ಮೇಲೆ ಬಿದ್ದ ಮರ; ಹೆಸ್ಕಾಂ ನೌಕರರಿಬ್ಬರು ಸಾವು

Hirekerur: ಬೈಕ್ ಮೇಲೆ ಬಿದ್ದ ಮರ; ಹೆಸ್ಕಾಂ ನೌಕರರಿಬ್ಬರು ಸಾವು

4-haveri

Haveri: ಮನೆ ಮೇಲ್ಛಾವಣಿ ಕುಸಿದು 18 ತಿಂಗಳ ಅವಳಿ ಮಕ್ಕಳು ಸೇರಿ ಮೂವರು ಸಾವು

ಹಾವೇರಿ: ಐದು ವರ್ಷದಲ್ಲಿ 350 ಕುರಿಗಳ ಸಾವು! ಕೇಂದ್ರದ ಕಾರ್ಯವೈಖರಿ ಬಗ್ಗೆ ಅನುಮಾನ

ಹಾವೇರಿ: ಐದು ವರ್ಷದಲ್ಲಿ 350 ಕುರಿಗಳ ಸಾವು! ಕೇಂದ್ರದ ಕಾರ್ಯವೈಖರಿ ಬಗ್ಗೆ ಅನುಮಾನ

Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು

Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು.. ಸಾರ್ವಜನಿಕರಿಂದ ಆಕ್ರೋಶ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.