ಸಂಕಷ್ಟದಲ್ಲಿದ್ದ ಬಡವರಿಗೆ ಆಹಾರ ಧಾನ್ಯ ವಿತರಣೆ
Team Udayavani, May 25, 2020, 2:50 PM IST
ಶಿಗ್ಗಾವಿ: ನಿರಂತರ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿದ ಬಡಜನರು ಅಗತ್ಯ ಆಹಾರ ವಸ್ತುಗಳಿಗಾಗಿ ಪರಿತಪ್ಪಿಸುತ್ತಿದ್ದು ಅಂತವರ ನೆರವಿಗಾಗಿ ದಿನಸಿ ವಸ್ತುಗಳನ್ನು ನೀಡುತ್ತಿರುವುದಾಗಿ ನಾಮದೇವ ಶಿಂಪಿ ಸಮಾಜದ ಉಪಾಧ್ಯಕ್ಷ ಕುಬೇರಪ್ಪ ಬಗಾಡೆ ಹೇಳಿದರು.
ತಾಲೂಕಿನ ತಿಮ್ಮಾಪುರ, ಕೃಷಿ ನಗರ ಹಾಗೂ ಪಟ್ಟಣದ ಅಲೆಮಾರಿ ಜನಾಂಗದವರಿಗೆ ದಿನಸಿ ವಿತರಿಸಿ ಅವರು ಮಾತನಾಡಿದರು. ಯೋಗ ಗುರು ಕುಬೇರಪ್ಪ ಬಂಡಿವಡ್ಡರ, ಸಂಗೀತ ಗುರು ಕೊಟ್ರೇಶಪ್ಪ ಬಳಗಲಿ, ಪ್ರಾಂಶುಪಾಲ ಡಾ| ಡಿ.ವಿ ಗೊಬ್ಬರಗುಂಪಿ. ನಾಮದೇವ ಅಚಲಕರ್, ಫಕ್ಕೀರಪ್ಪ ಕೊಂಡಾಯಿ, ಬಸಣ್ಣ ಧರ್ಮಣ್ಣವರ,ನೀಲಕಂಠ ಪಾಟೀಲ, ಯಲ್ಲಪ್ಪ ಶಿಂಧೆ, ರಂಗಪ್ಪ ತಾಂಡೋಜಿ ಪರಶುರಾಮ ಮಾಳವಧೆ ಹಾಗೂ ಇತರರಿದ್ದರು.