ವೇತನ ತಾರತಮ್ಯ ಸರಿಪಡಿಸಲು ಆಗ್ರಹ
Team Udayavani, May 25, 2020, 2:39 PM IST
ಹಿರೇಕೆರೂರ: ವೇತನ ತಾರತಮ್ಯ ಸರಿಪಡಿಸಲು, ಗ್ರಾಮೀಣ ಭತ್ಯೆ ಹೆಚ್ಚಿಸಲು, ಆರೋಗ್ಯ ನಿರೀಕ್ಷಕರು ಅಥವಾ ಸಮುದಾಯ ಆರೋಗ್ಯ ಅಧಿಕಾರಿ ಎಂದು ಪದನಾಮ ಬದಲಾವಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದ ಜಿಲ್ಲಾ ಘಟಕದಿಂದ ಕೃಷಿ ಸಚಿವ ಬಿ.ಸಿ.ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಮುಖಂಡರಾದ ರವಿ ಬಣಕಾರ, ಸಿ.ಎಫ್. ಹೆಡಿಯಾಲ, ಮಾಲತೇಶ ಸದಿಯಣ್ಣನವರ, ಮಲ್ಲಿಕಾರ್ಜುನ ಸಿ.ಎಂ., ಎ.ಎನ್. ಬಾವಿಕಟ್ಟಿ, ಎಂ.ಎನ್. ಕಂಬಳಿ ಹಾಜರಿದ್ದರು.