Haveri: ಲಂಚ ಪಡೆಯುವಾಗ ಸಿಡಿಪಿಓ ಲೋಕಾಯುಕ್ತ ಬಲೆಗೆ
Team Udayavani, Feb 17, 2024, 6:51 PM IST
ಹಾವೇರಿ: ಲಂಚ ಪಡೆಯುತ್ತಿರುವಾಗಲೇ ಸಿಡಿಪಿಓ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶನಿವಾರ ಹಿರೇಕೆರೂರಿನಲ್ಲಿ ನಡೆದಿದೆ.
ಮಹಿಳಾ ಸಾಂತ್ವನ ಕೇಂದ್ರದ ಅನುದಾನ ಬಿಡುಗಡೆ ಮಾಡಿದ್ದಕ್ಕೆ 10% ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಿಡಿಪಿಓ ಜಯಶ್ರೀ ಪಾಟೀಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಡಾಟಾ ಎಂಟ್ರಿ ಆಪರೇಟರ್ ರಾಜು ಪೂಜಾರ ಮೂಲಕ 10 ಸಾವಿರ ಲಂಚ ಪಡೆಯುವಾಗಲೇ ಹಿರೇಕೆರೂರು ಸಿಡಿಪಿಓ ಕೇಂದ್ರದಲ್ಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸಾಂತ್ವನ ಕೇಂದ್ರದ ಮುಖ್ಯಸ್ಥ ಸಂತೋಷ ಎನ್ನುವವರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.