Haveri: ಹೆದ್ದಾರಿಗಾಗಿ ಜಮೀನು ವಶ; ಅಧಿಕಾರಿಗಳೆದುರು ವಿಷ ಸೇವಿಸಿದ ರೈತ
Team Udayavani, Feb 10, 2024, 1:03 PM IST
ಹಾವೇರಿ: ತನ್ನ ಜಮೀನಿನಲ್ಲಿ ಹೆದ್ದಾರಿ ಹಾದು ಹೋಗುವ ಕಾರಣ ಭೂಮಿ ವಶಪಡಿಸಿಕೊಂಡಿದ್ದಕ್ಕೆ ರೈತನೋರ್ವ ಅಧಿಕಾರಿಗಳ ಎದುರು ವಿಷ ಸೇವಿಸಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ರೈತನ ಜಮೀನು ಭೂ ಸ್ವಾಧೀನ ಮಾಡಲಾಗುತ್ತಿದೆ. ಅಡವಿ ಚಂದ್ರಪ್ಪ ಎಂಬ ರೈತ ಅಧಿಕಾರಿಗಳ ಮುಂದೆ ವಿಷ ಕುಡಿದು ಒದ್ದಾಡಿದ್ದಾನೆ. ರಾಜ್ಯ ಹೆದ್ದಾರಿ ಉಪವಿಭಾಗ ರಾಣೇಬೆನ್ನೂರು ಎಇಇ ವಾಸುದೇವ ಎದುರು ವಿಷ ಕುಡಿದು ರೈತ ಹೈಡ್ರಾಮಾ ಮಾಡಿದ್ದಾನೆ.
ಖಾಕಿ ಸಮ್ಮುಖದಲ್ಲಿ ರಾಜ್ಯ ಹೆದ್ದಾರಿ ರಾಣೆಬೇನ್ನೂರು ಎಇಇ ತಂಡ ಜಮೀನಿಗೆ ಬಂದ ವೇಳೆ ದಾರಿಗೆ ಜಾಗ ಕೊಡುವುದಿಲ್ಲ ಎಂದು ನೆಲಕ್ಕೆ ಬಿದ್ದು ಒದ್ದಾಡಿದ ರೈತ ರಂಪಾಟ ಮಾಡಿದ್ದಾನೆ.
ಕಾನೂನು ನಿಯಮ ಪಾಲಿಸದ ರೈತನ ವಿರುದ್ದ ಎಇಇ ವಾಸುದೇವ ದೂರು ನೀಡಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿ ಮತ್ತು ಆತ್ಮಹತ್ಯೆ ಯತ್ನದಡಿ ಹಲಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ