![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
ಪಕ್ಕಡ ಹಿಡಿದ ಕೈ ಕಾರ್ಮಿಕರಿಗೆ ಪ್ರೇರಣೆ
•ಪ್ರತಿನಿತ್ಯ ಸ್ಮಾರಕಕ್ಕೆ ನಮಿಸಿಯೇ ಕರ್ತವ್ಯಕ್ಕೆ ಹಾಜರಿ •ಹಾವೇರಿಯಲ್ಲೊಂದು ಅಪರೂಪದ 'ಕಾರ್ಮಿಕ ಸ್ಮಾರಕ'
Team Udayavani, May 1, 2019, 12:41 PM IST
![haveri-tdy-1..](https://www.udayavani.com/wp-content/uploads/2019/05/haveri-tdy-1..-366x465.jpg)
ಹಾವೇರಿ: ಇಲ್ಲಿನ ಹೆಸ್ಕಾಂ ಕಚೇರಿ ಆವರಣದಲ್ಲಿರುವ ಕಾರ್ಮಿಕ ಸ್ಮಾರಕ.
ಹಾವೇರಿ: ನಮ್ಮ ದೇಶದಲ್ಲಿ ಸ್ಮಾರಕಗಳಿಗೇನೂ ಕಡಿಮೆ ಇಲ್ಲ. ಬೀದಿ ಬೀದಿಗೊಂದು ಸ್ಮಾರಕಗಳು ಕಾಣಲು ಸಿಗುತ್ತವೆ. ಆದರೆ, ಶ್ರಮಿಕ ವರ್ಗದ ಪ್ರತೀಕವಾಗಿ ಸ್ಮಾರಕ ಇರುವುದು ಬಲು ಅಪರೂಪ. ಇಂಥ ಅಪರೂಪದ ಸುಂದರ ಕಾರ್ಮಿಕ ಸ್ಮಾರಕ ನಗರದ ಹೆಸ್ಕಾಂ ಕಚೇರಿ ಆವರಣದಲ್ಲಿದೆ.
ಈ ಸ್ಮಾರಕ ಉಳ್ಳವರಿಂದ ಹಣ ಸಂಗ್ರಹಿಸಿ ನಿರ್ಮಿಸಿದ ಸ್ಮಾರಕವಲ್ಲ. ಈ ಸ್ಮಾರಕದ ಇಂಚಿಂಚಿನಲ್ಲಿಯೂ ಕಾರ್ಮಿಕರ ಶ್ರಮ ಇದೆ; ಶ್ರಮದ ಪ್ರತಿಫಲವಾಗಿ ಪಡೆದ ಹಣದ ವಿನಿಯೋಗವಿದೆ. ಈ ಕಾರಣದಿಂದಾಗಿಯೇ ಈ ಸ್ಮಾರಕ ಕಾರ್ಮಿಕರ ಶ್ರಮ, ದುಡಿಮೆಯ ಪ್ರತೀಕವಾಗಿದೆ.
ಕಾರ್ಮಿಕರಿಗೆ ಪ್ರೇರಣೆ ನೀಡುವ ಕಾರ್ಮಿಕರ ಸ್ಮಾರಕವೊಂದು ನಿರ್ಮಿಸಬೇಕೆಂದು ಮೊದಲು ಕನಸು ಕಂಡವರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್. ಜಯರಾಜ. ಈ ಕನಸು ನನಸಾಗಿಸಲು ಬಹಳ ಕಾಲ ಕಾಯಬೇಕಾದ ಪರಿಸ್ಥಿತಿ ಬರಲಿಲ್ಲ. ಏಕೆಂದರೆ ಎಲ್ಲ ಕಾರ್ಮಿಕರು ಸ್ಮಾರಕ ನಿರ್ಮಾಣಕ್ಕೆ ಭರಪೂರ ಬೆಂಬಲ ನೀಡಿದರು.
ಶ್ರಮದ ಹಣ: ಪ್ರತಿಯೊಬ್ಬ ಕಾರ್ಮಿಕರಿಂದ ಅವರ ಬೆವರಿನ ಬೆಲೆ ಸಂಗ್ರಹಿಸಲಾಯಿತು. ಕಾರ್ಮಿಕರಿಂದ ಸಂಗ್ರಹಿಸಿದ ಮೂರು ಲಕ್ಷ ರೂ.ಗಳಲ್ಲಿ ಕಾರ್ಮಿಕರ ಶ್ರಮದ ಪ್ರತೀಕವಾಗಿ (ಪಕ್ಕಡ್ ಹಿಡಿದ ಕೈ) ಇರುವ ಅರ್ಥಪೂರ್ಣ ಸ್ಮಾರಕ ನಿರ್ಮಾಣವಾಯಿತು. 2001 ಅಗಷ್ಟ 8ರಂದು ಕವಿಪ್ರ ನಿಗಮದ ಅಂದಿನ ಅಧ್ಯಕ್ಷ ವಿ.ಪಿ. ಬಳಿಗಾರ ಅರ್ಥಪೂರ್ಣ ಸ್ಮಾರಕವನ್ನು ನಾಡಿಗೆ ಸಮರ್ಪಿಸಿದರು. ಅಪರೂಪದ ಈ ಸ್ಮಾರಕ ಐದು ಅಡಿ ಎತ್ತರವಿದ್ದು, ಸಂಪೂರ್ಣ ಹೊಳಪಿನ ಕಪ್ಪು ಗ್ರ್ಯಾನೇಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ಕಲ್ಲಿನ ಮೇಲೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಕಾರ್ಮಿಕರ ಮೌಲ್ಯ ಸಾರುವ ನುಡಿಮುತ್ತಿನ ಅಕ್ಷರಗಳನ್ನು ಅಂದವಾಗಿ ಕೆತ್ತಲಾಗಿದೆ.
ದುಡಿಮೆಯ ಪ್ರತಿಬಿಂಬ: ಕಲ್ಲಿನ ಮೇಲೆ ಕೆತ್ತಲಾಗಿರುವ ‘ಮುಗಿವ ಕೈಗಳಿಗಿಂತ ದುಡಿಯುವ ಕೈಗಳೇ ಮೇಲು’ ಎಂಬ ಉಕ್ತಿ ಹಾಗೂ ‘ನಾಡಿಗೆ ಬೆಳಕು ಕೊಟ್ಟು ತಾವು ಕತ್ತಲೆ ಸೇರಿದ ಸಾವಿರಾರು ಕಾರ್ಮಿಕರ ಅಮರ ಸ್ಮಾರಕ’ ಎಂಬ ವಾಕ್ಯ ಕಾರ್ಮಿಕರ ಮಹತ್ವ, ಅವರ ಶ್ರಮದ ಮೌಲ್ಯವನ್ನು ಎತ್ತಿಹಿಡಿದಿವೆ. ಸ್ಮಾರಕ ಕಲ್ಲಿನ ಮೇಲೆ ಪಕ್ಕಡ್ ಹಿಡಿದಿರುವ ಕೈ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇದು ವಿದ್ಯುತ್ ಇಲಾಖೆಯಲ್ಲಿ ದುಡಿಯುವ ಕಾರ್ಮಿಕರ ದುಡಿಮೆಯ ಪ್ರತಿಬಿಂಬವಾಗಿದೆ.
ನಿತ್ಯಾರಾಧನೆ: ಹಲವರು ಹಲವು ರೀತಿಯ ಸ್ಮಾರಕಗಳನ್ನು ನಿರ್ಮಿಸುತ್ತಾರೆ. ಕಟ್ಟಲೆಂದೇ ಹೋರಾಡುತ್ತಾರೆ; ಹಾರಾಡುತ್ತಾರೆ. ಆದರೆ, ಅದು ಉದ್ಘಾಟನೆಯಾದ ಮೇಲೆ ಸ್ಮಾರಕ ಅಕ್ಷರಶಃ ಅನಾಥವಾಗುತ್ತದೆ. ಮತ್ತೆ ಆ ಸ್ಮಾರಕ ನೆನಪಿಗೆ ಬರುವುದು ವರ್ಷಕ್ಕೊಮ್ಮೆ ಬರುವ ವಿಶೇಷ ದಿನದಂದು ಮಾತ್ರ. ಆದರೆ, ಹೆಸ್ಕಾಂನ ಈ ಕಾರ್ಮಿಕ ಸ್ಮಾರಕ ನಿತ್ಯ ಕಾರ್ಮಿಕರಿಗೆ ಅವರ ಶ್ರಮದ ಮಹತ್ವ ಜಾಗೃತಿಗೊಳಿಸುತ್ತಿದೆ.
ಕಚೇರಿಗೆ ಬರುವ ಪ್ರತಿಯೊಬ್ಬ ಕಾರ್ಮಿಕ ಒಮ್ಮೆ ಈ ಸ್ಮಾರಕಕ್ಕೆ ನಮಿಸಿಯೇ ತನ್ನ ಕರ್ತವ್ಯಕ್ಕೆ ಅಣಿಯಾಗುತ್ತಾನೆ. ತನ್ಮೂಲಕ ಈ ಸ್ಮಾರಕ ಕಾರ್ಮಿಕರಿಂದ ನಿತ್ಯಾರಾಧನೆಗೊಳ್ಳುತ್ತದೆ. ಅದರಲ್ಲೊಂದು ಶ್ರಮದ ಶಕ್ತಿಯನ್ನು ಕಾರ್ಮಿಕರು ಕಾಣುತ್ತಿರುವುದು ಮತ್ತೂಂದು ವಿಶೇಷ.
•’ಮುಗಿವ ಕೈಗಳಿಗಿಂತ ದುಡಿಯುವ ಕೈಗಳೇ ಮೇಲು’
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Lokayukta: ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಉಪ ತಹಶೀಲ್ದಾರ್](https://www.udayavani.com/wp-content/uploads/2024/07/9-16-150x90.jpg)
Lokayukta: ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಉಪ ತಹಶೀಲ್ದಾರ್
![Hirekerur: ಬೈಕ್ ಮೇಲೆ ಬಿದ್ದ ಮರ; ಹೆಸ್ಕಾಂ ನೌಕರರಿಬ್ಬರು ಸಾವು](https://www.udayavani.com/wp-content/uploads/2024/07/haveri-3-150x83.jpg)
Hirekerur: ಬೈಕ್ ಮೇಲೆ ಬಿದ್ದ ಮರ; ಹೆಸ್ಕಾಂ ನೌಕರರಿಬ್ಬರು ಸಾವು
![4-haveri](https://www.udayavani.com/wp-content/uploads/2024/07/4-haveri-150x90.jpg)
Haveri: ಮನೆ ಮೇಲ್ಛಾವಣಿ ಕುಸಿದು 18 ತಿಂಗಳ ಅವಳಿ ಮಕ್ಕಳು ಸೇರಿ ಮೂವರು ಸಾವು
![ಹಾವೇರಿ: ಐದು ವರ್ಷದಲ್ಲಿ 350 ಕುರಿಗಳ ಸಾವು! ಕೇಂದ್ರದ ಕಾರ್ಯವೈಖರಿ ಬಗ್ಗೆ ಅನುಮಾನ](https://www.udayavani.com/wp-content/uploads/2024/07/Haveri-2-150x62.jpg)
ಹಾವೇರಿ: ಐದು ವರ್ಷದಲ್ಲಿ 350 ಕುರಿಗಳ ಸಾವು! ಕೇಂದ್ರದ ಕಾರ್ಯವೈಖರಿ ಬಗ್ಗೆ ಅನುಮಾನ
![Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು](https://www.udayavani.com/wp-content/uploads/2024/07/haveri-1-150x92.jpg)
Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು.. ಸಾರ್ವಜನಿಕರಿಂದ ಆಕ್ರೋಶ
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.