ಜನಕ್ಕೆ ನೀರಿಲ್ಲ ದನಕ್ಕೆ ಮೇವಿಲ್ಲ
Team Udayavani, Apr 30, 2019, 3:40 PM IST
ಕುಕನೂರು: ತಾಲೂಕನ್ನು ಸರ್ಕಾರ ಬರಗಾಲ ಪೀಡಿತವೆಂದು ಘೋಷಿಸಿ 50 ಲಕ್ಷ ರೂ. ಮಂಜೂರು ಮಾಡಿ, ಪ್ರತಿ ರೈತನ ಖಾತೆಗೆ ಇಂತಿಷ್ಟು ಎಂದು ಹಣ ಜಮೆ ಮಾಡಿ ಪರಿಹಾರ ನೀಡಿದ್ದೇವೆ ಎಂದು ಕೈ ತೊಳೆದುಕೊಂಡಿದೆ. ಆದರೆ ಬರ ನಿರ್ವಹಣೆಗೆ ಸಮಪರ್ಕ ಕಾರ್ಯ ನಿರ್ವಹಿಸಿಲ್ಲ. ತಾಲೂಕಿನಲ್ಲಿ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ.
ಸತತ ಮೂರು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವ ಕುಕನೂರು ತಾಲೂಕು ಜನತೆಯ ಪರಿಸ್ಥಿತಿ ಹೇಳತೀರದು. ಒಣಬೇಸಾಯವನ್ನೇ ನಂಬಿಕೊಂಡಿರುವ ಇಲ್ಲಿನ ರೈತರ ಜಾನುವಾರುಗಳಿಗೆ ಯರೆ ಭಾಗದ ಕೆರೆ ನೀರೇ ಗತಿ. ಆದರೆ ಬರಗಾಲದಿಂದಾಗಿ ಕೆರೆ ಅಂಗಳದಲ್ಲಿ ಹನಿ ನೀರು ಸಿಗುವುದು ದುಸ್ಥರವಾಗಿದೆ.
ಗಗನಕ್ಕೇರಿದ ಮೇವಿನ ಬೆಲೆ: ಜಾನುವಾರುಗಳಿಗೆ ಮೇವು ಖರೀದಿಸಿ, ಸಂಗ್ರಹಿಸಬೇಕೆಂದಿರುವ ರೈತರಿಗೆ ಹಣ ನೀಡಿದರೂ ಮೇವು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ಬರಗಾಲದಲ್ಲಿ ಮೇವಿಗೆ ತಾಲೂಕಿನಲ್ಲಿ ಚಿನ್ನದ ಬೆಲೆ ಬಂದಿದೆ. ರೈತರು ನೀರಾವರಿ ಭಾಗದಿಂದ ಹೆಚ್ಚಿನ ಬೆಲೆಕೊಟ್ಟು ನೆಲ್ಲುಹುಲ್ಲನ್ನು ಖರೀದಿಸಿ ತರುತ್ತಿದ್ದಾರೆ. ನೀರಾವರಿ ವಂಚಿತ ತಾಲೂಕಿನ ಕುಕನೂರು, ತಳಕಲ್ ಹಾಗೂ ಮಂಗಳೂರು ಹೋಬಳಿಗಳ ಬಹುತೇಕ ಗ್ರಾಮಗಳಲ್ಲಿ ಮೇವಿನ ಸಮಸ್ಯೆ ಹೆಚ್ಚಿದೆ.
ಜಾನುವಾರುಗಳನ್ನು ಸದೃಢಗೊಳಿಸುವ ಕಾಳುಕಡಿ ಬಿಟ್ಟು ಮೆಕ್ಕೆಜೋಳದ ಮೇವು ಬಂಡಿಗೆ 1200, ಟ್ರ್ಯಾಕ್ಟರ್ಗೆ 3500, ಜೋಳದ ಮೇವು ಕ್ರಮವಾಗಿ 4000 ಮತ್ತು 6000, ಭತ್ತದ ಹುಲ್ಲು ಕ್ರಮವಾಗಿ 5500 ಮತ್ತು 6500 ಹಾಗೂ ಶೇಂಗಾ ಹೊಟ್ಟು ಕ್ರಮವಾಗಿ 4000 ಮತ್ತು 5000 ಕೊಟ್ಟು ತರುವುದು ಅನಿವಾರ್ಯವಾಗಿದೆ. ತಾಲೂಕಿನಲ್ಲಿ 60 ಸಾವಿರ ಜಾನುವಾರುಗಳಿವೆ. ಬರಗಾಲದ ಹಿನ್ನೆಲೆಯಲ್ಲಿ ಮೇವು ಮತ್ತು ನೀರು ಕೊರತೆಯಿಂದ 30 ಸಾವಿರ ಜಾನುವಾರುಗಳ ಸ್ಥಿತಿ ಗಂಭೀರವಾಗಲಿದೆ. ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗೋಶಾಲೆ ಆರಂಭಿಸಲಾಗಿದೆ. ಆದರೆ ಕುಕನೂರು ತಾಲೂಕಿನಲ್ಲಿ ಇದುವರೆಗೂ ಗೋ ಶಾಲೆ ಪ್ರಾರಂಭಿಸಿಲ್ಲ. ಗೋ ಶಾಲೆಯಾದರೂ ಪ್ರಾರಂಭವಾದರೆ ಹೇಗೊ ಬದಕು ಸಾಗಿಸಬಹುದು ಎನ್ನುತ್ತಾರೆ ರೈತರು.
ಜನಕ್ಕೆ ನೀರಿಲ್ಲ ದನಕ್ಕೆ ಮೇವಿಲ್ಲ
ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಬೆಳೆ ಹಾನಿಯಾದರು ಬೆಳೆವಿಮೆ ಬರುತ್ತಿರುವುದು ಬೆರೆಳನಿಕೆಯ ರೈತರಿಗೆ ಮಾತ್ರ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ತಾಲೂಕಿನ ರೈತರು ದುಡುಕಿನ ನಿರ್ಧಾರ ತೆಗೆದುಕೊಳ್ಳಬಹುದು.
•ಅಂದಪ್ಪ ಕೋಳೂರು ಜಿಲ್ಲಾ ರೈತ ಸಂಘದ ಮುಖಂಡ
ತಾಲೂಕಿನ ಚಂಡೂರು, ಭಾನಾಪೂರ ಹಾಗೂ ಮಂಗಳೂರು ಗ್ರಾಮಗಳಲ್ಲಿ ಕೂಡಿಯುವ ನೀರಿನ ಸಮಸ್ಯೆ ಇದೆ. ಈ ಕುರಿತು ಮಂಗಳವಾರ ನಡೆಯುವ ಕೋರ್ ಕಮಿಟಿ ಮಿಟಿಂಗ್ನಲ್ಲಿ ಚರ್ಚಿಲಾಗುವುದು. ಪಟ್ಟಣದಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಿದ ಕಾರಣ ಗೋ ಶಾಲೆ ಕುಕನೂರು ತಾಲೂಕಿಗೆ ಅಗತ್ಯ ಇಲ್ಲ ಎಂದು ಮೆಧೀಲಾಧಿಕಾರಿಗಳು ಹೇಳಿದ್ದಾರೆ.
•ನೀಲಪ್ರಭಾ, ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು
Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ
Bengaluru: ಸೈಕಲ್ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ
Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ