ರಾಣೆಬೆನ್ನೂರ:ವಿಷಪೂರಿತ ಆಹಾರ ಸೇವನೆ: 40 ಕುರಿಗಳ ಸಾವು
Team Udayavani, Jun 12, 2023, 4:07 PM IST
ರಾಣೆಬೆನ್ನೂರ: ವಿಷಪೂರಿತ ಆಹಾರ ಸೇವಿಸಿ 40ಕ್ಕೂ ಅಧಿಕ ಕುರಿಗಳು ಮೃತಪಟ್ಟಿರುವ ಘಟನೆ ಹಿನ್ನೆಲೆಯಲ್ಲಿ ರವಿವಾರ ಮೃತಪಟ್ಟ ಕುರಿಗಳ ಮಾಲೀಕ ಸೋಮಪ್ಪ ಕುರವತ್ತಿ ಹಾಗೂ ಕುರಿಗಾಹಿಗಳು ಮತ್ತು ರೈತರು ಕುರಿಗಳು ಸಾವಿಗೆ ಕಾರಣವಾಗಿರುವ ಖಾಸಗಿ ಕಂಪನಿಯನ್ನು ಸ್ಥಗಿತಗೊಳಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದರು.
ಮಾಗೋಡ ಗ್ರಾಮದ ಅಂಡರ್ಬ್ರಿಡ್ಜ್ ಬಳಿ ಶನಿವಾರ ಖಾಸಗಿ ಕಂಪನಿ ಅವಧಿ ಮುಗಿದಿರುವ ಕುರ್ಕುರೆ ಪ್ಯಾಕೆಟ್ಗಳನ್ನು ರಸ್ತೆ
ಮೇಲೆ ಚೆಲ್ಲಲಾಗಿತ್ತು. ರಸ್ತೆ ಮೇಲಿದ್ದ ಪದಾರ್ಥಗಳನ್ನು ಸುಮಾರು 60ಕ್ಕೂ ಅಧಿಕ ಕುರಿಗಳು ಸೇವಿಸಿದ್ದವು. ಅವುಗಳಲ್ಲಿ 40ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿದ್ದು, ಇನ್ನೂ ಕೆಲ ಕುರಿಗಳು ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿವೆ. ಹೀಗಾಗಿ ಸಂಬಂಧಪಟ್ಟ ಕುರ್ಕುರೆ ಖಾಸಗಿ ಕಂಪನಿಯನ್ನು ಸ್ಥಗಿತಗೊಳಿಸಿ ಸಾವನ್ನಪ್ಪಿದ ಕುರಿಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯ ಕುರಿ ಸಾಕಾಣಿಕೆದಾರ ಸಂಘಗಳ ಮಹಾಮಂಡಳಿ ನಿರ್ದೇಶಕ ಜೆ. ಜಯಪ್ಪ ಮಾತನಾಡಿ, ಕುರ್ಕುರೆ ವಿಷಪೂರಿತ ಆಹಾರ
ಪದಾರ್ಥವನ್ನು ರಸ್ತೆ ಮೇಲೆ ಬೇಕಾಬಿಟ್ಟಿಯಾಗಿ ಎಸೆದು 40ಕ್ಕೂ ಅಧಿಕ ಕುರಿಗಳ ಸಾವಿಗೆ ಕಾರಣವಾಗಿರುವ ಕಂಪನಿಯನ್ನು ರಾಜ್ಯಾದ್ಯಂತ ಸ್ಥಗಿತಗೊಳಿಸಬೇಕು. ಕುರಿಗಳ ಮಾಲೀಕರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಇಲ್ಲವಾದಲ್ಲಿ ಶೀಘ್ರದಲ್ಲಿಯೇ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹಲಗೇರಿ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಬಸನಗೌಡ ಬಿರಾದಾರ, ತಾಲೂಕು ಕುರುಬ ಸಂಘದ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ಕಾರ್ಯದರ್ಶಿ ಮೃತ್ಯುಂಜಯ ಗುದಿಗೇರ, ಗ್ರಾಮಲೆಕ್ಕಾಧಿ ಕಾರಿ ಸಿ.ಎನ್. ಪೂಜಾರ, ಅಶೋಕ ಢವಳೇಶ್ವರ, ಆನಂದ್ ಹುಲ್ಬನ್ನಿ, ಬರಮಪ್ಪ ಕಂಬಳಿ, ರಾಮಪ್ಪ, ಸಿದ್ದಪ್ಪ, ಹನುಮಂತಪ್ಪ ಕುರವತ್ತಿ, ಸುರೇಶ ಮಡಿವಾಳರ, ನೀಲಪ್ಪ ದೇವರಗುಡ್ಡ, ಲೋಕಪ್ಪ ಇದ್ದರು.
ಮಾಗೋಡ ಗ್ರಾಮದ ರೈತ ಸೋಮಪ್ಪ ಬಸಪ್ಪ ಕುರುವತ್ತಿಯ ಕುರಿಗಳು ಸಾವನ್ನಪ್ಪಿರುವ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಸಾವನ್ನಪ್ಪಿರುವ ಕುರಿಗಳ ಮಾಲೀಕರಿಗೆ ಸೂಕ್ತ ಪರಿಹಾರವನ್ನು ಕೊಡಲು ನಮಗೆ ಬರುವುದಿಲ್ಲ. ಸ್ಥಳೀಯ ಶಾಸಕರ ಸಲಹೆ
ಪಡೆದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿ ಮೂಲಕ ಸೂಕ್ತ ಪರಿಹಾರ ನೀಡುವಂತೆ ಪ್ರಾಮಾಣಿಕ
ಪ್ರಯತ್ನ ಮಾಡುತ್ತೇವೆ.
ಎ. ಗುರುಬಸವರಾಜ,
ತಹಶೀಲ್ದಾರ್ ರಾಣೆಬೆನ್ನೂರ
ಕುರಿಗಳು ವಿಷಪೂರಿತ ಆಹಾರವನ್ನು ಸೇವಿಸಿ ಮೃತಪಟ್ಟಿವೆ. ಇನ್ನೂ ಕೆಲ ಕುರಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿದ್ದೇವೆ.
ಮೃತಪಟ್ಟ ಕುರಿಗಳನ್ನು ಪೋಸ್ಟ್ ಮಾರ್ಟಂ ಮಾಡಿಸಿ ವರದಿ ಸಲ್ಲಿಸುತ್ತೇವೆ.
ಡಾ| ರಾಘವೇಂದ್ರ, ಪಶುವೈದ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
ಹಾವೇರಿ: ಕಾಂಗ್ರೆಸ್ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ
ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು