8ರಂದು ಕನಕ ಗುರುಪೀಠ ಶಾಖಾ ಮಠ ಲೋಕಾರ್ಪಣೆ
ಭಕ್ತರ ದೇಣಿಗೆಯಿಂದಲೇ ನಿರ್ಮಾಣ
Team Udayavani, May 5, 2019, 11:00 AM IST
ಹೂವಿನಹಡಗಲಿ: ಸುಕ್ಷೇತ್ರದಲ್ಲಿ ನಿರ್ಮಾಣವಾಗಿರುವ ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠ.
ಹೂವಿನಹಡಗಲಿ: ಸಮಾಜವನ್ನು ಮುಖ್ಯ ವಾಹಿನಿಗೆ ಕರೆ ತರುವಲ್ಲಿ ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ಹಾಲು ಮತ ಸಮಾಜದ ಕನಕ ಗುರು ಪೀಠದ ಶಾಖಾ ಮಠವನ್ನು ತಾಲೂಕಿನ ಮೈಲಾರ ಸುಕ್ಷೇತ್ರದಲ್ಲಿ ನಾಡಿನ ಭಕ್ತರಿಗೆ ಮೇ 8 ರಂದು ಸಮರ್ಪಣೆ ಮಾಡಲಾಗುತ್ತಿದೆ.
ಯಾರು ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಹಿಂದುಳಿದಿದ್ದಾರೆಯೋ ಅಂಥ ವರ್ಗವನ್ನು ಗಮನದಲ್ಲಿಟ್ಟುಕೊಂಡು ಮೈಲಾರ ಕ್ಷೇತ್ರದಲ್ಲಿ ಶಾಖಾ ಮಠ ನಿರ್ಮಾಣವಾಗುತ್ತಿರುವುದು ನಾಡಿನ ಶ್ರೀ ಮೈಲಾರಲಿಂಗ ಭಕ್ತರ, ಕನಕಾಭಿಮಾನಿಗಳ ಸ್ವಾಭಿಮಾನದ ಸಂಕೇತವಾಗಿ ತಲೆ ಎತ್ತುತ್ತಿದೆ.
ಕರ್ನಾಟಕ ಒಳಗೊಂಡಂತೆ ಮೈಲಾರಲಿಂಗ ಸ್ವಾಮಿ ಭಕ್ತರು ಬಹುತೇಕವಾಗಿ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮುಂತಾದ ಕಡೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಇದ್ದಾರೆ. ಸುಕ್ಷೇತ್ರಕ್ಕೆ ಹಾಲು ಮತ ಸಮಾಜದವರು ಬಂದು ಹೋಗುವಾಗ ಇಲ್ಲಿ ಸ್ಥಾಪನೆಯಾಗಿರುವಂತಹ ಹಾಲುಮತ ಸಮಾಜದ ಮಠವನ್ನು ನೋಡಿದಾಗ ಇದೊಂದು ಸಮಾಜದ ಸ್ವಾಭಿಮಾನದ ಸಂಕೇತವಾಗಿ ಬಿಂಬಿತವಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಆರು ತಿಂಗಳ ಹಿಂದೆಯಷ್ಟೇ ಕನಕ ಗುರು ಪೀಠದಿಂದ ಮೈಲಾರ ಗ್ರಾಮದ ಶಿಬಾರ ಕಟ್ಟೆ ಸಮೀಪ ಒಂದು ಎಕರೆಯಷ್ಟು ಭೂಮಿ ಖರೀದಿಸಿ ಭವ್ಯ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, 240 ಚದರ ಅಡಿಯಲ್ಲಿ ಶಾಖಾ ಮಠ ತಲೆ ಎತ್ತಿದೆ.
ರೇವಣಸಿದ್ಧ ಪರಂಪರೆ ಹೊಂದಿರುವ ಬೀರ ದೇವರು. ಮೈಲಾರಲಿಂಗ ಹೀಗೆ ಹಲವಾರು ಧಾರ್ಮಿಕ ಪರಂಪರೆ ಹೊಂದಿರುವ ಹಾಲುಮತ ಸಮಾಜದ ಈ ಶಾಖಾ ಮಠದಲ್ಲಿ ಸ್ಪಟಿಕ ಲಿಂಗು ಪ್ರತಿಷ್ಠಾಪನೆ ಮಾಡುವ ಮೂಲಕವಾಗಿ ಐಕ್ಯತೆ ತೋರಿದ್ದಾರೆ. ಸ್ಪಟಿಕ ಲಿಂಗುವಿನ ವಿಶೇಷ ಶಾಂತ ಸ್ವರೂಪವಾಗಿದ್ದು, ಪ್ರತಿ ಮನುಷ್ಯರು ಸಹ ಜೀವನದಲ್ಲಿ, ಬದುಕಿನಲ್ಲಿ ಶಾಂತತೆ ಕಂಡುಕೊಳ್ಳುವ ಮಹತ್ತರ ಉದ್ದೇಶ ಶ್ರೀಮಠದ್ದಾಗಿದೆ. ಭಕ್ತರ ದೇಣಿಗೆಯಿಂದಲೇ ನಿರ್ಮಾಣಗೊಂಡಿರುವ ಈ ಮಠ ಬಡ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಉನ್ನತ, ಗುಣ ಮಟ್ಟದ ಶಿಕ್ಷಣವನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸಹ ಮುಂದಿನ ದಿನಗಳಲ್ಲಿ ಮಾಡುತ್ತದೆ ಎಂದರು.
ಕನಕ ಗುರು ಪೀಠ ಒಂದು ಜಾತಿ ಆಥವಾ ಒಂದು ವರ್ಗಕ್ಕೆ ಸೀಮೀತವಾಗಿದ್ದಲ್ಲ. ಯಾರು ಸಮಾಜಮುಖೀಯಾಗಿ, ಶೋಷಣೆಗೆ ಒಳಗಾಗಿದ್ದಾರೆಯೋ, ಯಾರು ಶೈಕ್ಷಣಿಕ, ಧಾರ್ಮಿಕವಾಗಿ ದೂರವಿದ್ದಾರೆಯೋ ಅಂಥ ವರ್ಗವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಶಿಕ್ಷಣ, ಧಾರ್ಮಿಕ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ಶ್ರೀಮಠ ಸದಾ ಚಿಂತನೆ ಮಾಡುತ್ತದೆ. ನಮ್ಮ ಮಠದ ಪರಿಕಲ್ಪನೆ ಯಾವತ್ತೂ ಸಹ ಒಂದು ಜಾತಿಗೆ ಸೀಮೀತವಾಗಿರುವುದಿಲ್ಲ.
•ನಿರಂಜನಾನಂದಪುರಿ ಶ್ರೀ,
ಕನಕ ಗುರುಪೀಠ.
ವಿಶ್ವನಾಥ ಹಳ್ಳಿಗುಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
MUST WATCH
ಹೊಸ ಸೇರ್ಪಡೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ