ಕಲಬುರಗಿಯಲ್ಲಿ ಹರಿಯಲಿದೆ ಅಮೃತ ಧಾರೆ

ಯಾವುದಕ್ಕೂ ಭಯ ಪಡದೆ ಭಗವಂತನಲ್ಲಿ ಶ್ರದ್ಧೆಯಿಡಿ •ಅತ್ಯಂತ ಸುಂದರವಾಗಿದೆ ಅಮೃತ ಸರೋವರ ಸಭಾಂಗಣ

Team Udayavani, Jun 10, 2019, 9:54 AM IST

10-Juen-1

ಕಲಬುರಗಿ: ಗೀತಾ ನಗರದಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ ಸುವರ್ಣ ಮಹೋತ್ಸವ, ಅಮೃತ ಸರೋವರ ರಿಟ್ರೀಟ್ ಸೆಂಟರ್‌ ಹಾಗೂ ಸಭಾಂಗಣವನ್ನು ರಾಜಯೋಗಿನಿ ದಾದಿ ಜಾನಕಿ ಉದ್ಘಾಟಿಸಿದರು.

ಕಲಬುರಗಿ: ಅತ್ಯಂತ ವಿಶಾಲ ಮತ್ತು ಶಾಂತವಾದ ಕಲಬುರಗಿ ಅಮೃತ ಸರೋವರದಲ್ಲಿ ಸದಾ ಅಮೃತ ಧಾರೆ ಹರಿಯಲಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯಸ್ಥೆ, ಶತಾಯುಷಿ ರಾಜಯೋಗಿನಿ ದಾದಿ ಜಾನಕಿ ತಿಳಿಸಿದರು.

ನಗರ ಹೊರವಲಯದ ಗೀತಾ ನಗರದಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸುವರ್ಣ ಮಹೋತ್ಸವ, ಅಮೃತ ಸರೋವರ ರಿಟ್ರೀಟ್ ಸೆಂಟರ್‌ ಹಾಗೂ ಸಭಾಂಗಣವನ್ನು ರವಿವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಅಮೃತ ಸರೋವರದ ಸಭಾಂಗಣ ಅತ್ಯಂತ ಸುಂದರವಾಗಿದೆ. ಇದನ್ನು ಕಂಡು ನಾನು ಆಶ್ಚರ್ಯಚಕಿತಳಾಗಿದ್ದೇನೆ. ಇಂತಹ ಸಭಾಂಗಣ ಅಮೆರಿಕಾ, ಲಂಡನ್‌ನಲ್ಲೂ ನಾನು ನೋಡಿಲ್ಲ. ಶುಭ ಭಾವನೆಯಿಂದ ಎಲ್ಲರೂ ಚಿಂತನೆಯಲ್ಲಿ ತೊಡಗಿದರೆ ಇಲ್ಲಿ ಅಮೃತ ಧಾರೆ ಹರಿಯುತ್ತಲೇ ಇರುತ್ತದೆ ಎಂದರು.

ಮನುಷ್ಯನಿಗೆ ಶಾಂತಿ, ಪ್ರೇಮ, ಖುಷಿ ಬಹಳ ಮುಖ್ಯವಾಗಿ ಬೇಕು. ನಮ್ಮ ಐದು ಬೆರಳು ಸಮನಾಗಿಲ್ಲ. ಅದರಂತೆ ಎಲ್ಲರೂ ಸಮನಾಗಿರಲು ಸಾಧ್ಯವಿಲ್ಲ. ಯಾವುದಕ್ಕೂ ಭಯ ಪಡದೆ ಭಗವಂತನ ಮೇಲೆ ಶ್ರದ್ಧೆ ಇಟ್ಟು ಮನಸ್ಸನ್ನು ಶಾಂತವಾಗಿ ಇಟ್ಟುಕೊಂಡರೆ ಹರ್ಷ, ಸಂತೋಷದಿಂದ ಇರಲು ಸಾಧ್ಯ ಎಂದರು.

ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಮಾತನಾಡಿ, ವಿಶ್ವದ ಶಾಂತಿ ಮತ್ತು ಏಳ್ಗೆಗೆ ರಾಜಯೋಗಿನಿ ದಾದಿ ಜಾನಕಿ ಶ್ರಮಿಸುತ್ತಿದ್ದಾರೆ. ಪರಮಾತ್ಮನ ಸಂದೇಶ ತಲುಪಿಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ತಮ್ಮ 16ನೇ ವಯಸ್ಸಿನಿಂದಲೇ ಇಂತಹ ಕಾರ್ಯದಲ್ಲಿ ತೊಡಗಿರುವ ಅವರು 103 ವರ್ಷವಾದರೂ ವಿಶ್ರಾಂತಿ ಬಯಸದೇ ಇರುವುದು ನಮಗೆಲ್ಲ ಮಾದರಿ ಎಂದು ಹೇಳಿದರು

ವಿಶ್ವದಲ್ಲಿಯೇ ಸ್ಥಿರ ಮನಸ್ಸಿನ ಮಹಿಳೆ ಎನ್ನುವ ಖ್ಯಾತಿ ದಾದಿ ಜಾನಕಿ ಅವರದ್ದಾಗಿದೆ. ಮಹಿಳೆಯರ ಗೌರವ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸೋದರ ಭಾವನೆಯಿಂದ ಸಮಾಜ ಸುಧಾರಣೆ ಎನ್ನುವುದರಲ್ಲಿ ದಾದಿ ಜಾನಕಿ ನಂಬಿಕೆ ಇಟ್ಟಿದ್ದಾರೆ ಎಂದರು.

ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ದಾದಿ ಜಾನಕಿ ಅವರು ಕಲಬುರಗಿ ಜನತೆಗೆ ಆಶೀರ್ವಾದ ಮಾಡಲು ಅಷ್ಟೇ ಬಂದಿಲ್ಲ. ಇಲ್ಲಿನ ಜನರ ನೀರು ಮತ್ತು ಜ್ಞಾನ ದಾಹ ನೀಗಿಸಲು ಬಂದಿದ್ದಾರೆ. ಅವರು ವಿಮಾನ ನಿಲ್ದಾಣದಲ್ಲಿ ಕಾಲಿಡುತ್ತಿದಂತೆ ಶನಿವಾರ ಮಳೆ ಸುರಿಯಿತು ಎಂದು ಬಣ್ಣಿಸಿದರು.

ಅಮೃತ ಸರೋವರ ಸಭಾಂಗಣ ಅದ್ಭುತವಾಗಿದೆ. ರಾಜಸ್ಥಾನದ ಮೌಂಟ್ ಅಬುವಿನಲ್ಲಿ ಸಿಗುವ ಭಕ್ತಿ ಮತ್ತು ಶ್ರದ್ಧೆಯನ್ನು ಕಲಬುರಗಿಯಲ್ಲೇ ಪಡೆಯಬಹುದಾಗಿದೆ ಎಂದು ಹೇಳಿದರು.

ಕಲಬುರಗಿ ವಲಯದ ಮುಖ್ಯಸ್ಥೆ ರಾಜಯೋಗಿನಿ ವಿಜಯಾ ಬೆಹನ್‌ ಸ್ವಾಗತಿಸಿದರು. ರಾಷ್ಟ್ರೀಯ ಸಂಚಾಲಕ ಪ್ರೇಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಸೂರಿನ ಲಕ್ಷ್ಮೀ ಬೆಹನ್‌, ಬೆಂಗಳೂರಿನ ಸರೋಜಾ ಬೆಹನ್‌, ನಿರ್ಮಲಾ ಬೆಹನ್‌, ಅಂಬಿಕಾ ಬೆಹನ್‌, ಪದ್ಮಾ ಬೆಹನ್‌, ಹಂಸಾ ಬೆಹನ್‌, ಮಹಾದೇವಿ ಬೆಹನ್‌, ರಾಗಿಣಿ ಬೆಹನ್‌, ಬಿ.ಕೆ. ಬಸವರಾಜ, ಕುಲದೀಪ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಿಂದ ಬಂದಿದ್ದ ಭಕ್ತಾದಿಗಳು ಭಾಗವಹಿಸಿದ್ದರು.

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.