ಬಿಜೆಪಿಯಿಂದ ಪ್ರಜಾಪ್ರಭುತ್ವ ಅಳಿವು
Team Udayavani, Apr 11, 2019, 12:14 PM IST
ಅಫಜಲಪುರ: ಅತನೂರ ಗ್ರಾಮದಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು
ಅಫಜಲಪುರ: ಈ ಬಾರಿಯ ಲೋಕಸಭೆ ಚುನಾವಣೆ 135 ಕೋಟಿ ದೇಶವಾಸಿಗಳ ಹಿತದೃಷ್ಟಿಯಿಂದ ಮಹತ್ವದ್ದಾಗಿದ್ದು, ಪ್ರಜಾಪ್ರಭುತ್ವ, ಸಂವಿಧಾನ ಉಳಿಸಲು ಕಾಂಗ್ರೆಸ್ ಹೊರಟರೆ ಅದನ್ನು ಅಳಿಸಲು ಬಿಜೆಪಿ ಮುಂದಾಗಿದೆ ಎಂದು ಕಲಬುರಗಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ತಾಲೂಕಿನ ಅತನೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಜನರ ಪ್ರತಿನಿ ಧಿ, ಮತದಾರರೇ ನನ್ನ ಪ್ರಭುಗಳು. ಅವರಿಗಾಗಿ ನಾನು ಅಭಿವೃದ್ಧಿ ಕೆಲಸಗಳನ್ನು ಮಾಡಿ ಮತ ಕೇಳಲು ಬಂದಿದ್ದೇನೆ ಎಂದರು.
ಸೈನಿಕರ ಹೆಸರಲ್ಲಿ ಮತ ಹಾಕಿ, ಮೋದಿ ಹೆಸರಲ್ಲಿ ಮತ ಹಾಕಿ ಎನ್ನುವ ಬಿಜೆಪಿಗರಿಗೆ ಮತ ಕೇಳುವ ನೈತಿಕತೆ ಇಲ್ಲ. ಚುನಾವಣೆ ಬಂದಾಗ ಮೋದಿ ಮತ್ತವರ ಪಕ್ಷಕ್ಕೆ ಸೈನಿಕರ ಮೇಲೆ ಪ್ರೇಮ ಹುಟ್ಟಿದ್ದು ವಿಚಿತ್ರ ಸಂಗತಿ. ಸ್ವಾತಂತ್ರ ಸಂಗ್ರಾಮದಲ್ಲಿ ಧುಮುಕಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ದೇಶಕ್ಕೆ
ಸ್ವಾತಂತ್ರ್ಯ ತಂದು ಕೊಟ್ಟವರು ಕಾಂಗ್ರೆಸ್ನವರು. ಸ್ವಾತಂತ್ರ್ಯ ಸಂಗ್ರಾಮದ ವೇಳೆಯಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿಯವರಿಗೆ ಅಡ್ರೆಸ್ ಇರಲಿಲ್ಲ. ಈಗ ಅವರು ನಮಗೆ ದೇಶ ಪ್ರೇಮದ ಪಾಠ ಹೇಳಿಕೊಡುತ್ತಿದ್ದಾರೆ. ಇದು
ಹಾಸ್ಯಾಸ್ಪದ ಎಂದರು.
ನಾನು ಸ್ಪರ್ಧೆ ಮಾಡಿದ್ದು ಕಲಬುರಗಿಯಲ್ಲಿ. ನನ್ನನ್ನು ಸೋಲಿಸುವುದು ಗೆಲ್ಲಿಸುವುದು ಇಲ್ಲಿನ ಮತದಾರರೇ ಹೊರತಾಗಿ ಮೋದಿ, ಮತ್ತವರ ತಂಡವಲ್ಲ. ಕಲಬುರಗಿ ಮತದಾರರೇ ನನ್ನ ಪಾಲಿಗೆ ದೇವರು, ಅವರೇ ನನ್ನ ಸೋಲು,
ಗೆಲುವಿನ ನಿರ್ಧಾರ ಮಾಡುತ್ತಾರೆ ಹೊರತು ಮೋದಿಯಲ್ಲ ಎಂದು ಹೇಳಿದರು.
ಅಫಜಲಪುರ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಬಹಳಷ್ಟಿದೆ. ಇಲ್ಲಿನ ಮತದಾರರು ನನ್ನನ್ನು ಸಂಪೂರ್ಣ ಬೆಂಬಲಿಸಿ ಮತ ನೀಡಲಿದ್ದಾರೆ ಎನ್ನುವ ನಂಬಿಕೆ ಇದೆ ಎಂದರು. ಜಗದೇವ ಗುತ್ತೇದಾರ, ಕೆ.ಬಿ ಶಾಣಪ್ಪ, ಶರಣಪ್ಪ
ಮಟ್ಟೂರ, ಬಾಬುರಾವ್ ಚವ್ಹಾಣ, ರಾಜೇಂದ್ರಕುಮಾರ ಪಾಟೀಲ ರೇವೂರ (ಬಿ), ಮಕ್ಬೂಲ್ ಪಟೇಲ್, ಮಹಾಂತೇಶ ಪಾಟೀಲ, ಹಾಸಿಂಪೀರ್ ವಾಲಿಕಾರ, ಶಾಮರಾವ್ ಪ್ಯಾಟಿ, ಅಪ್ಪಾರಾವ ಪಾಟೀಲ, ರೇಣುಕಾ ಚವ್ಹಾಣ, ಪಪ್ಪು ಪಟೇಲ್, ಮತೀನ್ ಪಟೇಲ್, ಮಲ್ಲಿಕಾರ್ಜುನ ಖರ್ಗೆ ಅತನೂರ,
ಅಪ್ಪಾರಾವ್ ಪಾಟೀಲ, ಅಮೃತ ಮಿಂಚನ್, ರಮೇಶ ಪೂಜಾರಿ, ಶಿವಕುಮಾರ ನಾಟಿಕಾರ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!