ತುಂಬಿದ ಕಳಸಕೊಪ್ಪ ಕೆರೆ: ಕೋಡಿ ಮೂಲಕ ನೀರು ಹೊರಗೆ
Team Udayavani, Sep 28, 2019, 7:50 PM IST
ಚಂದ್ರಶೇಖರ ಆರ್.ಎಚ್
ಕಲಾದಗಿ: ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾದ ಕಳಸಕೊಪ್ಪ ಕೆರೆ ಭರ್ತಿಯಾಗಿದೆ. ಬಾಗಲಕೋಟೆ ತಾಲೂಕಿನ ಐದು ಗ್ರಾಮಗಳ 1142 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡಿಸುವ ಕಳಸಕೊಪ್ಪ ಕೆರೆ ಬುಧವಾರ ರಾತ್ರಿ ಸಂಪೂರ್ಣವಾಗಿ ತುಂಬಿ ಕೋಡಿಯ ಮೂಲಕ ನೀರು ಹೊರ ಬೀಳುತ್ತಿದೆ.
ಅಭಾವ ಕಡಿಮೆ: ಕೆರೆ ತುಂಬಿಕೊಳ್ಳುವುದರಿಂದ ಈ ಭಾಗದ ಹತ್ತಾರು ಗ್ರಾಮಗಳ ರೈತರ ಕೊಳವೆ ಬಾವಿಗಳು ಪುನಶ್ಚೇತನಗೊಳ್ಳುತ್ತಿದ್ದು ರೈತರಿಗೆ ಆಸರೆಯಾಗಿದೆ.
ಕೊಡಿ ಮೂಲಕ ಹೊರ: ಕೆರೆಗೆ ಹೇರಕಲ್ ದಕ್ಷಿಣ ಏತ ನೀರಾವರಿ ಯೋಜನೆ ಮೂಲಕ ಕೆರೆಗೆ ನೀರು ತುಂಬಿಸುತ್ತಿರುವುದು ಈ ಭಾಗದ ರೈತರ ಮೊಗದಲ್ಲಿ ಸಂತಸ ಉಂಟಾಗಿದೆ. 2016ರಲ್ಲಿ ಈ ಕೆರೆಗೆ ಮೊದಲ ಬಾರಿಗೆ ದಕ್ಷಿಣ ಹೇರಕಲ್ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಲು ಚಾಲನೆ ನೀಡಲಾಗಿತ್ತು, ಆ ವರ್ಷ ಪೂರ್ಣ ಪ್ರಮಾಣದಲ್ಲಿ ತುಂಬಿರಲಿಲ್ಲ, 2017, 2108ರಲ್ಲಿ ಕೆರೆಯು ತುಂಬಿ ಕೊಡಿಯ ಮೂಲಕ ನೀರು ಹೊರ ಚೆಲ್ಲಿದೆ. ಈ ವರ್ಷವೂ ತುಂಬಿ ಕೊಡಿಯ ಮೂಲಕ ಹೊರ ಚೆಲ್ಲುತ್ತಿದೆ. ರೈತರು ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ. ಮಳೆಯಿಂದ ಶೀಘ್ರ ಭರ್ತಿ: ಪ್ರಸಕ್ತ ವರ್ಷ ಜು 14ರಂದು ಕೆರೆಗೆ ನೀರು ತುಂಬಲು ಚಾಲನೆ ನೀಡಲಾಗಿತ್ತು. ಈ ವರ್ಷ
ಕೆರೆಯು ಬಹು ಬೇಗ ತುಂಬಿಕೊಂಡಿದೆ. ನಿರಂತರ ಯಾವುದೇ ಅಡೆ ತಡೆ ಇಲ್ಲದೆ ಜಾಕ್ವೆಲ್ ಪಂಪ್ಹೌಸ್ ಮೂಲಕ ನೀರು ತುಂಬಿಸುತ್ತಿರುವುದು ಮತ್ತು ಕಳೆದ ಮೂರು ದಿನದಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಳ್ಳ ಕೊಳ್ಳಗಳು
ತುಂಬಿ ಬೋರ್ಗರೆಯುತ್ತಿವೆ.
ಸಣ್ಣ ಜರಿಯಂತಾದ ಕೋಡಿ: ಕಳಸಕೊಪ್ಪ ಕೆರೆ 200 ಹೆಕ್ಟೇರ್ ಪ್ರದೇಶವನ್ನು ಮುಳುಗಡೆಯಾಗಿಸಿ ನೀರು ತುಂಬಿ ಹೊರಚೆಲ್ಲುವ ಓಗಿ ಮಾದರಿಯ ಕೋಡಿ 909 ಅಡಿ ಉದ್ದವಿದೆ.
0.24 ಟಿಎಂ.ಸಿ ನೀರು: ಕೆರೆ ನೀರು ನಿಲ್ಲುವ ಎತ್ತರ 5.4
ಮೀಟರನಷ್ಟಿದ್ದು, 17.8 ಅಡಿ ನೀರು ಸಂಗ್ರಹಣಾ ಸಾಮರ್ಥ ಇದ್ದು ನೀರಿನ ಮಟ್ಟ 5.4 ಮೀಟರ್ನಷ್ಟು ತುಂಬಿಕೊಂಡು 17.8 ಅಡಿ ತುಂಬಿಕೊಂಡಿದೆ. ಒಟ್ಟು 0.24 ಟಿಎಂ.ಸಿ ನೀರು ಸಂಗ್ರಹಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು