ಗಂವ್ಹಾರದಿಂದ ಅಬ್ಬೆ ತುಮಕೂರು ಶ್ರೀ ಪಾದಯಾತ್ರೆ
Team Udayavani, Jul 22, 2017, 11:27 AM IST
ಜೇವರ್ಗಿ: ಲೋಕಕಲ್ಯಾಣ ಮತ್ತು ಮಾನವ ಸಮೃದ್ಧಿಗಾಗಿ ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರು ವಿಶ್ವರಾಧ್ಯ ಸಿದ್ಧಸಂಸ್ಥಾನ
ಮಠದ ಡಾ| ಗಂಗಾಧರ ಮಹಾಸ್ವಾಮೀಜಿ ವಿಶ್ವಾರಾಧ್ಯರ ಜನ್ಮ ಸ್ಥಳ, ತಾಲೂಕಿನ ಸುಕ್ಷೇತ್ರ ಗಂವ್ಹಾರ ಗ್ರಾಮದಿಂದ ಶುಕ್ರವಾರ ಸಾವಿರಾರು ಭಕ್ತರ ಜೊತೆ ಪಾದಯಾತ್ರೆ ಪ್ರಾರಂಭಿಸಿದರು.
ಶುಕ್ರವಾರ ಬೆಳಗ್ಗೆ ಗಂವ್ಹಾರದ ಬನ್ನಿ ಬಸವೇಶ್ವರ ಕತೃì ಗದ್ದುಗೆಗೆ ಗೋಟಾರ ರುದ್ರಾ ಸಂಗೀತ ಬಳಗದಿಂದ ವಿಶೇಷ ರುದ್ರಾಭಿಷೇಕ,
ಪೂಜಾ ಕೈಂಕರ್ಯ ಮುಗಿಸಿದ ನಂತರ ಮಧ್ಯಾಹ್ನ 1:00 ಗಂಟೆಗೆ ಪಾದಯಾತ್ರೆ ಪ್ರಾರಂಭವಾಗಿ ಗ್ರಾಮದ ಸೀಮಾಂತರ
ಪ್ರದೇಶದಲ್ಲಿ ಭಕ್ತರಾದ ಚನ್ನಪ್ಪಗೌಡ ಬಿರಾದಾರ, ಬಸವಂತರಾಯ ಗೋಳಾ ಅವರ ಪಾದಗಟ್ಟೆಯಲ್ಲಿ ವಿಶ್ರಾಂತಿ ಪಡೆದು, ನಂತರ
ಅಣಬಿ ಗ್ರಾಮಕ್ಕೆ ತೆರಳಿತು.
ಪಾದಯಾತ್ರೆ ಸಂದರ್ಭದಲ್ಲಿ ಪುರವಂತರ ಸೇವೆ, ಕೋಲಾಟ, ಭಜನಾ ತಂಡಗಳು ಹಾಗೂ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಕಲಾತಂಡಗಳು ಎಲ್ಲರ ಗಮನ ಸೆಳೆಯಿತು. ಕಳೆದ 24 ವರ್ಷಗಳಿಂದ ಡಾ| ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಪಾದಯಾತ್ರೆಯಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಿಂದ 15ರಿಂದ 20 ಸಾವಿರ ಭಕ್ತರು ಆಗಮಿಸಿದ್ದರು. ಮೂರು ದಿನಗಳ ವರೆಗೆ ನಡೆಯುವ ಯಾತ್ರೆಯ ದಾರಿಯುದ್ದಕ್ಕೂ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪಾದಯಾತ್ರೆಯಲ್ಲಿ ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ
ನರಿಬೋಳ, ಮುಖಂಡರಾದ ಮಲ್ಲಿನಾಥಗೌಡ ಯಲಗೋಡ, ರಮೇಶಬಾಬು ವಕೀಲ, ಸಿದ್ದಣ್ಣಗೌಡ ಪಾಟೀಲ ಮಳಗ, ರಾಮಶೆಟ್ಟೆಪ್ಪ
ಸಾಹು ಹುಗ್ಗಿ, ಜಿಪಂ ಸದಸ್ಯ ರೇವಣಸಿದ್ದಪ್ಪ ಸಂಕಾಲಿ, ತಾಪಂ ಸದಸ್ಯ ಗುರುಬಸಪ್ಪ ದೊಡ್ಮನಿ ಹಾಗೂ ಸಾವಿರಾರು ಭಕ್ತರು
ಪಾಲ್ಗೊಂಡಿದ್ದರು.
ಪಾದಯಾತ್ರೆ ಹೊರಡುವ ಮಾರ್ಗ
ಪಾದಯಾತ್ರೆ ಸಂಜೆ ಅಣಬಿ ಗ್ರಾಮದಿಂದ ಸಿರವಾಳ ಸೀಮೆಯ ಸೋಮೇಶ್ವರ ಸನ್ನಿಧಾನಕ್ಕೆ ತಲುಪಿತು. ಅಲ್ಲಿಂದ ಭೀಮಾನದಿ ದಾಟಿ ಸನ್ನತಿಯ ಚಂದ್ರಲಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಲಿದೆ. ಸನ್ನತಿಯಿಂದ ಜು.22 ರಂದು ಬೆಳಗ್ಗೆ ಪಾದಯಾತ್ರೆ ಹೊರಟು ಕಗನಳ್ಳಿ, ಉಳುವಂಡಗೇರಾ, ಬನ್ನಟ್ಟಿ ಗ್ರಾಮವಾಗಿ ಹಾಗೂ ಹೆಡಗಿಮುದ್ರಿಯಲ್ಲಿ ತಂಗುವುದು. ಜು.23ರಂದು ಅಮಾವಾಸ್ಯೆ
ದಿನದಂದು ಬೆಳಗ್ಗೆ ಶಾಂತ ಶಿವಯೋಗಿ ಮಠದಿಂದ ಸಂಜೆ ವಿಶ್ವರಾಧ್ಯರ ಮುಕ್ತಿತಾಣವಾದ ಅಬ್ಬೆತೂಮಕೂರಿಗೆ ಪಾದಯಾತ್ರೆ ತಲುಪಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ