ಜಾನುವಾರು ಕೊಟ್ಟಿಗೆಯಾದ ಕ್ರೀಡಾಂಗಣ
ಕೆಕೆಆರ್ಡಿಬಿಯಿಂದ 3.98 ಕೋಟಿ ರೂ. ವೆಚ್ಚ ; ಜಿಪಂ ಉಪಾಧ್ಯಕ್ಷರ ತಾಕೀತಿಗೂ ಕೈಗೊಂಡಿಲ್ಲ ಕ್ರಮ
Team Udayavani, Aug 20, 2021, 7:48 PM IST
ಅಫಜಲಪುರ: 2015-16ರಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ತಾಲೂಕು ಮಟ್ಟದ ಕ್ರೀಡಾಂಗಣ ಕಾಮಗಾರಿ ಆರಂಭವಾಗಿ ಆರು ವರ್ಷ ಗತಿಸಿದರೂ ಕ್ರೀಡಾಂಗಣ ಕಾಮಗಾರಿ ಮುಕ್ತಾಯವಾಗಿಲ್ಲ. ಹೀಗಾಗಿ ತಾಲೂಕಿನ ಕ್ರೀಡಾಪಟುಗಳಿಗೆ ತೀವ್ರ ನಿರಾಸೆಯಾಗಿದೆ.
ನಾಲ್ಕು ಕೋಟಿ ವೆಚ್ಚದ ಕ್ರೀಡಾಂಗಣ: 2015-16ರಲ್ಲಿ ಯುವಜನ ಕ್ರೀಡಾ ಇಲಾಖೆ ವತಿಯಿಂದ ನಾಲ್ಕು ಕೋಟಿ ರೂ. ವೆಚ್ಚದ ತಾಲೂಕು
ಮಟ್ಟದ ಕ್ರಿಡಾಂಗಣ ಕಾಮಗಾರಿಗೆ ಆಗಿನ ಶಾಸಕ ಮಾಲೀಕಯ್ಯ ಗುತ್ತೇದಾರ ಅಡಿಗಲ್ಲು ನೆರವೇರಿಸಿದ್ದರು.
ಕ್ರೀಡಾಪಟುಗಳಿಗೆ ತೀವ್ರ ನಿರಾಸೆ: ತಾಲೂಕಿನ ಕ್ರೀಡಾಪಟುಗಳು ಪ್ರತಿ ವರ್ಷ ತಾಲೂಕು ಕ್ರೀಡಾಂಗಣದಲ್ಲಿ ಆಟವಾಡಿ ಖುಷಿ ಪಡಬೇಕೆಂಬ
ಕನಸು ನಾಲ್ಕೈದು ವರ್ಷಗಳಿಂದ ನನಸಾಗುತ್ತಿಲ್ಲ. 2015-16ರಲ್ಲಿ ಕೆಕೆಆರ್ಡಿಬಿ ವತಿಯಿಂದ 3.98 ಕೋಟಿ ರೂ. ವೆಚ್ಚದ ತಾಲೂಕು ಕ್ರೀಡಾಂಗಣಕ್ಕೆ ಚಾಲನೆ ನಿಡಲಾಗಿತ್ತು. ಆಗಿನಿಂದ ಈಗಿನ ವರೆಗೆ ತಾಲೂಕು ಕ್ರೀಡಾಂಗಣ ಕಾಮಗಾರಿ ಮುಗಿದಿಲ್ಲ. ಅನೇಕ ಸಮಸ್ಯೆಗಳನ್ನು ಎದುರಿಸಿ ಈಗಲೂ ಕ್ರೀಡಾಂಗಣ ಕಾಮಗಾರಿ ಕುಂಟುತ್ತಲೆ ಸಾಗಿದೆ.
ಇದನ್ನೂ ಓದಿ:ಜನನ ಪ್ರಮಾಣ ಭಾರೀ ಇಳಿಕೆ : ಚೀನಾದಲ್ಲಿ ಇನ್ನು ಮೂರು ಮಕ್ಕಳಿಗೆ ಅವಕಾಶ
ಅಧಿಕಾರಿಗಳ ನಿರ್ಲಕ್ಷ್ಯ : ಕ್ರೀಡಾಂಗಣ ಕಾಮಗಾರಿ ಸ್ಥಳಕ್ಕೆ ಜಿ.ಪಂ ಮಾಜಿ ಉಪಾಧ್ಯಕ್ಷೆ ಶೋಭಾ ಶಿರಸಗಿ ಎರಡು ಬಾರಿ ಭೇಟಿ ನೀಡಿ ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿ ಮುಗಿಸುವಂತೆ ತಾಕೀತು ಮಾಡಿದರೂ ಪ್ರಯೋಜನವಾಗಿಲ್ಲ
ನಾನು ಭೂಸೇನಾ ನಿಗಮದ ಪ್ರಭಾರಿ ಅಧಿಕಾರ ವಹಿಸಿ ಕೆಲ ದಿನಗಳಾಗಿವೆ. ಕ್ರೀಡಾಂಗಣ ಕಾಮಗಾರಿ ದಾಖಲಾತಿ ಪರಿಶೀಲಿಸಿ, ಶೀಘ್ರವೇ ಮುತುವರ್ಜಿ ವಹಿಸಿ ಕಾಮಗಾರಿ ಮುಕ್ತಾಯ ಮಾಡುವತ್ತ ಕ್ರಮ ಕೈಗೊಳ್ಳುತ್ತೇನೆ
-ರಾಜಶೇಖರ, ಲ್ಯಾಂಡ್ ಆರ್ಮಿ, ಪ್ರಭಾರಿ ಅಧಿಕಾರಿ
ಕ್ರೀಡಾಂಗಣಕ್ಕೆ ದಾರಿ ಸಮಸ್ಯೆ ಇತ್ತು. ಅದೀಗ ಬಗೆಹರಿದಿದೆ. ಬಹುತೇಕ ಕಾಮಗಾರಿ ಮುಗಿದಿದೆ. ಕ್ರೀಡಾಂಗಣಕ್ಕೆ ಹೋಗುವ ದಾರಿ ಮತ್ತು
ಇತರೆ ವ್ಯವಸ್ಥೆಗಾಗಿ ಎರಡು ಕೊಟಿ ರೂ. ಅನುದಾನ ಬಂದಿದೆ. ಇದನ್ನು ಕ್ರೀಡಾಂಗಣ ಆರಂಭಿಸಲಾಗುತ್ತದೆ.
-ಎಂ.ವೈ. ಪಾಟೀಲ, ಶಾಸಕ
2015ರಿಂದ ಕ್ರೀಡಾಂಗಣ ಕಾಮಗಾರಿ ಆರಂಭವಾದರೂ ಇಲ್ಲಿಯ ವರೆಗೆ ಮುಗಿದಿಲ್ಲ. ಪ್ರತಿ ಬಾರಿ ಸ್ವಾತಂತ್ರ್ಯದಿನದಂದು ಶಾಸಕರು ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡುತ್ತೇವೆ ಎಂದು ಹುಸಿ ಭರವಸೆ ನೀಡಿ ಜಾರಿಕೊಳ್ಳುತ್ತಿದ್ದಾರೆ. ಇದು ತಾಲೂಕಿನ ಕ್ರೀಡಾಪಟುಗಳಿಗೆ ಮಾಡುತ್ತಿರುವ ಮೋಸವಾಗಿದೆ.
-ಸದ್ದಾಂ ನಾಕೇದಾರ, ಸಾಮಾಜಿಕ ಕಾರ್ಯಕರ್ತ
-ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ