ವಿವಾದಿತ ಕೋಟೆಯಲ್ಲಿ ಮತ್ತೆ ಕಿಡಿಗೇಡಿಗಳ ಕೃತ್ಯ
Team Udayavani, Nov 6, 2017, 11:44 AM IST
ಶಹಾಬಾದ: ನಗರದ ಹಳೇಶಹಾಬಾದನಲ್ಲಿರುವ ವಿವಾದಿತ ಐತಿಹಾಸಿಕ ಕೋಟೆಯಲ್ಲಿ ರವಿವಾರ ಮತ್ತೆ ಕಿಡಿಗೇಡಿಗಳು ಕೋಟೆಯಲ್ಲಿ ಪೇಚಿಂಗ್ ಕಲ್ಲಿನ ಕಟ್ಟೆ ಕಟ್ಟಿ, ಅದರ ಮೇಲೆ ಗುಂಡು ಕಲ್ಲನ್ನಿಟ್ಟು , ವಿಭೂತಿ ಹಚ್ಚಿದ್ದರಿಂದ ನಗರದ ಹಳೆಶಹಾಬಾದನಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.
ಹಳೆಶಹಾಬಾದನ ವಿವಾದಿತ ಕೋಟೆಯಲ್ಲಿ ಕಳೆದ ಅಕ್ಟೋಬರ್ 20 ರಂದು ಈ ವಿವಾದಿತ ಸ್ಥಳದಲ್ಲಿ ಮೂರ್ತಿ ಕಟ್ಟೆ ಕಟ್ಟಿ ಅದರ ಮೇಲೆ ಕಿಡಿಗೇಡಿಗಳು ಈಶ್ವರ ಲಿಂಗ ಹಾಗೂ ನಂದಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಬಾಳೆದಿಂಡು, ಹೂಗಳಿಂದ ಪೂಜೆ ಸಲ್ಲಿಸಿದ್ದರು. ಇದರಿಂದ ಹಳೆಶಹಾಬಾದನಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಇದನ್ನು ಅರಿತ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿತ್ತು.
ರವಿವಾರ ಮತ್ತೆ ಈ ಹಿಂದೆ ತೆರವುಗೊಳಿಸಿದ್ದ ಅದೇ ಸ್ಥಳದಲ್ಲಿ ಮತ್ತೆ ಪೇಚಿಂಗ್ ಕಲ್ಲಿನ ಕಟ್ಟೆ ಕಟ್ಟಿ, ಕಪ್ಪು ಬಣ್ಣದ ಕಲ್ಲಿಗೆ ವಿಭೂತಿ ಹಚ್ಚಿ ಕಟ್ಟೆ ಮೇಲೆ ಇಟ್ಟಿದ್ದಾರೆ. ಈ ಸಂಬಂಧ ಹೆಚ್ಚುವರಿ ಎಸ್ಪಿ ಜಯಪ್ರಕಾಶ, ತಹಶೀಲ್ದಾರ ರವೀಂದ್ರ
ಧಾಮಾ, ಡಿವೈಎಸ್ಪಿ ಕೆ.ಬಸವರಾಜ, ಸಿಪಿಐ ಅಸ್ಲಾಂ ಭಾಷಾ, ಉಪತಹಶೀಲ್ದಾರ ಮಲ್ಲಿಕಾರ್ಜುನ ಶಿವಪುರೆ, ಕಂದಾಯ ಅಧಿಕಾರಿ ಮೋತಿಲಾಲ ಚವ್ಹಾಣ ಹಾಗೂ ಇತರ ಅಧಿಕಾರಿಗಳು ವಿವಾದಿತ ಸ್ಥಳಕ್ಕೆ ಭೇಟಿ ನೀಡಿ, ಕಟ್ಟೆಯನ್ನು
ತೆರವುಗೊಳಿಸಿದ್ದಾರೆ.
ಪೊಲೀಸ್ ಕಾವಲು: ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಳೆಶಹಾಬಾದನ ಕೋಟೆಯ
ಸುತ್ತಮುತ್ತ, ಜಾಕೀರ್ ಹುಸೇನ್ ವೃತ್ತದಲ್ಲಿ ಪೊಲೀಸ್ರನ್ನು ಕಾವಲಿಗೆ ಹಾಕಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
MUST WATCH
ಹೊಸ ಸೇರ್ಪಡೆ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ