ಕಲಾವಿದರು ಸಂಘಟಿತರಾದರೆ ಕಲೆಗೆ ಪ್ರೇರಣೆ: ಆಲಗೂಡಕರ್
Team Udayavani, Dec 30, 2017, 11:46 AM IST
ಕಲಬುರಗಿ: ಜಾನಪದ ಗೀತೆ, ಶರಣರ ವಚನಗಳು, ದಾಸವಾಣಿ, ಭಾವಗೀತೆಗಳು ಉಳಿದು ಬೆಳೆದು ಬರುವಲ್ಲಿ
ಕಲಾವಿದರ ಆಸಕ್ತಿ ಹಾಗೂ ಸತತ ಪ್ರಯತ್ನವೇ ಕಾರಣವಾಗಿದೆ. ಅಲ್ಲದೇ ಕಲಾವಿದರು ಸಂಘಟಿತರಾಗಿ ಸವಲತ್ತು ಪಡೆದಲ್ಲಿ ಕಲೆಗೂ ಪ್ರೇರಣೆ ದೊರಕಿದಂತಾಗುತ್ತದೆ ಎಂದು ಪಂಚಪೀಠದ ವಾರ್ತಾ ಪ್ರತಿನಿಧಿ ಸಿದ್ರಾಮಪ್ಪ ಆಲಗೂಡಕರ್ ಹೇಳಿದರು.
ನಗರದ ಮೌನೇಶ್ವರ ದೇವಸ್ಥಾನ ಸರಸ್ವತಿಪುರದಲ್ಲಿ ಕರ್ನಾಟಕ ಕಲಾ ಸಾಹಿತ್ಯ ಸಂಸ್ಕೃತಿ ಸೇವಾ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಲಾವಿದರ ಪ್ರತಿಭೆ ಗುರುತಿಸಿ ಸಮಾಜ ಸರಕಾರ ಗೌರವಿಸಬೇಕು. ಕಲೆಯಿಂದ ಸಾಕ್ಷಾತ್ಕಾರ ಪಡೆಯುವಂತೆ ಆಗಬೇಕು. ಕಲಾಸಕ್ತರು ಕಲೆಯಲ್ಲಿ ಇನ್ನು ಹೆಚ್ಚಿನ ಸಂಶೋಧನೆ ಮಾಡಬೇಕು. ಅದನ್ನು ಸಮಾಜಕ್ಕೆ ಪರಿಚಯಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ರಾಜೆ ಶಿವಶರಣಪ್ಪ ವಕೀಲರು ಮಾತನಾಡಿ, ಅನೇಕ ಸಂಗೀತ ಉಪಾಸಕರು ಸಾಧನೆ ಮಾಡಿ, ಗಾನಗಂಧರ್ವರಾಗಿ ಗಾನ ಪಂಡೀತರಾಗಿ, ಸಂಗೀತ ದಿಗ್ಗಜರೆನಿಸಿಕೊಂಡು ಹೋಗಿದ್ದಾರೆ ಎಂದರು. ಸಂಸ್ಥೆಯ ಅಧ್ಯಕ್ಷ ಬಾಬುರಾವ ಕೋಬಾಳ, ಕಲಾವಿದರ ಬದುಕು ಅನುಕರಣೀಯ ಆಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಗುರುನಾಥ ಶಾಸ್ತ್ರೀ ನೆಲೋಗಿ, ಪಶುಪಕ್ಷಿಗಳು ತಮ್ಮ ಭಾಷೆಯಲ್ಲಿ ಸುಂದರವಾಗಿ ಹಾಡಿ ಆನಂದಿಸುತ್ತಿವೆ. ಸಂಗೀತದಲ್ಲಿ ಅಪಾರವಾದ ಶಕ್ತಿ ಅಡಗಿದೆ. ಸಂಗೀತ ಕಲಿಯುವುದರಿಂದ, ಹಾಡುವುದರಿಂದ, ಕೇಳುವುದರಿಂದ ಮನುಷ್ಯರಿಗೆ ಆಯುಷ್ಯ, ಆನಂದ, ಆರೋಗ್ಯ ತಂದುಕೊಡುತ್ತದೆ ಎಂದು ಹೇಳಿದರು.
ಹಿರಿಯ ಶಿಲ್ಪಿ ಕಲಾವಿದರಾದ ಈರಣ್ಣಾ ಕಂಬಾರ, ಇಸ್ಮಾಯಿಲ್ಸಾಬ್ ಲದಾಫ್, ಕೃಷ್ಣಯ್ಯ, ಮಡಿಕಟ್ಟು, ಚಂದ್ರಕಲಾ ಟೆಂಗಳಿ ಮುಂತಾದವರಿದ್ದರು. ನಂತರ ನಡೆದ ಸಂಗೀತ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಠ, ಕಾಳಪ್ಪ ಭಂಟನಳ್ಳಿ ವಾಣಿಶ್ರೀ ವಾಲಿಕಾರ, ದತ್ತರಾಜ ಕಲಶೆಟ್ಟಿ, ಕಸ್ತೂರಿ ಡಿ, ಘಟ್ಟಿಕಾರ್, ರಾಚಯ್ಯಸ್ವಾಮಿ ಮಠಪತಿ, ಗಂಗಾಧರ ಎಚ್. ಪಾಟೀಲ, ರೇವಣಯ್ಯ ಸ್ವಾಮಿ ಸುಂಟನೂರ, ಸೋಮಯ್ಯ ಸಿಧನೂರ, ಸುಮಂಗಲಾ ಕೋರಿ, ಚೇತನ ಬಿ.ಕೆ., ಗುರುಲಿಂಗಯ್ನಾ ಬಸವಂತವಾಡಿ, ಪ್ರಶಾಂತ ಗೋಲ್ಡಸ್ಮಿತ್ ವೀರಭದ್ರಯ್ಯ ಸ್ಥಾವರಮಠ, ಶ್ರೀಮಂತ ಚಿಂಚನಸೂರ, ಪ್ರಶಾಂತ ಕಲಬುರಗಿ ಸುಗಮ ಸಂಗೀತ, ತತ್ವಪದ ಜಾನಪದ ಗೀತೆ ದಾಸವಾಣಿ, ವಚನ ಗಾಯನ ಹಾಡಿ, ಜನಮನ ಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?