ಎಚ್ಚರವಿರಲಿ, ಚಟ್ಟ ಹತ್ತಿಸುತ್ತವೆ ದುಶ್ಚಟಗಳು: ಸುಂಕದ
Team Udayavani, Aug 2, 2018, 11:08 AM IST
ಕಲಬುರಗಿ: ಮಾರಕ ರೋಗಗಳಿಗೆ ಕಾರಣವಾಗುವ ಮದ್ಯವ್ಯಸನದಂತಹ ದುಶ್ಚಟಗಳು ಮನುಷ್ಯನನ್ನು ಚಟ್ಟಕ್ಕೆ ಕರೆದೊಯ್ಯುತ್ತದೆ. ಇಂದಿನ ಯುವಕರು ಹೆಚ್ಚಾಗಿ ಮೊಬೈಲ್, ಗಣಕಯಂತ್ರದ ಮುಂದೆ ಕೂತು, ಮೊಬೈಲ್ನಲ್ಲಿ ಮಾತನಾಡಲು ಹೆಚ್ಚಿನ ಸಮಯ ಕಳೆಯುವ ಬದಲು ಒಂದಿಷ್ಟು ಓದಿನಲ್ಲಿ ಕಳೆದರೆ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುವುದು ಎಂದು ವೈದ್ಯ ಸಾಹಿತಿ ಡಾ| ಶಾಂತವೀರ ಬಿ. ಸುಂಕದ ತಿಳಿಸಿದರು.
ಇಲಕಲ್-ಚಿತ್ತರಗಿಯ ವಿಜಯ ಮಹಾಂತೇಶ್ವ ಸಂಸ್ಥಾನಮಠದ ಲಿಂ.ಪೂಜ್ಯ ಡಾ| ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ನಗರದ ಮಲ್ಲಿಕಾರ್ಜುನ ಖರ್ಗೆ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “ವ್ಯಸನಮುಕ್ತ ಸಮಾಜಕ್ಕೆ ಬಸವಾದಿ ಶರಣರ ಕೊಡುಗೆ’ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗದೀಶ ಮರಪಳ್ಳಿ ಮಾತನಾಡಿ, ಭಾರತ ಸಮಷ್ಟಿ ರಾಷ್ಟ್ರವಾಗಬೇಕಾದರೆ ಶರಣತತ್ವವನ್ನು ಸಂವಿಧಾನ ರೂಪವಾಗಿ ಪರಿವರ್ತನೆಯಾಗಬೇಕು. ಆರ್ಥಿಕ ಸಮಾನತೆಗೆ ಕಾಯಕ ಮತ್ತು ದಾಸೋಹ ಎಂಬ ಎರಡು ಮಹತ್ವದ ಸೂತ್ರಗಳನ್ನು ಕಡ್ಡಾಯಗೊಳಿಸಬೇಕು ಎಂದರು.
ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ| ಕುಪೇಂದ್ರ ಪಾಟೀಲ ಮಾತನಾಡಿ, ಲಿಂ| ಮಹಾಂತಪ್ಪರವರು ಬಸವಾದಿ ಶರಣರ ತತ್ವಗಳಂತೆ ನಡೆದುಕೊಂಡವರು. ತಮ್ಮ ಮಹಾಂತ ಜೋಳಿಗೆಯ ಮೂಲಕ ಸಾವಿರಾರು ವ್ಯಸನಿಗಳನ್ನು ಸನ್ಮಾರ್ಗಕ್ಕೆ ತಂದರು ಎಂದರು.
ಮಹಾತ್ಮಾ ಜ್ಯೋತಿಭಾಫುಲೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಕೋಡ್ಲಾ, ಜಿ.ಪಂ. ಮಾಜಿ ಸದಸ್ಯೆ ಜಯಶ್ರೀ ಅಶೋಕ ಸಾವಳೇಶ್ವರ, ಜಗನ್ನಾಥ ಲಗಶೆಟ್ಟಿ, ಎಸ್.ಬಿ. ಸಾಗರ, ಬಿ.ಎಸ್. ಮಾಲಿಪಾಟೀಲ, ಬಿ.ವಿ. ಮಾಲೆ, ಆರ್.ಆರ್
.ಹಿರೇಮಠ, ನೀಲಕಂಠ ಕಣ್ಣಿ, ಬಕ್ಕಪ್ಪ ಕಳಸ್ಕರ್, ಶಿವರಾಜ ಅಂಡಗಿ, ಎಸ್.ಎಂ. ಪಟ್ಟಣಕರ, ಶಿವಾನಂದ ಮಠಪತಿ, ಶ್ರೀಕಾಂತ ಪಾಟೀಲ ತಿಳಗೂಳ, ಸತೀಶ ಸಜ್ಜನ, ನಾಗರಾಜ ಕಾಮಾ ಹಾಜರಿದ್ದರು. ಕಾಲೇಜನ ಪ್ರಾಚಾರ್ಯೆ
ನಿರ್ಮಲಾ ಲದ್ದಿಮಠ ಅಧ್ಯಕ್ಷತೆ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ