ಬೆಣ್ಣೆತೊರಾ ಭರ್ತಿ: ಗ್ರಾಮಗಳಿಗೆ ಭೀತಿ
Team Udayavani, Jun 14, 2017, 5:39 PM IST
ಕಲಬುರಗಿ: ಕಳೆದ ವರ್ಷ ಉತ್ತಮ ಮಳೆಯಾಗಿ ಬೇಸಿಗೆಯಲ್ಲೂ ಶೇ. 70ರಷ್ಟು ಖಾಲಿಯಾಗಿದ್ದ ಜಿಲ್ಲೆಯ ಬೆಣ್ಣೆತೊರಾ ಜಲಾಶಯ ಕಳೆದ ನಾಲ್ಕು ದಿನಗಳಿಂದ ಸುರಿದ ಮಳೆಗೆ ಭರ್ತಿಯಾಗಿದ್ದು, ಹೆಚ್ಚುವರಿಯಾಗಿ ಬರುತ್ತಿರುವ ನೀರನ್ನು ಗೇಟ್ಗಳ ಮುಖಾಂತರ ಹರಿಬಿಡಲಾಗುತ್ತಿದೆ.
ಬೆಣ್ಣೆತೊರಾ ಜಲಾಶಯ ಸಂಪೂರ್ಣ ಭರ್ತಿ ಆಗಿದ್ದರಿಂದ ಏಳು ಗೇಟುಗಳ ಮೂಲಕ 3000 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಕಾಗಿಣಾ ನದಿಗೆ ಹೆಚ್ಚುವರಿ ನೀರು ಹೊರಗೆ ಬಿಡುತ್ತಿರುವುದರಿಂದ ಚಿತ್ತಾಪುರ, ಸೇಡಂ ತಾಲೂಕು ಹಾಗೂ ಗ್ರಾಮೀಣ ಭಾಗದ 15ಕ್ಕೂ ಹೆಚ್ಚು ಗ್ರಾಮಗಳಿಗೆ ಜಲಾವೃತವಾಗುವ ಭೀತಿ ಎದುರಾಗುವ ಲಕ್ಷಣಗಳು ಕಂಡು ಬರುತ್ತಿದೆ.
ಈಗಾಗಲೇ ಈ ಗ್ರಾಮಸ್ಥರಿಗೆ ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ಬೆಣ್ಣೆತೊರಾ ಜಲಾಶಯದ ಗರಿಷ್ಠ ಮಟ್ಟ 438.89 ಮೀಟರ್ ಇದ್ದು, 438.72 ಮೀಟರ್ ನೀರಿನ ಮಟ್ಟ ಹೆಚ್ಚಳವಾಗಿದೆ. 6016 ಕ್ಯೂಸೆಕ್ ಒಳ ಹರಿವಿನ ಪ್ರಮಾಣವಿದ್ದು, ಸುಮಾರು 2330 ಕ್ಯೂಸೆಕ್ ಹೆಚ್ಚುವರಿ ನೀರು ಹೊರಗೆ ಬಿಡಲಾಗುತ್ತಿದೆ.
ಈ ಪ್ರಮಾಣ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಜಲಾಶಯದಲ್ಲಿ 5.13 ಟಿಎಂಸಿ ಅಡಿ ನೀರಿನ ಗರಿಷ್ಠ ಸಂಗ್ರಹ ಸಾಮರ್ಥ್ಯವಿದ್ದು, ಈಗಾಗಲೇ 4.80 ಟಿಎಂಸಿ ಅಡಿ ನೀರು ಸಂಗ್ರಹಗೊಂಡಿದೆ. ನೀರಾವರಿ ಇಲಾಖೆ ಚೀಫ್ ಇಂಜಿನಿಯರ್ ಜಗನ್ನಾಥ ಹಲಿಂಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್ ತುರ್ತು ಸಭೆ ನಡೆಸಿ, ನದಿ ತಟದಲ್ಲಿರುವ ಗ್ರಾಮಸ್ಥರ ಸುರಕ್ಷತೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಜಲಾಶಯದ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರಿಗೆ ನದಿಗಳ ದಡದಲ್ಲಿ ಹಾಗೂ ಅಕ್ಕಪಕ್ಕದಲ್ಲಿ ಜನ ಹಾಗೂ ಜಾನುವಾರುಗಳು ಸಂಚರಿಸದಂತೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲೆಯಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಬಹುತೇಕ ಜಲಾಶಯಗಳು ಭರ್ತಿ ಆಗುತ್ತಿವೆ.
ಗಂಡೋರಿ ನಾಲಾ ಜಲಾಶಯವು 467.00 ಮೀಟರ್ ಗರಿಷ್ಠ ನೀರಿನ ಸಂಗ್ರಹ ಹೊಂದಿದ್ದು, ಈಗಾಗಲೇ 465.70 ಮೀಟರ್ ಭರ್ತಿ ಆಗಿದೆ. 2245.37 ಕ್ಯೂಸೆಕ್ಸ್ ಒಳ ಹರಿವು ಇದೆ. ಆಳಂದ ತಾಲೂಕಿನ ಅಮರ್ಜಾ ಜಲಾಶಯವು 461.51 ಮೀಟರ್ ಗರಿಷ್ಠ ನೀರಿನ ಪ್ರಮಾಣದ ಸಂಗ್ರಹ ಇದ್ದು, 459.61 ಮೀಟರ್ ಭರ್ತಿ ಆಗಿದೆ. 1775.45 ಕ್ಯೂಸೆಕ್ಸ್ ಒಳಹರಿವಿನ ಪ್ರಮಾಣವಿದೆ.
ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿಯ ಜಲಾಶಯವು 493.16 ಮೀಟರ್ ಗರಿಷ್ಠ ಪ್ರಮಾಣದ ನೀರಿನ ಸಂಗ್ರಹ ಹೊಂದಿದ್ದು, ಈಗಾಗಲೇ 485.93 ಮೀಟರ್ ಭರ್ತಿಯಾಗಿದೆ. ಕಾರಂಜಾ ಜಲಾಶಯದ ಗರಿಷ್ಠ ಮಟ್ಟ 584.15 ಮೀಟರ್ ಇದ್ದು, ಈಗಾಗಲೇ 582.04 ಮೀಟರ್ ಭರ್ತಿ ಆಗಿದೆ. 544 ಕ್ಯೂಸೆಕ್ ಒಳಹರಿವು ಇದೆ. ಮಂಗಳವಾರ ಮಳೆ ಸುರಿದಿಲ್ಲ. ಆದರೆ ಮತ್ತೆ ಮಳೆ ಮುಂದುವರಿದರೆ ಪ್ರವಾಹ ಭೀತಿ ಎದುರಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ
Kalaburagi: ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಪ್ರಕರಣ: ಶೀಘ್ರ ಇನ್ನುಳಿದ ಆರೋಪಿಗಳ ಬಂಧನ
ಎಂಎಲ್ಸಿ ಚುನಾವಣೆ: ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾದ ಬಿಜೆಪಿ ನಾಯಕ…
Kalburgi: ಕರೆಂಟ್ ಶಾಕ್ ಪ್ರಕರಣ;ಖಂಡಿಸಿ ಹಿಂದೂ ಜಾಗೃತಿ ಸೇನೆಯಿಂದ ಸರಕಾರದ ಪ್ರತಿಕೃತಿ ದಹನ
Kalaburagi: ಹಣಕ್ಕಾಗಿ ಮೂವರ ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಶಾಕ್!: 7 ಮಂದಿ ಸೆರೆ