ಕ್ರಿಕೆಟ್ ಪಂದ್ಯ: ಮೈಸೂರಿಗೆ ಗುವಿವಿ ತಂಡ ಪ್ರಯಣ
Team Udayavani, Jan 12, 2019, 5:47 AM IST
ಕಲಬುರಗಿ: ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಗುಲಬರ್ಗಾ ವಿಶ್ವವಿದ್ಯಾಲಯದ ಕ್ರಿಕೆಟ್ ತಂಡವು ಶುಕ್ರವಾರ ಮೈಸೂರಿಗೆ ಪ್ರಯಾಣ ಬೆಳೆಸಿತು.
ಜ.14ರಿಂದ 24ರ ವರೆಗೆ ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಕ್ರಿಕೆಟ್ ಪಂದ್ಯ ನಡೆಯಲಿದೆ. ಗುವಿವಿ ತಂಡದ ನಾಯಕ ನರಸಿಂಹ, ಸಹ ಆಟಗಾರರಾದ ಮೊಶಿನ್ ಪಟೇಲ, ಅಪ್ಪಾಶಾ ಶಿವಶರಣ, ಅಭಿಷೇಕ, ಅಬ್ದುಲ್ ಆರ್.ಎಸ್., ಕೇದಾರನಾಥ, ಮಯೂರ.ಎಂ.ಪಟೇಲ, ಅಕ್ಷಯ, ಭರತಕುಮಾರ ರೆಡ್ಡಿ, ಶೀತಲಕುಮಾರ, ಆಶ್ರಯಕುಮಾರ, ಈರಣ್ಣ, ಸತ್ಯಂ, ಸೋಮಶೇಖರ, ಸಿದ್ದರಾಮ ಮತ್ತು ತಿಕೋಲೆ ದಿನೇಶ, ತಂಡದ ವ್ಯವಸ್ಥಾಪಕ ಹಾಗೂ ತರಬೇತುದಾರರಾಗಿ ಯಾದಗಿರಿಯ ಸರ್ಕಾರಿ ಮಹಾವಿದ್ಯಾಲಯದ ದೈಹಿಕ ಶಿಕ್ಷಕ ಡಾ| ಪ್ರಸಾದ.ಬಿ, ತೆರಳಿದರು.
ತಂಡದ ಯಶಸ್ಸಿಗೆ ಕುಲಸಚಿವ ಪ್ರೊ| ಸಿ. ಸೋಮಶೇಖರ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ| ಕೆ. ವಿಜಯಕುಮಾರ ಮತ್ತು ಕಾನೂನು ನಿಕಾಯದ ಡೀನ್ ಪ್ರೊ| ದೇವಿದಾಸ ಮಾಲೆ, ಸ್ನಾತಕೋತ್ತರ ದೈಹಿಕ ಶಿಕ್ಷಣ ಸಂಯೋಜಕ ಡಾ| ಎಚ್.ಎಸ್. ಜಂಗೆ, ವಿವಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ| ಎನ್.ಜಿ. ಕಣ್ಣೂರ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಎಂ.ಎಸ್. ಪಾಸೋಡಿ ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ