ಮುಲ್ಲಾಮಾರಿ-ಚಂದ್ರಂಪಳ್ಳಿ ಒಳಹರಿವು ಹೆಚ್ಚಳ
Team Udayavani, Jul 14, 2021, 7:31 PM IST
ಚಿಂಚೋಳಿ: ತಾಲೂಕಿನಲ್ಲಿ ಕಳೆದ ಮೂರು ದಿವಸದಿಂದ ಎಡೆಬಿಡದೇ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.
ಕೆಳದಂಡೆ ಮುಲ್ಲಾಮಾರಿ ಜಲಾಶಯ ಮತ್ತು ಚಂದ್ರಂಪಳ್ಳಿ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗುತ್ತಿದ್ದು, ಮುಲ್ಲಾಮಾರಿ ನದಿಗೆ ಹೆಚ್ಚುವರಿ ಹರಿ ಬಿಡಲಾಗುತ್ತಿದೆ. ಕೆಳದಂಡೆ ಮುಲ್ಲಾಮಾರಿ ಜಲಾಶಯ ಅಚ್ಚುಕಟ್ಟು ಪ್ರದೇಶದ ಚೆನ್ನೂರ, ಗಡಿಲಿಂಗದಳ್ಳಿ, ಐನಾಪುರ, ಕೊಟಗಾ, ಭೂಯ್ನಾರ, ಚೆಂಗಟಾ ಗ್ರಾಮಗಳ ಸುತ್ತಮುತ್ತಲಿನ ತಾಂಡಾಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಜಲಾಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಒಳ ಹರಿವು 359ಕ್ಯೂಸೆಕ್ ಇದ್ದು, ಹೊರ ಹರಿವು 900 ಕ್ಯೂಸೆಕ್ ಇದೆ.
ಮಂಗಳವಾರ ದಿನವಿಡಿ ಮಳೆ ಆಗುತ್ತಿರುವುದರಿಂದ ಮಳೆ ನೀರಿನ ಸಂಗ್ರಹ ನೋಡಿ ಮುಲ್ಲಾಮಾರಿ ನದಿಗೆ ರಾತ್ರಿ 9ಗಂಟೆ ನಂತರ ನೀರು ಹರಿ ಬಿಡಲಾಗುವುದು ಎಂದು ಯೋಜನೆ ಎಇಇ ಹಣಮಂತರಾವ್ ಪೂಜಾರಿ ತಿಳಿಸಿದ್ದಾರೆ. ಚಂದ್ರಂಪಳ್ಳಿ ಜಲಾಶಯ ಅಚ್ಚುಕಟ್ಟು ಪ್ರದೇಶದ ಕುಂಚಾವರಂ ವನ್ಯಜೀವಿ ಧಾಮದ ಸಂಗಾಪುರ, ಗೊಟಗೇರಪಳ್ಳಿ, ಕುಸರಂಪಳ್ಳಿ, ಗೌಸಾಬಾದ್, ವೆಂಕಟಾಪುರ, ಮಾಣಿಕಪುರ ಗ್ರಾಮಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಚಂದ್ರಂಪಳ್ಳಿ ಜಲಾಶಯದಲ್ಲಿ ಒಟ್ಟು 1.208 ಟಿಎಂಸಿ ಅಡಿ ಪೈಕಿ 0.662 ಟಿಎಂಸಿ ಅಡಿ (ಶೇ.54.80) ನೀರು ಸಂಗ್ರಹವಾಗಿದೆ. ಶೇ. 80ರಷ್ಟು ನೀರು ಸಂಗ್ರಹವಾದರೆ ಗೇಟಿನ ಮೂಲಕ ಹರಿ ಬಿಡಲಾಗುವುದು ಎಂದು ಎಇಇ ವೈಜನಾಥ ಅಲ್ಲೂರೆ ತಿಳಿಸಿದ್ದಾರೆ.
ಕುಂಚಾವರಂ ಗಡಿಪ್ರದೇಶದ ಧರ್ಮಸಾಗರ ತಾಂಡಾದ ಬಳಿ ನಾಲಾ ತುಂಬಿ ಹರಿಯುತ್ತಿರುವುದರಿಂದ ಕುರಿಗಾಹಿ ತುಂಬಿ ಹರಿಯುವ ನಾಲಾ ನೀರು ನೋಡಿ ಭಯಗೊಂಡು ದಡದಲ್ಲಿಯೇ ಕುಳಿತಿದ್ದಾಗ ತಾಂಡಾದ ಜನರು 50 ಕುರಿಗಳು ಮತ್ತು ಇಬ್ಬರು ಕುರಿಗಾಹಿಗಳ ಕೈ ಹಿಡಿದು ದಾಟಿಸಿದ್ದಾರೆ ಎಂದು ತಾಂಡಾದ ಸಂತೋಷ ಚವ್ಹಾಣ ತಿಳಿಸಿದ್ದಾರೆ. ಗುಡುಗು ಮಿಂಚಿನ ಆರ್ಭಟದಿಂದ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಸಣ್ಣ ನೀರಾವರಿ ಕೆರೆಗಳಿಗೆ ನೀರು ಹರಿದು ಬರುತ್ತಿದೆ.
ಒಟ್ಟು 17 ಕೆರೆಗಳಲ್ಲಿ ಎರಡರಿಂದ ಮೂರು ಅಡಿ ನೀರು ಹರಿದು ಬರುತ್ತಿದೆ. ಸಾಲೇಬೀರನಳ್ಳಿ, ತುಮಕುಂಟಾ, ಹಸರಗುಂಡಗಿ, ಕೋಡ್ಲಿ, ಐನಾಪುರ, ಮುಕರಂಬಾ, ಹುಲಸಗೂಡ, ಚಂದನಕೇರಾ, ಧರ್ಮಸಾಗರ, ಅಂತಾವರಂ ಕೆರೆಗಳಿಗೆ ಮಳೆ ನೀರು ಹರಿದು ಬಂದಿದೆ.
ಕಳೆದ ವರ್ಷ ಹೆಚ್ಚಿನ ಮಳೆ ಆಗಿದ್ದರಿಂದ ನಾಗಾಇದಲಾಯಿ, ಹೂಡದಳ್ಳಿ ಕೆರೆಗಳು ಸಂಪೂರ್ಣ ಒಡೆದಿವೆ. ದೊಟಿಕೋಳ ಕೆರೆಗೆ ಹಾನಿ ಆಗಿರುವುದರಿಂದ ಕೆರೆಯಲ್ಲಿ ನೀರಿನ ಸಂಗ್ರಹಣೆ ಮಾಡುತ್ತಿಲ್ಲ ಎಂದು ಎಇಇ ಶಿವಶರಣಪ್ಪ ಕೇಶ್ವಾರ ತಿಳಿಸಿದ್ದಾರೆ. ತಾಲೂಕಿನ ಸುಲೇಪೇಟ, ಕೋಡ್ಲಿ, ಐನಾಪುರ, ಚಿಮ್ಮನಚೋಡ, ನಿಡಗುಂದಾ, ಕುಂಚಾವರಂ, ಮಿರಿಯಾಣ, ಮೋಘಾ, ಕೊಡ್ಲಿ, ಚಂದನಕೇರಾ, ಚಿಂಚೋಳಿಯಲ್ಲಿ ಮಂಗಳವಾರ ದಿನವಿಡಿ ಮಳೆ ಆಗಿದ್ದರಿಂದ ಸಣ್ಣ ನಾಲಾಗಳು ತುಂಬಿ ಹರಿಯುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್ ಖರ್ಗೆ
Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್ ಏಕಾಂಗಿ ಫೈಟ್
DK Sivakumar: ಪ್ರಜ್ವಲ್ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ
Prajwal Revanna: ಪ್ರಜ್ವಲ್ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ
Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ
Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ
Met Gala 2024: ಇವೆಂಟ್ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್ ಫೇಕ್ ಫೋಟೋ ವೈರಲ್
BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ